
ಪುಣೆ, ನವೆಂಬರ್ 27: ಪುಣೆಯ ಶ್ರೀ ಶಿವ್ ಛತ್ರಪತಿ ರಸ್ಲಿಂಗ್ ಹಾಲ್ನಲ್ಲಿ ಸೋಮವಾರ (ನವೆಂಬರ್ 26) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಯುಪಿ ಯೋಧ ವಿರುದ್ಧ ಬೆಂಗಳೂರು ಬುಲ್ಸ್ 37-27ರ ಗೆಲುವನ್ನಾಚರಿಸಿದೆ. ಇದು ಬೆಂಗಳೂರಿಗೆ ಲಭಿಸಿದ 9ನೇ ಜಯ.
ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ 10, ರೋಹಿತ್ ಕುಮಾರ್ 7 ಅಂಕ ಸೇರಿಸಿ ತಂಡವನ್ನು ಗೆಲುವಿನತ್ತ ಎಳೆದು ತಂದರು. ಮಣೀಂದರ್ ಸಿಂಗ್ 5, ಕಾಶಿಲಿಂಗ್ ಅಡಕೆ ಮತ್ತು ಅಮಿತ್ ಶಿಯೋರಾನ್ ತಲಾ 4 ಅಂಕ ಸೇರಿಸಿದ್ದೂ ಗೆಲುವಿನ ನೆಲೆಯಲ್ಲಿ ತಂಡಕ್ಕೆ ನೆರವಾಯ್ತು.
ಯುಪಿ ಯೋಧ ಪರ ಶ್ರೀಕಾಂತ್ ಜಾಧವ್ ಒಬ್ಬರೇ ಗಮನಾರ್ಹ ಹೋರಾಟ ನಡೆಸಿದರು. ಶ್ರೀಕಾಂತ್ ಭರ್ಜರಿ 12 ಅಂಕಗಳನ್ನು ತಂಡದ ಖಾತೆಗೆ ಸೇರಿಸಿದರು. ಆದರೆ ಗೆಲುವು ಬೆಂಗಳೂರಿನ ಪರ ವಾಲಿತು. ಈ ಪಂದ್ಯದ ಬಳಿಕ ಬೆಂಗಳೂರು 52 ಅಂಕಗಳೊಂದಿಗೆ ಅಂಕಪಟ್ಟಿಯ ಅಗ್ರ ಸ್ಥಾನದಲ್ಲೇ ಉಳಿದಿದೆ.