ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎರಡನೇ ಟಿ20: ಭಾರತದ ಗೆಲುವಿಗೆ ಕಾರಣವಾದ ಅಂಶಗಳು

ಮೊದಲ ಟಿ20 ಮಳೆಗೆ ಆಹುತಿಯಾದ ಬಳಿಕ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆದ್ದುಕೊಂಡಿದೆ. ಇಂದೊರ್‌ನಲ್ಲಿ ನಡೆದ ಈ ಪಂದ್ಯವನ್ನು ಏಳು ವಿಕೆಟ್‌ಗಳಿಂದ ಟೀಮ್ ಪಂದ್ಯ ಗೆದ್ದಿರುವ ಟೀಮ್ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆಯನ್ನು ಕಾಯ್ದುಕೊಂಡಿದೆ.

ಶ್ರೀಲಂಕಾ ತಂಡ ನಿಗದಿತ 20 ಓವರ್‌ಗಳಲ್ಲಿ 142-9ರನ್ ಗಳಿಸಿತು. ಲಂಕಾ ನೀಡಿದ ಮೊತ್ತವನ್ನು ಬೆನ್ನತ್ತಿದ ಟೀಮ್ ಇಂಡಿಯಾ ಸುಲಭವಾಗಿ ಬೆನ್ನತ್ತುವಲ್ಲಿ ಯಶಸ್ವಿಯಾಯಿತು. ಕೇವಲ 3 ವಿಕೆಟ್ ಕಳೆದುಕೊಂಡು 2.3 ಓವರ್‌ ಉಳಿದಿರುವಂತೆಯೇ ಭರ್ಜರಿಯಾಗಿ ಗೆಲುವು ಕಂಡಿತು.

ದ್ವಿತೀಯ ಟಿ20: ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾಕ್ಕೆ ಸುಲಭ ಜಯದ್ವಿತೀಯ ಟಿ20: ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾಕ್ಕೆ ಸುಲಭ ಜಯ

ಇಂದೋರ್ ಕ್ರೀಡಾಂಗಣದಲ್ಲಿ ಆಡಿರುವ ಎಲ್ಲಾ ಪಂದ್ಯಗಳನ್ನೂ ಟೀಮ್ ಇಂಡಿಯಾ ಗೆದ್ದು ಅಜೇಯವಾಗಿದ್ದು ಈ ಪಂದ್ಯದಲ್ಲೂ ಅದನ್ನು ಮುಂದುವರಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಇನ್ನು ಒಂದೇ ಪಂದ್ಯ ಬಾಕಿಯಿದ್ದು ಆ ಪಂದ್ಯ ಗೆದ್ದರೂ ಸರಣಿ ಸಮಬಲ ಮಾಡಿಕೊಳ್ಳುವಲ್ಲಷ್ಟೇ ಶ್ರೀಲಂಕಾ ಯಶಸ್ವಿಯಾಗಲಿದೆ. ನಿನ್ನೆಯ ಪಂದ್ಯದಲ್ಲಿ ಭಾರತ ಗೆಲುವಿಗೆ ಕಾರಣವಾದ ಅಂಶಗಳು ಏನಿದೆ ಅನ್ನೋದನ್ನು ಬನ್ನಿ ನೋಡೋಣ

ಬೌಲಿಂಗ್ ವಿಭಾಗದ ಸಂಘಟಿತ ದಾಳಿ;

ಬೌಲಿಂಗ್ ವಿಭಾಗದ ಸಂಘಟಿತ ದಾಳಿ;

ಟೀಮ್ ಇಂಡಿಯಾ ಬೌಲರ್‌ಗಳು ಇಂದೋರ್ ಪಂದ್ಯದಲ್ಲಿ ಸಂಘಟಿತ ದಾಳಿಯನ್ನು ಪ್ರದರ್ಶಿಸಿದ್ದಾರೆ. ಆರಂಭಕ ಆಟಗಾರರು ಮೊದಲಿಗೆ ಭರ್ಜರಿ ರನ್ ಬಾರಿಸಿ ದೊಡ್ಡ ಮೊತ್ತದ ಸುಳಿವು ನೀಡಿದರು. ಆದರೆ ಟಿಮ್ ಇಂಡಿಯಾ ಬೌಲರ್‌ಗಳು ಶ್ರೀಲಂಕಾ ಆರಂಭಿಕರನ್ನು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲು ಅವಕಾಶ ಮಾಡಿಕೊಡಲಿಲ್ಲ. ವಾಶಿಂಗ್ಟನ್ ಸುಂದರ್ ಮೊದಲ ಯಶಸ್ಸು ಒದಗಿಸಿದರು. ನವ್‌ದೀಪ್ ಸೈನಿ(2/18), ಶಾರ್ದೂಲ್ ಟಾಕೂರ್(3/23), ಜಸ್ಪ್ರೀತ್ ಬುಮ್ರಾ(1/32), ಕುಲ್ದೀಪ್ ಯಾದವ್ (2/38) ಲಂಕಾ ಬ್ಯಾಟ್ಸ್‌ಮನ್‌ಗಳ ಹೆಡೆಮುರಿ ಕಟ್ಟಿದರು

