For Quick Alerts
ALLOW NOTIFICATIONS  
For Daily Alerts

'ಹತ್ಯೆ' ಸಂಚು ಆರೋಪ ಮಾಡಿದ ಕ್ರೀಡಾ ಸಚಿವರನ್ನು ವಜಾಗೊಳಿಸಿದ ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ

ಕ್ರಿಕೆಟ್ ಮಂಡಳಿಯಲ್ಲಿನ ಭ್ರಷ್ಟಾಚಾರವನ್ನು ತೊಡೆದುಹಾಕುವ ತಮ್ಮ ಕ್ರಮಗಳ ವಿರುದ್ಧವಾಗಿ, ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ತಮ್ಮನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಕೆಲವೇ ಗಂಟೆಗಳಲ್ಲಿ ಕ್ರೀಡಾ ಸಚಿವ ರೋಷನ್ ರಣಸಿಂಘೆ ಅವರನ್ನು ನವೆಂಬರ್ 27ರ ಸೋಮವಾರದಂದು ವಜಾಗೊಳಿಸಲಾಗಿದೆ.

ವಾರಕ್ಕೊಮ್ಮೆ ನಡೆಯುವ ಕ್ಯಾಬಿನೆಟ್ ಸಭೆಯ ಮೊದಲು ರೋಷನ್ ರಣಸಿಂಘೆ ಅವರ ಪದಚ್ಯುತಿ ಸಂಭವಿಸಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಿದ ನನ್ನನ್ನು ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕ್ರೀಡಾ ಸಚಿವ ರೋಷನ್ ರಣಸಿಂಘೆ ಆರೋಪಿಸಿದ್ದರು.

Sri Lankan President Dismissed the Sports minister accusing him of plotting murder

ತನ್ನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ರೋಷನ್ ರಣಸಿಂಘೆ, ಕ್ರಿಕೆಟ್ ಮಂಡಳಿಯೊಳಗಿನ ಭ್ರಷ್ಟಾಚಾರವನ್ನು ಸ್ವಚ್ಛಗೊಳಿಸುವ ತನ್ನ ಅನ್ವೇಷಣೆಯು ನನ್ನ ಹತ್ಯೆಗೆ ಕಾರಣವಾಗಬಹುದು ಎಂದು ಆರೋಪಿಸಿದ್ದರು.

ಶ್ರೀಲಂಕಾ ಕ್ರಿಕೆಟ್‌ನ ನಿರ್ವಹಣೆಗೆ ಸಂಬಂಧಿಸಿದಂತೆ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರೊಂದಿಗೆ ಸಂಘರ್ಷಕ್ಕಿಳಿದಿದ್ದ ಕ್ರೀಡಾ ಸಚಿವರು ಹತ್ಯೆ ಆರೋಪಿ ಮಡುವ ಮೂಲಕ ಮತ್ತೊಂದು ಉದ್ವಿಗ್ನತೆ ಹೆಚ್ಚಿಸಿದರು. ರೋಷನ್ ರಣಸಿಂಘೆ ಅವರು ತನಗೆ ಯಾವುದೇ ಹಾನಿ ಸಂಭವಿಸಿದಲ್ಲಿ, ಅಧ್ಯಕ್ಷರು ಮತ್ತು ಅವರ ಸಿಬ್ಬಂದಿ ಮುಖ್ಯಸ್ಥರು ನೇರ ಜವಾಬ್ದಾರರು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಇದು ಹಿಂದೆ ಚುನಾಯಿತ ಕ್ರಿಕೆಟ್ ಮಂಡಳಿಯನ್ನು ಸಚಿವರು ವಜಾ ಮಾಡಿದ ನಂತರ, ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರ ಕಛೇರಿಯು ಕ್ರೀಡಾ ಸಚಿವ ರೋಷನ್ ರಣಸಿಂಘೆ ಅವರ ವಜಾವನ್ನು ದೃಢಪಡಿಸಿದೆ.

ವಾಸ್ತವವಾಗಿ, ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಕಳಪೆ ಪ್ರದರ್ಶನ ನೀಡಿದ ಬಳಿಕ, ಕ್ರೀಡಾ ಸಚಿವ ರೋಷನ್ ರಣಸಿಂಘೆ ಇಡೀ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನೇ ವಿಸರ್ಜನೆಗೊಳಿಸಿದ್ದರು.

ದೇಶದ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಯಾದ ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪದಿಂದಾಗಿ, ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ ಕಾರಣ, ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಈ ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಮಾನತುಗೊಳಿಸಿತ್ತು.

ಕ್ರಿಕೆಟ್ ಮಂಡಳಿಯನ್ನು ಮರುಸ್ಥಾಪಿಸಲು ಅಧ್ಯಕ್ಷರ ನಿರ್ಧಾರದ ಹೊರತಾಗಿಯೂ, ರೋಷನ್ ರಣಸಿಂಘೆ ಅವರು ತಮ್ಮ ನಿರ್ಧಾರದಲ್ಲಿ ಅಚಲರಾಗಿದ್ದರು.

ಇದೇ ವೇಳೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಜಾ ಕ್ರಮವನ್ನು ಹಿಂಪಡೆಯುವಂತೆ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಕ್ರೀಡಾ ಸಚಿವರಿಗೆ ಸೂಚನೆ ನೀಡಿದ್ದರು. ಆದರೆ, ಕ್ರೀಡಾ ಸಚಿವ ರೋಷನ್ ರಣಸಿಂಘೆ ಅಧ್ಯಕ್ಷರ ಸೂಚನೆಯನ್ನು ತಿರಸ್ಕರಿಸಿದ್ದರು.

ಶ್ರೀಲಂಕಾ ಸಂಸತ್ತು ಕೂಡ ಕ್ರೀಡಾ ಸಚಿವರ ನಿರ್ಧಾರವನ್ನು ಬೆಂಬಲಿಸಿ ನಿರ್ಣಯವನ್ನು ಅಂಗೀಕರಿಸಿತ್ತು. ಆ ಬಳಿಕ ಕ್ರೀಡಾ ಸಚಿವರು ಹಾಗೂ ಅಧ್ಯಕ್ಷರ ನಡುವೆ ವೈಮನಸ್ಸು ಏರ್ಪಟ್ಟಿತ್ತು.

ಶ್ರೀಲಂಕಾದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟು, ಹಿಂದಿನ ವರ್ಷದ ಏಪ್ರಿಲ್‌ನಲ್ಲಿ ಅದರ 46 ಶತಕೋಟಿ ಡಾಲರ್ ಸಾಲವನ್ನು ಮರುಪಾವತಿಸದೆ, ಪರಿಸ್ಥಿತಿಯನ್ನು ಉಲ್ಬಣಗೊಳಿಸಿತ್ತು.

ಶ್ರೀಲಂಕಾ ನಾಗರಿಕ ಅಶಾಂತಿಯನ್ನು ಎದುರಿಸಿತು, ಪ್ರತಿಭಟನಾಕಾರರು ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಿದಾಗ, ಅಂದಿನ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರನ್ನು ಪದಚ್ಯುತಗೊಳಿಸಲಾಯಿತು.

ಇಂತಹ ಪ್ರಕ್ಷುಬ್ಧ ವಾತಾವರಣದಲ್ಲಿ, ಕ್ರೀಡಾ ಸಚಿವರನ್ನು ವಜಾಗೊಳಿಸಿರುವುದು ಶ್ರೀಲಂಕಾದ ರಾಜಕೀಯ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿನ ಅಧಿಕಾರದ ಲಾಲಸೆಯ ಪ್ರತೀಕವಾಗಿದೆ.

ಕ್ರಿಕೆಟ್ ಮಂಡಳಿಯೊಳಗಿನ ಭ್ರಷ್ಟಾಚಾರದ ಆರೋಪಗಳು, ಐಸಿಸಿ ಅಮಾನತು, ರಾಷ್ಟ್ರದ ಕ್ರೀಡಾ ಆಡಳಿತ ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ.

ಕ್ರೀಡಾ ಸಚಿವರ ವಜಾಗೊಳಿಸುವಿಕೆಯು ಕ್ರೀಡೆಗೆ ಸಂಬಂಧಿಸಿದ ವಿಷಯಗಳ ಮೇಲೆ ರಾಜಕೀಯ ಪ್ರಭಾವದ ವ್ಯಾಪ್ತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Story first published: Monday, November 27, 2023, 22:41 [IST]
Other articles published on Nov 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+