
ಕ್ರಿಕೆಟ್ ಜಂಟಲ್ ಮೆನ್ ಗಳ ಆಟ
ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟ್ಸ ಮನ್ ಎಂಬುದನ್ನು ಸಾಬೀತು ಮಾಡಿದ್ದಾರೆ. ಆಟದಲ್ಲಿ ಆಕ್ರಮಣಶೀಲತೆ ಒಳ್ಳೆಯದೇ ಆದರೆ ಎಲ್ಲಿ ಬೇಕೋ ಅಲ್ಲಿ ಮಾತ್ರ ಬಳಸಬೇಕು. ಆಗ ಮಾತ್ರ ಆದರೆ ನಾಯಕತ್ವದ ಪ್ರಭೆ ಹೆಚ್ಚುತ್ತದೆ ಎಂದು ಕೊಹ್ಲಿಗೆ ಸ್ಟೀವ್ ವಾ ಸಲಹೆ ನೀಡಿದರು.

ಸೌರವ್ ಗಂಗೂಲಿ ನೆನಪು
ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಂದ ಯವ ಆಟಗಾರರು ಕಲಿಯಬೇಕಾದದದ್ದು ಸಾಕಷ್ಟಿದೆ. ಅವರ ಸಂಘಟನಾ ಶಕ್ತಿಯನ್ನು ಮೆಚ್ಚಲೇಬೇಕು. ದ್ರಾವಿಡ್-ಲಕ್ಷಣ್ ಅಂಥ ಆಟಗಾರನ್ನು ಹೊಂದಿದ್ದ ಭಾರತ ತಂಡ ಸದಾ ನೆನಪಲ್ಲಿ ಉಳಿಯುತ್ತದೆ ಎಂದು ಹೇಳಿದರು.

ಮೈದಾನಕ್ಕಿಳಿದ ವಾ
ಒಂದು ತಂಡದ ಪರ ನಾಯಕತ್ವ ವಹಿಸಿಕೊಂಡ ಸ್ಟೀವ್ ವಾ ಬೌಲಿಂಗ್ ಸಹ ಮಾಡಿದರು. ಎರಡು ವಿಕೆಟ್ ಗಳನ್ನು ಕಬಳಿಸಿದ್ದು ವಿಶೇಷ. ಅಲ್ಲದೇ ಕ್ರಿಕೆಟ್ ನ ವಿವಿಧ ಆಯಾಮಗಳ ಪರಿಚಯ ಮಾಡಿಕೊಡುತ್ತಲೇ ಆಟಗಾರರನ್ನು ಹುರಿದುಂಬಿಸಿದರು.

ಬೆಂಗಳೂರಿಗೆ ಬಂದಿದ್ದೇಕೆ?
ದೇವನಹಳ್ಳಿಯ ಬ್ರಿಗೇಡ್ ಆಕಾ೯ಡ್ಸ್ ನ ಟೌನ್ ಶಿಪ್ ನಲ್ಲಿ ನಿರ್ಮಾಣವಾಗಿರುವ ಸ್ಫೋರ್ಟ್ಸ್ ಅರೇನಾ ಉದ್ಘಾಟಿಸಲು ಸ್ಟೀವ್ ವಾ ಜತೆ ಆಡಂ ಗಿಲ್ ಕ್ರಿಸ್ಟ್ ಸಹೋದರ ಸಹ ಆಗಮಿಸಿದ್ದರು. ಬ್ರಿಗೇಡ್ ಸಂಸ್ಥೆಯೊಂದಿಗೆ ಸ್ಟೀವ್ ವಾ ಪಾಲುದಾರಿಕೆಯಲ್ಲಿ ಭಾಗಿಯಾಗಿದ್ದಾರೆ.

ಅತ್ತುತ್ತಮ ಪ್ರಯತ್ನ
ಮಕ್ಕಳಿಗೆ ಬಾಲ್ಯದಿಂದಲೇ ಕ್ರೀಡಾ ಸಾಮಗ್ರಿ ಮತ್ತು ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಸಿದ್ಧಮಾಡಿರುವ ಮೈದಾನ ಯಾವ ಅಂತಾರಾಷ್ಟ್ರೀಯ ಮೈದಾನಕ್ಕೂ ಕಡಿಮೆಯಿಲ್ಲ ಎಂದು ಸ್ಟೀವ್ ವಾ ಹೇಳಿದರು.


Click it and Unblock the Notifications