ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಗುಜರಾತ್ ಟೈಟನ್ಸ್ ತೊರೆದು ಹೊಸ ನಾಯಕರಾಗಿ ತಮ್ಮ ಹಳೆಯ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಸೇರಿದಾಗಿನಿಂದ ಜನಮನದಲ್ಲಿದ್ದಾರೆ.
ಇದೀಗ ಮತ್ತೊಂದು ವರದಿಯ ಪ್ರಕಾರ, ಹಾರ್ದಿಕ್ ಪಾಂಡ್ಯ ತಮ್ಮ ಮಲ-ಸಹೋದರ ವೈಭವ್ ಪಾಂಡ್ಯ ಅವರಿಂದ ಹಣಕಾಸು ದ್ರೋಹಕ್ಕೆ ಒಳಗಾದ ನಂತರ, ಮುಕೇಶ್ ಅಂಬಾನಿ ಕುಟುಂಬದಿಂದ ಆಶ್ರಯ ಮತ್ತು ಬೆಂಬಲವನ್ನು ಪಡೆಯಲು ಪ್ರಭಾವಿತರಾಗಿದ್ದರು.

ವೈಭವ್ ಪಾಂಡ್ಯ ಪಾಲುದಾರಿಕೆ ಸಂಸ್ಥೆಯಿಂದ ಸುಮಾರು 4.3 ಕೋಟಿ ರೂಪಾಯಿಗಳನ್ನು ತಿರುಗಿಸಿ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಸಹೋದರರಿಬ್ಬರಿಗೂ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ವೈಭವ್ ಪಾಂಡ್ಯರನ್ನು ಬಂಧಿಸಲಾಗಿದೆ.
ಈ ಘಟನೆ 2021ರಲ್ಲಿ ನಡೆದಿತ್ತು. ಕ್ರಿಕೆಟಿಗ ಪಾಂಡ್ಯ ಸಹೋದರರೊಂದಿಗೆ ಆರೋಪಿ ವೈಭವ್ ಪಾಲಿಮರ್ ವ್ಯಾಪಾರ ಕಂಪನಿಯನ್ನು ಪ್ರಾರಂಭಿಸಿದ್ದನು. ಈ ಕಂಪನಿಯಲ್ಲಿ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಅವರ ಪಾಲು ತಲಾ 40ರ ಪ್ರತಿಶತ ಮತ್ತು ವೈಭವ್ 20 ಪ್ರತಿಶತ ಪಾಲನ್ನು ಹೊಂದಿದ್ದರು.
37 ವರ್ಷದ ವೈಭವ್ ಪಾಂಡ್ಯ ಪಾಲುದಾರಿಕೆ ಸಂಸ್ಥೆಯಿಂದ ಸುಮಾರು 4.3 ಕೋಟಿ ರೂಪಾಯಿಗಳನ್ನು ಬೇರೆಡೆಗೆ ತಿರುಗಿಸಿದ ಆರೋಪ ಹೊಂದಿದ್ದು, ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಸಹೋದರರಿಗೆ ಭಾರೀ ನಷ್ಟವನ್ನುಂಟು ಮಾಡಿದರು.

ವೈಭವ್ ಪಾಂಡ್ಯ ವಿರುದ್ಧ ವಂಚನೆ ಮತ್ತು ನಕಲಿ ವ್ಯವಹಾರ ಆರೋಪವನ್ನು ಪಾಂಡ್ಯ ಸಹೋದರರು ಹೊರಿಸಿದ್ದಾರೆ ಎಂದು ಮುಂಬೈ ಪೊಲೀಸ್ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.
ಆದಾಗ್ಯೂ, ವೈಭವ್ ಪಾಂಡ್ಯ ಆ ಬಳಿಕ ಕ್ರಿಕೆಟಿಗ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಸಹೋದರರಿಗೆ ತಿಳಿಸದೆ, ಷರತ್ತುಗಳನ್ನು ಉಲ್ಲಂಘಿಸಿ ಅದೇ ವ್ಯಾಪಾರದಲ್ಲಿ ಮತ್ತೊಂದು ಸಂಸ್ಥೆಯನ್ನು ಸ್ಥಾಪಿಸಿದ್ದಾರೆ ಎಂಬ ಆರೋಪಗಳನ್ನು ಎದುರಿಸುತ್ತಿದ್ದಾರೆ.
"ಹಾರ್ದಿಕ್ ಪಾಂಡ್ಯ ಅತಿರಂಜಿತ ಜೀವನಶೈಲಿ, ಕೈಗಡಿಯಾರಗಳು, ಕಾರುಗಳು ಮತ್ತು ಬಹು ನಿವಾಸಗಳ ಮೇಲೆ ಅದ್ದೂರಿ ಖರ್ಚುಗಳಿಂದ ನಿರೂಪಿಸಲ್ಪಟ್ಟಿದೆ. ಅವನ ಮಲ-ಸಹೋದರನು ದಿಗ್ಭ್ರಮೆಗೊಳಿಸುವ ಮೊತ್ತದೊಂದಿಗೆ ಪರಾರಿಯಾದಾಗ ಕುಗ್ಗಿದನು. ಇದು ಬಹಿರಂಗಪಡಿಸಿದ ಮೊತ್ತದ ಹತ್ತು ಪಟ್ಟು ಹೆಚ್ಚು ಎಂದು ಅಂದಾಜಿಸಲಾಗಿದೆ," ಎಂದು ಒನ್ ಕ್ರಿಕೆಟ್ ವರದಿ ಮಾಡಿದೆ.
"ತೀವ್ರ ಸಂಕಷ್ಟದಲ್ಲಿ ಸಿಲುಕಿದ ಹಾರ್ದಿಕ್ ಪಾಂಡ್ಯ ಬೆಂಬಲ ಮತ್ತು ಆರ್ಥಿಕ ಸ್ಥಿರತೆಗಾಗಿ ಅಂಬಾನಿ ಕುಟುಂಬದತ್ತ ಮುಖ ಮಾಡಿದರು. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯಗೆ ಕೇವಲ ಜೀವಸೆಲೆ ಮಾತ್ರವಲ್ಲದೆ, ಆತನ ಛಿದ್ರಗೊಂಡ ಜೀವನವನ್ನು ಪುನರ್ನಿರ್ಮಿಸಲು ಅವಕಾಶವನ್ನೂ ನೀಡಿತು," ಎಂದು ವರದಿ ಮಾಡಲಾಗಿದೆ.
"ಆದಾಗ್ಯೂ, ಈ ಜೀವನಾವಕಾಶ ಒಂದು ಷರತ್ತಿನೊಂದಿಗೆ ಬಂದಿದ್ದು, ಅಂಬಾನಿ ಕುಟುಂಬದ ಒಡೆತನದ ಫ್ರಾಂಚೈಸಿಯಾದ ಮುಂಬೈ ಇಂಡಿಯನ್ಸ್ಗೆ ಹಾರ್ದಿಕ್ ಪಾಂಡ್ಯ ಅವರ ನಿಷ್ಠೆ," ಎಂದು ವರದಿಯಲ್ಲಿ ಹೇಳಲಾಗಿದೆ.
ಈಗಾಗಲೇ, ಮುಂಬೈ ಪೊಲೀಸ್ನ ಆರ್ಥಿಕ ಅಪರಾಧ ವಿಭಾಗವು ವೈಭವ್ ಪಾಂಡ್ಯ ಅವರನ್ನು ಬಂಧಿಸಿದೆ ಎಂದು ಮುಂಬೈ ಪೊಲೀಸರು ಖಚಿತಪಡಿಸಿದ್ದಾರೆ. ಆರೋಪಗಳ ಪ್ರಕಾರ, ವೈಭವ್ ತಮ್ಮ ಸ್ವಂತ ಲಾಭದ ಪಾಲನ್ನು ಅಕ್ರಮವಾಗಿ ಶೇ.20ರಿಂದ ಶೇ.33.3ಕ್ಕೆ ಏರಿಸಿದರು. ಇದು ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಅವರನ್ನು ಆರ್ಥಿಕವಾಗಿ ಮತ್ತಷ್ಟು ಹಾನಿಗೊಳಿಸಿತು ಎನ್ನಲಾಗಿದೆ.
ಕಂಪನಿಯಿಂದ ಬರುವ ಲಾಭವನ್ನು ಅದೇ ಅನುಪಾತದಲ್ಲಿ ಮೂರು ಭಾಗಗಳಾಗಿ ವಿಂಗಡಿಸಬೇಕು. ಕಂಪನಿಯ ಲಾಭದ ಹಣವನ್ನು ಪಾಂಡ್ಯ ಸಹೋದರರಿಗೆ ನೀಡುವ ಬದಲು, ಆರೋಪಿ ವೈಭವ್ ಪ್ರತ್ಯೇಕ ಕಂಪನಿಯನ್ನು ಸ್ಥಾಪಿಸಿ ಲಾಭದ ಮೊತ್ತವನ್ನು ಅದಕ್ಕೆ ವರ್ಗಾಯಿಸಿದ ಕಾರಣ, ಪಾಂಡ್ಯ ಸಹೋದರರು ಸುಮಾರು ತಲಾ 4.3 ಕೋಟಿ ನಷ್ಟ ಅನುಭವಿಸಿದ್ದಾರೆ.