ದೇಶದ ಹೆಮ್ಮೆಯ ಕ್ರೀಡಾಪಟುಗಳಲ್ಲಿ ಮೊದಲನೇ ಹೆಸರು ವಿಶ್ವ ಕಂಡ ಶ್ರೇಷ್ಠ ಹಾಕಿ ಪಟು ಮೇಜರ್ ಧ್ಯಾನ್ ಚಂದ್ ಅವರದ್ದು. ಭಾರತದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ಶ್ರೇಯಸ್ಸು ಧ್ಯಾನ್ ಚಂದ್ಗೆ ಸಲ್ಲುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲೇ ಭಾರತಕ್ಕೆ ಒಂದಲ್ಲ ಎರಡಲ್ಲ ಮೂರು ಒಲಿಂಫಿಕ್ಸ್ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದರು.
ಐಪಿಎಲ್ನಿಂದ ಸುರೇಶ್ ರೈನಾ ಹಿಂದೆ ಸರಿದಿದ್ದಕ್ಕೆ ಅಸಲಿ ಕಾರಣ ಬಹಿರಂಗ!
ಸ್ವಾತಂತ್ರ್ಯ ಪಡೆದು ಏಳು ದಶಕದ ಬಳಿಕವೂ ಒಲಿಂಪಿಕ್ಸ್ನಲ್ಲಿ ಪಡೆಯುವ ಬೆರಳೆಣಿಕೆಯ ಬೆಳ್ಳಿ ಅಥವಾ ಕಂಚಿನ ಪದಕವನ್ನು ಮುಂದಿನ ಒಲಿಂಪಿಕ್ಸ್ಗೂ ನೆನಪಿಸಿಕೊಂಡು ಸಂಭ್ರಮಿಸುತ್ತೇವೆ. ಆದರೆ ಧ್ಯಾನ್ಚಂದ್ ಪಡೆ ಸತತವಾಗಿ ಒಲಿಂಫಿಕ್ಸ್ನಲ್ಲಿ ಚಿನ್ನದ ಪದಕವನ್ನು ಗೆದ್ದು ತೋರಿಸಿತ್ತು.
ಹತ್ರ ಬಂದ್ರೆ ಅಲರಾಮ್: ಯುಎಇ ಐಪಿಎಲ್ನ ಕುತೂಹಲಕಾರಿ ಸಂಗತಿಗಳಿವು!
ಧ್ಯಾನ್ ಚಂದ್ ಜನಿಸಿದ್ದು ಆಗಸ್ಟ್ 29, 1905ರಲ್ಲಿ. ಸ್ಥಳ ಉತ್ತರ ಪ್ರದೇಶದ ಪ್ರಯಾಗ. ಅವರ ತಂದೆ ಭಾರತೀಯ ಬ್ರಿಟಿಷ್ ಸೈನ್ಯದಲ್ಲಿ ಹವಾಲ್ದಾರರಾಗಿದ್ದರು. ಶಾಲೆಯಿಂದ ಬಹುಬೇಗ ಹೊರನೆಡೆದ ಧ್ಯಾನ್ ಚಂದ್ ತಮ್ಮ ಹದಿನಾರನೇ ವಯಸ್ಸಿಗೇ ಸೈನ್ಯಕ್ಕೆ ಸೇರಿದರು. ಈ ಮೂಲಕ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಹಾಕಿಯಲ್ಲಿನ ಪ್ರಾವಿಣ್ಯತೆ ಹಾಕಿ ಅಂಗಳಕ್ಕೆ ಕರೆತಂದಿತ್ತು.
ಸಿಕ್ಸ್ ಚಚ್ಚಿ ತನ್ನ ಕಾರಿನ ಗಾಜನ್ನೇ ಪುಡಿ ಪುಡಿ ಮಾಡಿದ ಕೆವಿನ್ ಓಬ್ರಿಯನ್!
ಬರ್ಲಿನ್ ಒಲಿಂಪಿಕ್ಸ್ನಲ್ಲಿ ಸ್ವತಃ ಹಿಟ್ಲರ್ ಧ್ಯಾನ್ ಚಂದ್ ಆಟಕ್ಕೆ ಮನಸೋತು ಉನ್ನತ ಹುದ್ದೆಯ ಆಮಿಷವನ್ನೊಡ್ಡಿ ತಮ್ಮ ಜರ್ಮನಿ ಪರವಾಗಿ ಸೇವೆ ಸಲ್ಲಿಸಲು ಮನವಿ ಮಾಡಿಕೊಂಡಿದ್ದರಂತೆ. ಆದರೆ ಈ ಮನವಿಯನ್ನು ಹಿಟ್ಲರ್ ನಯವಾಗಿ ತಿರಸ್ಕರಿಸಿ ದೇಶ ಪ್ರೇಮವನ್ನು ಮೆರೆದಿದ್ದರು.
ಬಾಬರ್ ಅಝಾಮ್ ವಿರಾಟ್ ಕೊಹ್ಲಿನ ನೋಡಿ ಕಲೀಬೇಕು: ರಮೀಝ್ ರಾಜಾ
ದೇಶ ಕಂಡ ಹೆಮ್ಮೆಯ ಕ್ರೀಡಾಪಟು ಧ್ಯಾನ್ ಚಂದ್ ಅವರ ಹುಟ್ಟಿದ ದಿನವನ್ನು ಭಾರತದಲ್ಲಿ ಕ್ರೀಡಾದಿನನ್ನಾಗಿ ಆಚರಿಸಲಾಗುತ್ತದೆ. ಸ್ವಾತಂತ್ರ್ಯೋತ್ಸವದ ಈ ಸಂಭ್ರಮದಲ್ಲಿ ದೇಶದ ಹೆಮ್ಮೆಯ ಕ್ರೀಡಾಪಟುವಿಗೊಂದು ಸಲಾಮ್ ಹೇಳೋಣ