ಟಾಪ್ ಬ್ಯಾಟ್ಸ್‌ಮನ್‌ಗಳ ಭರ್ಜರಿ ಬ್ಯಾಟಿಂಗ್:

ಟಾಪ್ ಬ್ಯಾಟ್ಸ್‌ಮನ್‌ಗಳ ಭರ್ಜರಿ ಬ್ಯಾಟಿಂಗ್:

142 ರನ್‌ಗೆ ಶ್ರೀಲಂಕಾ ತಂಡವನ್ನು ಕಟ್ಟಿ ಹಾಕಿದ ನಂತರ ಕೆಎಲ್ ರಾಹುಲ್ ಮತ್ಉ ಶಿಖರ್ ಧವನ್ ಜೋಡಿ ಆರಂಭಕರಾಗಿ ಉತ್ತಮ ಅಡಿಪಾಯವನ್ನು ಹಾಕಿಕೊಟ್ಟಿತು. ಮೊದಲ ವಿಕೆಟ್‌ಗೆ 71 ರನ್ ಪೇರಿಸಿದರು. ಅಲ್ಲಗೆ ಭಾರತ ತನ್ನ ಅರ್ಧ ದಾರಿಯನ್ನು ಕ್ರಮಿಸಿಯಾಗಿತ್ತು. ಬಳಿಕ ಬಂದ ಶ್ರೇಯಸ್ ಅಯ್ಯರ್(26 ಎಸೆತಗಳಲ್ಲಿ 34 ರನ್) ಹಾಗೂ ನಾಯಕ ವಿರಾಟ್ ಕೊಹ್ಲಿ(17 ಎಸೆತಗಳಲ್ಲಿ 30 ರನ್*) ಬಾರಿಸಿ ಗೆಲುವನ್ನು ಖಚಿತಪಡಿಸಿದರು.

ಐಪಿಎಲ್ 2020ರ ಫೈನಲ್ ಪಂದ್ಯದ ದಿನಾಂಕ, ಸಮಯ ಪ್ರಕಟ!

ವಿಕೆಟ್ ಕೀಳುವಲ್ಲಿ ವಿಫಲರಾದ ಶ್ರೀಲಂಕಾ

ವಿಕೆಟ್ ಕೀಳುವಲ್ಲಿ ವಿಫಲರಾದ ಶ್ರೀಲಂಕಾ

ಶ್ರೀಲಂಕಾ ತಂಡ ನೀಡಿದ ಗುರಿಯನ್ನು ಬೆನ್ನತ್ತಿ ಹೊರಟ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವಲ್ಲಿ ಶ್ರೀಲಂಕಾ ಬೌಲರ್‌ಗಳು ಸಂಪೂರ್ಣವಾಗಿ ವಿಫಲರಾದರು. ಆರಂಭದಲ್ಲಿ ವಿಕೆಟ್‌ ಕಿತ್ತು ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹಾಕುವ ಪ್ರಯತ್ನ ಸಂಪೂರ್ಣವಾಗಿ ವಿಫಲವಾಯಿತು. ಸ್ವತಃ ಶ್ರೀಲಂಕಾ ನಾಯಕ ಸಲಿತ್ ಮಲಿಂಗಾ ಒಂದೂ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಆದರೆ ಬರೊಬ್ಬರಿ 41 ರನ್ ನೀಡಿದರು.

ಎಲ್ಲಾ ವಿಭಾಗದಲ್ಲೂ ಟೀಮ್ ಇಂಡಿಯಾ ಸಂಘಟಿತ ಹೋರಾಟ:

ಎಲ್ಲಾ ವಿಭಾಗದಲ್ಲೂ ಟೀಮ್ ಇಂಡಿಯಾ ಸಂಘಟಿತ ಹೋರಾಟ:

ಒಟ್ಟಾರೆಯಾಗಿ ಟೀಮ್ ಇಂಡಿಯಾ ನಿನ್ನೆಯ ಪಂದ್ಯದಲ್ಲಿ ತನ್ನ ಸಂಘಟಿತ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾಯಿತು. ಬ್ಯಾಟಿಂಗ್‌ಗೆ ಪೂರಕವಾದ ಪಿಚ್‌ನಲ್ಲಿ ಶ್ರೀಲಂಕಾವನ್ನು 25-30ರನ್‌ಗಳಷ್ಟು ಕಡಿಮೆ ರನ್ ಗಳಿಗೆ ಕಟ್ಟಿ ಹಾಕಿದ್ದು ತಂಡಕ್ಕೆ ಸಹಕಾರಿಯಾಯಿತು. ಫೀಲ್ಡಿಂಗ್ ವಿಬಾಗದಲ್ಲೂ ಸುಧಾರಣೆ ಕಂಡಿತು. ಬ್ಯಾಟಿಂಗ್ ವಿಭಾಗವಂತು ಶ್ರೀಲಂಕಾ ತಂಡ ನೀಡಿದ ಗುರಿಯನ್ನು ಸುಲಭವಾಗಿ ಗುರಿ ತಲುಪಿಸಿತು.

Story first published: Wednesday, January 8, 2020, 12:07 [IST]
Other articles published on Jan 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X