ಇರಾನ್ ತಂಡವನ್ನು ಸದೆಬಡಿದ ಭಾರತ ಕಬಡ್ಡಿ ಚಾಂಪಿಯನ್
ಅಹ್ಮದಾಬಾದ್, ಅಕ್ಟೋಬರ್ 22 : ಕಬಡ್ಡಿ ವಿಶ್ವಕಪ್ ನಲ್ಲಿ ಭಾರತ ಹ್ಯಾಟ್ರಿಕ್ ಸಾಧಿಸಿದೆ. ಬಲಿಷ್ಠ ತಂಡವಾದ ಇರಾನ್ ಅನ್ನು ಸದೆಬಡಿದು ಕಬಡ್ಡಿ ವಿಶ್ವಕಪ್ಪನ್ನು ಮೂರನೇ ಬಾರಿ ಭಾರತ ಎತ್ತಿಹಿಡಿದಿದೆ.
ವಿಶ್ವ ಕಬಡ್ಡಿಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿರುವ ಭಾರತ, ಮಧ್ಯದಲ್ಲಿ ಹಿನ್ನಡೆ ಕಂಡರೂ ಅದ್ಭುತವಾಗಿ ಚೇತರಿಸಿಕೊಂಡು 38-29 ಅಂಕಗಳಿಂದ ಇರಾನ್ ತಂಡದ ವಿರುದ್ಧ ಜಯಭೇರಿ ಬಾರಿಸಿದೆ.
ಭಾರತಕ್ಕೆ 12 ಅಂಕಗಳನ್ನು ಗಳಿಸಿಕೊಟ್ಟು ಅಜಯ್ ಠಾಕೂರ್ ಅವರು ಈ ಫೈನಲ್ ಪಂದ್ಯದ ಸ್ಟಾರ್ ಪರ್ಫಾರ್ಮರ್ ಆಗಿದ್ದಾರೆ. ಮಧ್ಯಾಂತರದಲ್ಲಿ ಇರಾನ್ 18-13 ಅಂಕಗಳ ಅಂತರದಿಂದ ಮುನ್ನಡೆ ಸಾಧಿಸಿ ಅಚ್ಚರಿ ಮೂಡಿಸಿತ್ತು.

ಆದರೆ, ಅಷ್ಟೇ ಅದ್ಭುತವಾಗಿ ಮಧ್ಯಾಂತರದ ನಂತರ ಆಡಿದ ಅಜಯ್ ಠಾಕೂರ್ ಭಾರತವನ್ನು ಸೋಲಿನ ದವಡೆಯಿಂದ ಪಾರು ಮಾಡಿದರಲ್ಲದೆ, ಜಯ ತಂದುಕೊಡುವಲ್ಲಿ ಯಶಸ್ವಿಯಾದರು.
"ಕಬಡ್ಡಿಯಲ್ಲಿ ಭಾರತ ಯಾವತ್ತಿದ್ದರೂ ನಂಬರ್ 1. ಈ ಗೆಲುವು ನನಗೆ ವೈಯಕ್ತಿಕವಾದಿ ಭಾರೀ ಸಂತಸ ತಂದುಕೊಟ್ಟಿದೆ" ಎಂದು ಅಜಯ್ ಠಾಕೂರ್ ವಿಶ್ವಕಪ್ ಎತ್ತಿಹಿಡಿದ ನಂತರ ಅನಿಸಿಕೆಗಳನ್ನು ಹಂಚಿಕೊಂಡರು.
Story first published: Wednesday, January 3, 2018, 10:15 [IST]
Other articles published on Jan 3, 2018
Read in English: India win Kabaddi World Cup 2016
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications