
ಬೆಂಗಳೂರು: ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಕ್ರೀಡಾ ಪ್ರಶಸ್ತಿಗಳಿಗಾಗಿ ನಾಮನಿರ್ದೇಶನ/ಅರ್ಜಿಗಳನ್ನು ಆಹ್ವಾನಿಸಿದೆ. ರಾಜೀವ್ ಗಾಂಧಿ ಖೇಲ್ ರತ್ನಾ ಪ್ರಶಸ್ತಿ, ಅರ್ಜುನ್ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ, ಧ್ಯಾನ್ ಚಂದ್ ಪ್ರಶಸ್ತಿ, ರಾಷ್ಟ್ರೀಯ ಖೇಲ್ ರತ್ನ ಪುರಸ್ಕಾರ್ (ಆರ್.ಕೆ.ಪಿ.ಪಿ) ಮತ್ತು ಮೌಲಾನ ಅಬುಲ್ ಕಲಾಂ ಆಜಾದಿ (ಎಂ.ಎ.ಕೆ.ಎ) ಟ್ರೋಫಿಗಾಗಿ 2021ರ ಮೇ 19 ಮತ್ತು 20 ರಂದು ಅರ್ಜಿ ಆಹ್ವಾನಿಸಲಾಗಿತ್ತು.
ಸಚಿವಾಲಯದ ಜಾಲತಾಣ www.yas.nic.inನಲ್ಲಿ ಅಧಿಸೂಚನೆಯನ್ನು ಅಪ್ ಲೋಡ್ ಮಾಡಲಾಗಿದೆ. ನಾಮ ನಿರ್ದೇಶನಕ್ಕಾಗಿ ಕೊನೆಯ ದಿನಾಂಕ 2021 ರ ಜೂನ್ 21 ರಿಂದ 2021 ರ ಜೂನ್ 28 (ಸೋಮವಾರ) ಕ್ಕೆ ಮುಂದೂಡಲಾಗಿದೆ.
ಅರ್ಹ ಕ್ರೀಡಾಪಟುಗಳು/ ತರಬೇತುದಾರರು/ ಘಟಕಗಳು/ ವಿಶ್ವವಿದ್ಯಾಲಯಗಳಿಂದ ಅರ್ಜಿ/ ನಾಮ ನಿರ್ದೇಶನ ಆಹ್ವಾನಿಸಲಾಗಿದೆ. [email protected] ಅಥವಾ [email protected] ಈ ವಿಳಾಸಗಳಿಗೆ ಇ ಮೇಲ್ ಸಹ ಕಳುಹಿಸಬಹುದು.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್/ ಭಾರತೀಯ ಕ್ರೀಡಾ ಪ್ರಾಧಿಕಾರ/ ಮಾನ್ಯತೆ ಪಡೆದ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು/ ಕ್ರೀಡಾ ಉತ್ತೇಜನ ಮಂಡಳಿಗಳು/ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಸಹ ಇದಕ್ಕೆ ಅನುಗುಣವಾಗಿ ಮಾಹಿತಿ ತಿಳಿಸಲಾಗಿದೆ. 2021ರ ಜೂನ್ 28ರ ನಂತರ ಸ್ವೀಕರಿಸುವ ನಾಮನಿರ್ದೇಶನಗಳನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಲಾಗಿದೆ.