
ಅಜಯ್ ಠಾಕೂರ್ ವೈಫಲ್ಯ
ಸ್ಟಾರ್ ರೈಡರ್ ಅಜಯ್ ಠಾಕೂರ್ ಫೈನಲ್ ನಲ್ಲಿ ಮಂಕಾಗಿದ್ದು. ಕಳೆದ ಬಾರಿ ಪ್ರಶಸ್ತಿ ಪಂದ್ಯದಲ್ಲಿ ಜೈಪುರದ ಎದುರು ಎಡವಿದ್ದ ಮುಂಮೈ ಈ ಬಾರಿ ತನ್ನ ಪ್ರಶಸ್ತಿ ಹಸಿವನ್ನು ನೀಗಿಸಿಕೊಂಡಿತು. ಮಂಜಿತ್ ಚಿಲ್ಲರ್ ಸಹ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ.

ಪ್ರೇಕ್ಷಕರ ಗ್ಯಾಲರಿಯಲ್ಲಿ ಎಂಎಸ್ ಧೋನಿ
ಟೀಮ್ ಇಂಡಿಯಾ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಪಂದ್ಯವನ್ನು ವೀಕ್ಷಿಸಿದರು. ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಬೆಡಗಿಯರಾದ ಕತ್ರೀನಾ ಕೈಫ್ ಮತ್ತು ಆಲಿಯಾ ಭಟ್ ಹಾಜರಿದ್ದರು. ಅಭಿಷೇಕ್ ಬಚ್ಚನ್ ಮುಂಬೈ ತಂಡಕ್ಕೆ ಬೆಂಬಲವಾಗಿ ನಿಂತಿದ್ದರು.

ಬಲಿಷ್ಠ ಪ್ರದರ್ಶನಕ್ಕೆ ಸಂದ ಜಯ
ಯು ಮುಂಬಾ ತಂಡ ಪಂದ್ಯಾವಳಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿಕೊಂಡೇ ಬಂದಿತ್ತು. ಬೆಂಗಳೂರು ವಿರುದ್ಧ ಲೀಗ್ ಹಂತದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಫೈನಲ್ ನಲ್ಲಿಯೂ ಬೆಂಗಳೂರನ್ನು ಮತ್ತೊಮ್ಮೆ ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿತು.

3ನೇ ಸ್ಥಾನ ಪಡೆದುಕೊಂಡ ತೆಲುಗು ಟೈಟಾನ್ಸ್
ರಾಹುಲ್ ಚೌಧರಿ, ಪ್ರಶಾಂತ್ ರೈ ಪ್ರದರ್ಶನದ ಲಾಭ ಪಡೆದ ತೆಲುಗು ಟೈಟಾನ್ಸ್ ತಂಡ ಮೂರನೇ ಸ್ಥಾನವನ್ನು ತಮ್ಮದಾಗಿರಿಸಿಕೊಂಡಿತು. 34-26 ಅಂಕಗಳಿಂದ ಪಾಟ್ನಾ ಪೈರೆಟ್ಸ್ ತಂಡವನ್ನು ಸೋಲಿಸಿ 30 ಲಕ್ಷ ರು. ಬಹುಮಾನದ ಮೊತ್ತ ಗಳಿಸಿಕೊಂಡಿತು.


Click it and Unblock the Notifications