ರಾಜ್ಕೋಟ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಪರ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಯುವ ಕ್ರಿಕೆಟಿಗ ಸರ್ಫರಾಜ್ ಖಾನ್, ತಮ್ಮ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಗಳಿಸಿ ಗಮನ ಸೆಳೆದರು.
ಇದೇ ವೇಳೆ ಸರ್ಫರಾಜ್ ಖಾನ್ ಅವರ ತಂದೆ ಉದ್ದೇಶಿಸಿ ಭಾವನಾತ್ಮಕ ಟಿಪ್ಪಣಿಯೊಂದಿಗೆ, ಉದ್ಯಮಿ ಆನಂದ್ ಮಹೀಂದ್ರಾ ಅವರು ನೌಶಾದ್ ಖಾನ್ಗೆ ಹೊಸ ಥಾರ್ ಕಾರ್ ಅನ್ನು ಉಡುಗೊರೆಯಾಗಿ ನೀಡುವ ಹೆಬ್ಬಯಕೆ ವ್ಯಕ್ತಪಡಿಸಿದ್ದಾರೆ.

"ಸ್ಫೂರ್ತಿದಾಯಕ ಪೋಷಕನಾಗಿರುವುದಕ್ಕಾಗಿ, ನೌಶಾದ್ ಖಾನ್ ಅವರು ಥಾರ್ ಉಡುಗೊರೆಯನ್ನು ಸ್ವೀಕರಿಸಿದರೆ, ಅದು ನನ್ನ ಸೌಭಾಗ್ಯ ಮತ್ತು ಗೌರವವಾಗಿದೆ," ಎಂದು ತಮ್ಮ ಎಕ್ಸ್ (ಟ್ವಿಟ್ಟರ್) ಪೋಸ್ಟ್ನಲ್ಲಿ ಆನಂದ್ ಮಹೀಂದ್ರಾ ಹೇಳಿದ್ದಾರೆ.
ಗುರುವಾರ ರಾಜ್ಕೋಟ್ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸರ್ಫರಾಜ್ ಖಾನ್ ಅರ್ಧಶತಕ ಗಳಿಸುವ ಮೂಲಕ ದೊಡ್ಡ ಸುದ್ದಿಯಾದರು.
ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರಿಂದ ಸರ್ಫರಾಜ್ ಖಾನ್ ಟೆಸ್ಟ್ ಕ್ಯಾಪ್ ಅನ್ನು ಪಡೆದ ನಂತರ, ಅವರ ತಂದೆ ನೌಶಾದ್ ಖಾನ್ ಹೇಗೆ ಭಾವುಕರಾದರು ಎಂಬುದನ್ನು ತೋರಿಸಿರುವ ಬಿಸಿಸಿಐ ಪೋಸ್ಟ್ ಮಾಡಿದ ವಿಡಿಯೋವನ್ನು ಆನಂದ್ ಮಹೀಂದ್ರಾ ಮರುಹಂಚಿಕೊಂಡಿದ್ದಾರೆ.

ಸರ್ಫರಾಜ್ ಖಾನ್ ಕ್ಯಾಪ್ ಪಡೆದ ನಂತರ, ನನ್ನ ಆಲೋಚನೆಗಳು ಬದಲಾಗಿವೆ. ಹೀಗಾಗಿ ಕಷ್ಟಪಟ್ಟು ಕೆಲಸ ಮಾಡುವವರೆಲ್ಲರೂ ಸೂರ್ಯೋದಯವಾಗುತ್ತಿದ್ದಂತೆ ಕತ್ತಲು ಅದರ ಸಮಯಕ್ಕೆ ತಕ್ಕಂತೆ ಹಿಂದೆ ಹೋಗಲಿ,'' ಎಂದು ನೌಶಾದ್ ಖಾನ್ ಬಿಸಿಸಿಐ ಹಂಚಿಕೊಂಡ ವಿಡಿಯೋದಲ್ಲಿ ಹೇಳಿದ್ದಾರೆ.
"ಹಿಮ್ಮತ್ ನಹೀಂ ಚೋಡ್ನಾ, ಬಾಸ್! ಹಾರ್ಡ್ ವರ್ಕ್, ಧೈರ್ಯ, ತಾಳ್ಮೆ. ಮಗನಲ್ಲಿ ಸ್ಫೂರ್ತಿ ತುಂಬಲು ತಂದೆಗಿಂತ ಉತ್ತಮವಾದ ಗುಣಗಳು ಯಾವುವು? ಸ್ಫೂರ್ತಿದಾಯಕ ಪೋಷಕರಾಗಿದ್ದಕ್ಕಾಗಿ, ನೌಶಾದ್ ಖಾನ್ ಅವರು ಥಾರ್ ಉಡುಗೊರೆಯನ್ನು ಸ್ವೀಕರಿಸಿದರೆ, ಅದು ನನ್ನ ಸೌಭಾಗ್ಯ ಮತ್ತು ಗೌರವವಾಗಿರುತ್ತದೆ," ಎಂದು ಆನಂದ್ ಮಹೀಂದ್ರಾ ಬರೆದುಕೊಂಡಿದ್ದಾರೆ.
ಈ ವೀಡಿಯೊ 22 ಸಾವಿರ ವೀಕ್ಷಣೆಗಳನ್ನು ಕಂಡಿದೆ ಮತ್ತು ನೂರಾರು ಪ್ರತಿಕ್ರಿಯೆಗಳನ್ನು ಗಳಿಸಿದೆ. ನೆಟ್ಟಿಗರು ಕಾಮೆಂಟ್ಗಳಲ್ಲಿ ಸರ್ಫರಾಜ್ ಖಾನ್ ಮತ್ತು ನೌಶಾದ್ ಖಾನ್ ಅವರನ್ನು ಅಭಿನಂದಿಸಿದ್ದಾರೆ.
ನೌಶಾದ್ ಖಾನ್ ಅವರು ಸ್ಟೇಡಿಯಂನ ಸ್ಟ್ಯಾಂಡ್ ಮತ್ತು ಕಾಮೆಂಟರಿ ಬಾಕ್ಸ್ನಲ್ಲಿ ಕಂಡುಬಂದರು. ಪಂದ್ಯದ ಆರಂಭಕ್ಕೂ ಮುನ್ನ ಭಾವನಾತ್ಮಕ ಸಮಾರಂಭದ ನಂತರ, ಇಂಗ್ಲೆಂಡ್ ವಿರುದ್ಧ ತಮ್ಮ ಮಗ ಬ್ಯಾಟ್ ಮಾಡುವುದನ್ನು ವೀಕ್ಷಿಸಿದರು.
ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಸರ್ಫರಾಜ್ ಖಾನ್ ಅವರಿಗೆ ರಾಷ್ಟ್ರೀಯ ತಂಡದ ಕ್ಯಾಪ್ ನೀಡಿದರು. ಯುವ ಕ್ರಿಕೆಟಿಗನ ಬಗ್ಗೆ ನಿಜವಾಗಿಯೂ ಹೆಮ್ಮೆಪಡುತ್ತೇನೆ ಎಂದು ಹೇಳಿದರು.