ಮೈದಾನದಲ್ಲಿ ಕ್ರಿಕೆಟಿಗರು ಸಾಮಾನ್ಯವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವುದನ್ನು ಕಾಣಬಹುದು. ಅದೇ ರೀತಿ ರಾಜಕೀಯ ಎಂಬ ಮೈದಾನದಲ್ಲಿ ಕಣಕ್ಕಿಳಿದು ಚುನಾವಣೆ ಎದುರಿಸುವುದನ್ನು ಕಾಣಬಹುದಾಗಿದೆ.
ಇತಿಹಾಸಕಾರ ರಾಮ್ ಗುಹಾ ಅವರ ಪ್ರಕಾರ, 1933-34ರಲ್ಲಿ ಬಾಂಬೆ ಪುರಸಭೆಯಲ್ಲಿ ಉಪಚುನಾವಣೆಗೆ ಸ್ಪರ್ಧಿಸಿ ಪಾರ್ಸಿ ವೈದ್ಯ ಹೋಮಿ ಎಫ್ ಪಾವ್ರಿ ವಿರುದ್ಧ ಸೋತ ದಲಿತ ನಾಯಕ ಪಲ್ವಾಂಕರ್ ಬಾಲೂ ಅವರು ರಾಜಕೀಯಕ್ಕೆ ಸೇರಿದ ಮೊದಲ ಕ್ರಿಕೆಟಿಗ ಎನಿಸಿದ್ದಾರೆ.
1937ರಲ್ಲಿ ಕಾಂಗ್ರೆಸ್ ಪಕ್ಷವು ಭೀಮ್ ರಾವ್ ಅಂಬೇಡ್ಕರ್ ಅವರ ವಿರುದ್ಧ ಸ್ಪರ್ಧಿಸಿತು. ಬಾಲೂ ಅಂಬೇಡ್ಕರರಿಗೆ ಕಠಿಣ ಪೈಪೋಟಿ ನೀಡಿದರು. ಆದರೆ 2 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲು ಕಂಡರು. 1971 ರಲ್ಲಿ ಸ್ಪರ್ಧಿಸಿದ ನವಾಬ್ ಮನ್ಸೂರ್ ಅಲಿ ಖಾನ್ ಪಟೌಡಿ ಸ್ವಾತಂತ್ರ್ಯದ ನಂತರದ ಮೊದಲ ಭಾರತೀಯ ಕ್ರಿಕೆಟಿಗ ಮತ್ತು ರಾಜಕಾರಣಿಯಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಹಲವು ಕ್ರಿಕೆಟಿಗರು ನಿವೃತ್ತಿ ನಂತರ ರಾಜಕೀಯ ಸೇರಿ ರಾಜಕಾರಣಿಗಳಾಗಿ ಬದಲಾಗಿದ್ದಾರೆ. ಅಂತಹ ಕೆಲವು ಪ್ರಮುಖ ಭಾರತೀಯ ಕ್ರಿಕೆಟಿಗರ ಬಗ್ಗೆ ತಿಳಿದುಕೊಳ್ಳೋಣ.
ಗೌತಮ್ ಗಂಭೀರ್
ಭಾರತದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ 2019ರ ಲೋಕಸಭಾ ಚುನಾವಣೆ ವೇಳೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದರು ಮತ್ತು ಸಂಸದರಾಗಿದ್ದಾರೆ. ಗೌತಮ್ ಗಂಭೀರ್ ಅವರು ಭಾರತ 2007ರ ಐಸಿಸಿ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆದ್ದ ತಂಡದ ಪ್ರಮುಖ ಸದಸ್ಯರಾಗಿದ್ದರು.
ಮೊಹಮ್ಮದ್ ಅಜರುದ್ದೀನ್
ಹೈದರಾಬಾದ್ ಮೂಲದ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರು 2009ರಲ್ಲಿ ಕಾಂಗ್ರೆಸ್ ಸೇರಿ ತಮ್ಮ ರಾಜಕೀಯ ಇನ್ನಿಂಗ್ಸ್ ಆರಂಭಿಸಿದರು. ಅಜರುದ್ದೀನ್ 2009ರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್ನಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಸಂಸದರಾದರು.
ಭಾರತ ತಂಡದ ಮಾಜಿ ನಾಯಕನಾಗಿರುವ ಮೊಹಮ್ಮದ್ ಅಜರುದ್ದೀನ್ 2014ರ ಲೋಕಸಭಾ ಚುನಾವಣೆಯಲ್ಲಿ ಮೊರಾದಾಬಾದ್ ಕ್ಷೇತ್ರದಿಂದ ಸೋತರು. ಮೊಹಮ್ಮದ್ ಅಜರುದ್ದೀನ್ ಅವರು 1990ರ ದಶಕದಲ್ಲಿ 47 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ.
