ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಯೂಸುಫ್ ಪಠಾಣ್ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಡುವುದರೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಮೇ 2024ರಲ್ಲಿ ನಡೆಯಲಿರುವ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯೂಸುಫ್ ಪಠಾಣ್ ಟಿಎಂಸಿ ಪಕ್ಷದಿಂದ ಪಶ್ಚಿಮ ಬಂಗಾಳದ ಬೆರ್ಹಾಂಪೋರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ರಾಜಕೀಯ ಕ್ಷೇತ್ರಕ್ಕೆ ಸೇರುತ್ತಿದ್ದಂತೆ ವಿಭಿನ್ನ ಪಿಚ್ನಲ್ಲಿ ಬ್ಯಾಟಿಂಗ್ ಮಾಡಲು ಸಜ್ಜಾಗಿದ್ದಾರೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು ಸೇರಿದ ಯುಸೂಫ್ ಪಠಾಣ್ ಅವರ ಈ ನಿರ್ಧಾರವು ಪಕ್ಷದ ಕಾರ್ಯತಂತ್ರದೊಂದಿಗೆ ಕೈಜೋಡಿಸಲಿದ್ದಾರೆ. ಕೋಲ್ಕತ್ತಾದ ಐಕಾನಿಕ್ ಬ್ರಿಗೇಡ್ ಪರೇಡ್ ಮೈದಾನದಲ್ಲಿ 'ಜೊನೊಗೊರ್ಜೋನ್ ಸಭಾ' ಎಂದು ಕರೆಯಲ್ಪಡುವ 2024ರ ಚುನಾವಣಾ ಪ್ರಚಾರದ ಭವ್ಯ ಸಮಾರಂಭದಲ್ಲಿ ಪಕ್ಷ ಸೇರ್ಪಡೆಗೊಂಡರು.

ಇದೇ ವೇಳೆ ಟಿಎಂಸಿ ತನ್ನ 42 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಇದು ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಪ್ರಮುಖ ಲೋಕಸಭೆ ಚುನಾವಣಾ ಸ್ಪರ್ಧೆಗೆ ವೇದಿಕೆ ಸಿದ್ಧಪಡಿಸಿತು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಚುನಾವಣಾ ಪ್ರಚಾರ ಸಭೆಯನ್ನು ಮುನ್ನಡೆಸಿದರು.
ಟಿಎಂಸಿ ಪಕ್ಷದ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆರು ಲಕ್ಷ ಬೆಂಬಲಿಗರು ಮತ್ತು ವಿವಿಧ ಜಿಲ್ಲೆಗಳಿಂದ ಹಲವಾರು ಬ್ಲಾಕ್ ಮಟ್ಟದ ನಾಯಕರುಗಳ ಬೃಹತ್ ಸಮಾವೇಶದಲ್ಲಿ ಉದ್ದೇಶಿಸಿ ಮಾತನಾಡಿದರು.

ಟಿಎಂಸಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಕ್ರಿಕೆಟಿಗರ ಸಾಲಿಗೆ ಯೂಸುಫ್ ಪಠಾಣ್ ಸೇರಿದ್ದಾರೆ. ಈಗಾಗಲೇ ಭಾರತದ ಮಾಜಿ ಆಟಗಾರ ಮನೋಜ್ ತಿವಾರಿ, ಪ್ರಸ್ತುತ ಹೌರಾದ ಶಿಬ್ಪುರದಲ್ಲಿ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಗುಜರಾತ್ನ ಬರೋಡಾದಲ್ಲಿ ಜನಿಸಿದ ಯೂಸುಫ್ ಪಠಾಣ್ ಅವರು ರಾಜಕೀಯಕ್ಕೆ ಇತ್ತೀಚಿನ ಸೇರ್ಪಡೆಯಾಗಿ ಹೊರಹೊಮ್ಮಿದ್ದಾರೆ. ಟಿಎಂಸಿ ಪಕ್ಷದ ಅಡಿಯಲ್ಲಿ ರಾಜಕೀಯ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
ಯೂಸುಫ್ ಪಠಾಣ್ ಅವರ ಕೋಲ್ಕತ್ತಾ ಮತ್ತು ಪಶ್ಚಿಮ ಬಂಗಾಳದೊಂದಿಗಿನ ಒಡನಾಟವು ಆಳವಾಗಿ ಬೇರೂರಿದೆ. ಏಕೆಂದರೆ ಸ್ಫೋಟಕ ಆಲ್ರೌಂಡರ್ ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಪ್ರತಿನಿಧಿಸಿದ್ದರು.
ಕೋಲ್ಕತ್ತಾ ತಂಡದೊಂದಿಗಿನ ಅವರ ಆಟದ ಅವಧಿಯಲ್ಲಿ, ಫ್ರಾಂಚೈಸಿ ಕ್ರಮವಾಗಿ 2012 ಮತ್ತು 2014ರ ಎರಡು ಚಾಂಪಿಯನ್ಶಿಪ್ ಪ್ರಶಸ್ತಿಗಳನ್ನು ಗೆದ್ದಿದೆ.
ಮೇ 24, 2014ರಂದು ಯೂಸುಫ್ ಪಠಾಣ್ ಅವರು ಐಪಿಎಲ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಲ್ಲಿ ಒಂದಾದ ಕೇವಲ 15 ಎಸೆತಗಳಲ್ಲಿ ಎರಡನೇ-ವೇಗದ 50 ರನ್ ಗಳಿಸಿದ ಸಾಧನೆಯನ್ನು ಸಾಧಿಸಿದ ಇತಿಹಾಸವನ್ನು ನಿರ್ಮಿಸಿದ್ದಾರೆ.
ಯೂಸುಫ್ ಪಠಾಣ್ ಅವರ ಪ್ರದರ್ಶನಗಳು ಕೆಕೆಆರ್ ತಂಡವನ್ನು ಲೀಗ್ ಪಟ್ಟಿಯಲ್ಲಿ ಶ್ಲಾಘನೀಯ ಎರಡನೇ ಸ್ಥಾನಕ್ಕೆ ಮುನ್ನಡೆಸಿದವು. ಅಂತಿಮವಾಗಿ ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ ಆ ಋತುವಿನ ಪ್ರಶಸ್ತಿಯನ್ನು ಗೆದ್ದುಕೊಂಡಿತು.