
ಕ್ರೀಡಾ ವರದಿಗಾರರಿಗೆ ಕೃತಿ ಅರ್ಪಣೆ
ಕಾರ್ಯಕ್ರಮದಲ್ಲಿ ಭಾರತೀಯ ತಂಡದ ಮಾಜಿ ವಿಕೆಟ್ ಕೀಪರ್ ಸದಾನಂದ ವಿಶ್ವನಾಥ್ ಕಲಾವಿದರಾದ ಪ್ರಭಾಕರ ರಾವ್ಬೈಲ್ ಹೀಗೆ ಹತ್ತು-ಹಲವಾರು ಕಲಾವಿದರು, ವ್ಯಂಗ್ಯಚಿತ್ರಾಭಿಮಾನಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಇನ್ನೊಂದು ವಿಶೇಷವೆಂದರೆ, ಸತೀಶ್ ಆಚಾರ್ಯ ಅವರ ಕ್ರಿಕೆಟ್ ಕಾರ್ಟೂನ್ಗಳ ಪುಸ್ತಕ "ನಾನ್ ಸ್ಟ್ರೈಕರ್" ಪುಸ್ತಕ ಕೂಡ ಲೋಕಾರ್ಪಣೆಗೊಂಡಿತು. ಈ ಪುಸ್ತಕವನ್ನು ಕ್ರೀಡಾ ವರದಿ ಮಾಡುವ ಮಾಧ್ಯಮ ಮಿತ್ರರಿಗೆ ಅರ್ಪಣೆ ಮಾಡಿರುವುದು ಇದರ ಇನ್ನೊಂದು ವಿಶೇಷ.

ಆರ್ ಕೆ ಲಕ್ಷ್ಮಣ್ ಅವರಿಗೆ ಶ್ರದ್ಧಾಂಜಲಿ
ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ 'ಕಾರ್ಟೂನ್ ಭೀಷ್ಮ'' ಎಂದೇ ಕರೆಯಲ್ಪಡುವ ದಿ. ಆರ್.ಕೆ.ಲಕ್ಷ್ಮಣ್ ಅವರಿಗೆ ಶ್ರದ್ಧಾಂಜಲಿ ಅರ್ಪಣೆ ಕಾರ್ಯಕ್ರಮವೂ ನಡೆಯಿತು. ಸಾಹಿತಿ, ನಟ, ನಿರ್ದೇಶಕ, ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಗಿರೀಶ್ ಕಾರ್ನಾಡ್, ಎಸ್.ಜಿ.ವಾಸುದೇವ್ ಹಲವು ಮಂದಿ ಉಪಸ್ಥಿತರಿದ್ದು ಗೌರವ ಸಮರ್ಪಿಸಿದರು.

ಎಲ್ಲಿ ಸಿಗುತ್ತದೆ ನಾನ್ ಸ್ಟ್ರೈಕರ್ ಕೃತಿ
ಎಸ್ ಪಿಎಸ್ ಕ್ರಿಕ್ ಇನ್ಫೋದಲ್ಲಿ ಪ್ರಸಾರವಾಗುವ ಹಲವು ವ್ಯಂಗ್ಯಚಿತ್ರಗಳ ಸಂಗ್ರಹವೇ ನಾನ್ ಸ್ಟೈಕರ್ ಕೃತಿ. ಸತೀಶ್ ಆಚಾರ್ಯ ಅವರ "ನಾನ್ ಸ್ಟ್ರೈಕರ್" ಪುಸ್ತಕ ಇದೀಗ ಅಮೆಜಾನ್.ಇನ್ ನಲ್ಲಿ ಲಭ್ಯವಿದೆ. ಲಿಂಕ್ ಇಲ್ಲಿದೆ

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
* ಹೆಚ್ಚಿನ ಮಾಹಿತಿಗಾಗಿ ಸತೀಶ್ ಆಚಾರ್ಯ ಅವರ ಫೇಸ್ ಬುಕ್ ಪುಟ
* ಟ್ವಿಟ್ಟರ್ : @satishacharya
* ಬ್ಲಾಗ್: cartoonistsatish.blogspot.in
ಇಂಡಿಯನ್ ಕಾರ್ಟೂನ್ ಗ್ಯಾಲರಿ ತಲುಪುದು ಹೇಗೆ? :
ಬೆಂಗಳೂರಿನ ಎಂಜಿ ರಸ್ತೆಯ ಕಿಡ್ಸ್ ಕೆಂಪ್ ಬಳಿ ಇಂಡಿಯನ್ ಕಾರ್ಟೂನ್ ಗ್ಯಾಲರಿಯಿದೆ. ಟ್ರಿನಿಟಿ ವೃತ್ತದ ಸಮೀಪ ಬಸ್ ಇಳಿದರೆ ಸುಲಭವಾಗಿ ತಲುಪಬಹುದು.

ಹಲವು ಕಾರ್ಟೂನಿಸ್ಟ್ ಗಳ ಸಂಗಮ
ಹಲವು ಕಾರ್ಟೂನಿಸ್ಟ್ ಗಳ ಸಂಗಮಕ್ಕೆ ವೇದಿಕೆ ಒದಗಿಸಿದ ನಾನ್ ಸ್ಟ್ರೈಕರ್ ಪುಸ್ತಕ ಬಿಡುಗಡೆ ಸಮಾರಂಭ.


Click it and Unblock the Notifications