ಮನ್ಸೂರ್ ಅಲಿ ಖಾನ್ ಪಟೌಡಿ
ಭಾರತೀಯ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ರಾಜಕೀಯಕ್ಕೆ ಸೇರಿದ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಿದ ಕ್ರಿಕೆಟಿಗರಲ್ಲಿ ಮೊದಲಿಗರಾಗಿದ್ದಾರೆ. ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಮನ್ಸೂರ್ ಅಲಿ ಖಾನ್ ಪಟೌಡಿ ಎರಡು ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲಿನ ರುಚಿ ಕಂಡರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಅವರು ಮನ್ಸೂರ್ ಅಲಿ ಖಾನ್ ಪಟೌಡಿ ಪರವಾಗಿ ಪ್ರಚಾರ ಮಾಡಿದ ಹೊರತಾಗಿಯೂ ಚುನಾವಣೆಯಲ್ಲಿ ಸೋತರು. ಈ ಸೋಲುಗಳ ನಂತರ, ಪಟೌಡಿ ರಾಜಕೀಯದಿಂದ ದೂರ ಉಳಿಯದಿರಲು ನಿರ್ಧರಿಸಿದರು.
ಕೀರ್ತಿ ಆಜಾದ್
1983ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಮಾಜಿ ಆಲ್ರೌಂಡರ್ ಕೀರ್ತಿ ಆಜಾದ್ ಬಿಜೆಪಿ ಪಕ್ಷವನ್ನು ಸೇರಿದರು. ಬಿಹಾರದ ದರ್ಬಂಗಾ ಕ್ಷೇತ್ರದಿಂದ ಮೂರು ಬಾರಿ ಗೆದ್ದರು. ಫೆಬ್ರವರಿ 2019ರಲ್ಲಿ ಕಾಂಗ್ರೆಸ್ ಸೇರಿದರು. ಬಿಹಾರದ ಮಾಜಿ ಮುಖ್ಯಮಂತ್ರಿಯ ಪುತ್ರನಾಗಿರುವ ಕೀರ್ತಿ ಆಜಾದ್ ಆಕ್ರಮಣಕಾರಿ ಬಲಗೈ ಬ್ಯಾಟ್ಸ್ಮನ್ ಮತ್ತು ಆಫ್ ಸ್ಪಿನ್ನರ್ ಆಗಿದ್ದರು.
ನವಜೋತ್ ಸಿಂಗ್ ಸಿಧು
ಪಂಜಾಬ್ ಸರ್ಕಾರದದಲ್ಲಿ ಸಚಿವರಾಗಿದ್ದ ನವಜೋತ್ ಸಿಂಗ್ ಸಿಧು 2004ರಲ್ಲಿ ಬಿಜೆಪಿ ಟಿಕೆಟ್ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಭಾರತದ ಪರ 51 ಟೆಸ್ಟ್ ಮತ್ತು 136 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿರುವ ನವಜೋತ್ ಸಿಂಗ್ ಸಿಧು ತಮ್ಮ ರಾಜಕೀಯ ಜೀವನದಲ್ಲಿ ಹಲವಾರು ಏರಿಳಿತ ಕಂಡಿದ್ದಾರೆ.

ಮೊಹಮ್ಮದ್ ಕೈಫ್
2000ರಿಂದ 2006ರ ನಡುವೆ 125 ಏಕದಿನ ಮತ್ತು 13 ಟೆಸ್ಟ್ ಪಂದ್ಯಗಳನ್ನು ಆಡಿರುವ ಮೊಹಮ್ಮದ್ ಕೈಫ್, ಕಾಂಗ್ರೆಸ್ ಸೇರಿ 2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಫುಲ್ಪುರದಿಂದ ಸ್ಪರ್ಧಿಸಿದ್ದರು. ಅವರು ಅತ್ಯುತ್ತಮ ಫೀಲ್ಡರ್ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.
ಚೇತನ್ ಚೌಹಾಣ್
ಟೆಸ್ಟ್ ಕ್ರಿಕೆಟ್ನಲ್ಲಿ ಸುನಿಲ್ ಗವಾಸ್ಕರ್ ಅವರ ಆರಂಭಿಕ ಜೊತೆಗಾರನಾಗಿದ್ದ ಚೇತನ್ ಚೌಹಾಣ್ ಅವರು ಉತ್ತರಪ್ರದೇಶದ ಅಮ್ರೋಹಾ ಕ್ಷೇತ್ರದಿಂದ ಎರಡು ಬಾರಿ ಸಂಸತ್ ಸದಸ್ಯರಾಗಿದ್ದರು. 1981ರಲ್ಲಿ ಅವರ ಕ್ರಿಕೆಟ್ ವೃತ್ತಿಜೀವನ ಮುಗಿದ ನಂತರ ರಾಜಕೀಯಕ್ಕೆ ಸೇರಿದರು. ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಅವರು ಉತ್ತರಪ್ರದೇಶದಲ್ಲಿ ಯುವಜನ ಮತ್ತು ಕ್ರೀಡಾ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿನೋದ್ ಕಾಂಬ್ಳಿ
ಭಾರತದ ಮಾಜಿ ಟೆಸ್ಟ್ ಬ್ಯಾಟ್ಸ್ಮನ್ ವಿನೋದ್ ಕಾಂಬ್ಳಿ 1000 ಟೆಸ್ಟ್ ರನ್ಗಳನ್ನು ವೇಗವಾಗಿ ಪೂರೈಸಿದ ಭಾರತೀಯ ಆಟಗಾರನಾದರು. 1993ರಲ್ಲಿ ಜಿಂಬಾಬ್ವೆ ವಿರುದ್ಧ 227 ರನ್ ಬಾರಿಸುವ ಮೂಲಕ ಸಚಿನ್ಗಿಂತ ಮುಂಚೆಯೇ ಅವರು 200 ರನ್ ಬಾರಿಸಿದ್ದರು.
ನಂತರ, ರಾಜಕೀಯದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿದರು. ಲೋಕ ಭಾರತಿ ಪಕ್ಷವು ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಿತು. ಕಾಂಬ್ಳಿ 2009ರ ವಿಧಾನಸಭಾ ಚುನಾವಣೆಯಲ್ಲಿ ವಿಖ್ರೋಲಿ (ಮುಂಬೈ) ಕ್ಷೇತ್ರದಲ್ಲಿ ಸೋತರು.

ಮನೋಜ್ ಪ್ರಭಾಕರ್
ಮನೋಜ್ ಪ್ರಭಾಕರ್ ಭಾರತ ಕ್ರಿಕೆಟ್ ತಂಡದಲ್ಲಿ ಆಲ್ರೌಂಡರ್ ಆಗಿದ್ದರು. ಅವರು 39 ಟೆಸ್ಟ್ ಮತ್ತು 130 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಈ ವೇಳೆ 3,400ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ ಮತ್ತು 253 ವಿಕೆಟ್ಗಳನ್ನು ಪಡೆದರು. ನಿವೃತ್ತಿಯ ನಂತರ, ಅವರು ರಾಜಕಾರಣಿಯಾಗಿ ಬದಲಾಗಿದ್ದಾರೆ ಮತ್ತು ಪ್ರಸ್ತುತ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರಾಗಿದ್ದಾರೆ.
ತೇಜಸ್ವಿ ಯಾದವ್ ತೇಜಸ್ವಿ
ಆರ್ಜೆಡಿ ಮುಖ್ಯಸ್ಥ ಮತ್ತು ಲಾಲು ಪ್ರಸಾದ್ ಯಾದವ್ ಅವರು ತಮ್ಮ ಪುತ್ರ ತೇಜಸ್ವಿ ಯಾದವ್ ತೇಜಸ್ವಿ ಅವರನ್ನು ರಾಜಕಾರಣಿಯಾಗಿಸುವ ಆಸಕ್ತಿಯನ್ನು ಹೊಂದಿದ್ದವರಲ್ಲ. ಅವರು ವಾಸ್ತವವಾಗಿ ಕ್ರಿಕೆಟ್ನಲ್ಲಿ ತಮ್ಮ ಆಸಕ್ತಿಯನ್ನು ಅನುಸರಿಸಿದರು ಮತ್ತು ನಂತರ ರಾಜಕೀಯಕ್ಕೆ ಸೇರಲು ಬಯಸಿದರು.
ನವೆಂಬರ್ 10, 1989ರಂದು ಜನಿಸಿದ ತೇಜಸ್ವಿ ಯಾದವ್ ತೇಜಸ್ವಿ ಅವರು ಬಿಹಾರದ ಮಾಜಿ ಸಿಎಂಗಳಾದ ಲಾಲು ಯಾದವ್ ಮತ್ತು ರಾಬ್ರಿ ದೇವಿ ಅವರ ಕಿರಿಯ ಮಗ. ಶಾಲಾ ದಿನಗಳಿಂದಲೇ ಕ್ರಿಕೆಟ್ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ರಾಜ್ಯ ಮಟ್ಟದ ಕ್ರಿಕೆಟ್ ಆಡಿದ ನಂತರ ಐಪಿಎಲ್ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಸೇರಿಕೊಂಡರು.
ಅವರು 2008ರಿಂದ 2012ರವರೆಗೆ 5 ವರ್ಷಗಳ ಕಾಲ ತಂಡದ ಭಾಗವಾಗಿದ್ದರು. ಆದರೆ, ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ. ನಂತರ, 2015ರಲ್ಲಿ ತೇಜಸ್ವಿ ತಮ್ಮ ತಂದೆಯ ಪಕ್ಷ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಪಕ್ಷವನ್ನು ಸೇರಲು ನಿರ್ಧರಿಸಿದರು.
ಇನ್ನು ಮನೋಜ್ ತಿವಾರಿ ತೃಣಮೂಲ ಕಾಂಗ್ರೆಸ್ನಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ಇನ್ನು ಅಶೋಕ್ ದಿಂಡಾ ಬಿಜೆಪಿ ಸೇರಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸೋತರು.