ಕ್ರಿಕೆಟ್ಗೆ ಸಂಬಂಧಿಸಿದ ತೀವ್ರ ಜಗಳದ ಮೇಲೆ ಕೊಲೆ
ಬಂಧಿತ ವ್ಯಕ್ತಿಯನ್ನು ಎಸ್ ಧರ್ಮರಾಜ್ ಎಂದು ಗುರುತಿಸಲಾಗಿದ್ದು, ಮೃತರನ್ನು 24 ವರ್ಷದ ಪಿ ವಿಘ್ನೇಶ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ತಮಿಳುನಾಡಿನ ಅರಿಯಲೂರು ಜಿಲ್ಲೆಯ ಪೊಯ್ಯೂರು ಗ್ರಾಮದವರು.
ಮೃತರು ಸಿಂಗಾಪುರದಿಂದ ತಮ್ಮ ಕೆಲಸದ ವೀಸಾಕ್ಕಾಗಿ ಕಾಯುತ್ತಿದ್ದಾಗ ಕ್ರಿಕೆಟ್ಗೆ ಸಂಬಂಧಿಸಿದ ತೀವ್ರ ಜಗಳದ ಮೇಲೆ ಕೊಲೆ ಘಟನೆ ನಡೆದಿದೆ. ಕಳೆದ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.
ಕ್ರಿಕೆಟ್ ಕುರಿತು ಚರ್ಚೆ ನಡೆಸುತ್ತಿದ್ದ ವೇಳೆ ವಿಘ್ನೇಶ್ ಹತ್ಯೆ
ಕೀಲಪಾಲೂರು ಪೊಲೀಸರ ಪ್ರಕಾರ, ಮೃತ ವಿಘ್ನೇಶ್ ಪ್ರಸ್ತುತ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಕಟ್ಟಾ ಅಭಿಮಾನಿಯಾಗಿದ್ದು, ಆರೋಪಿ ಧರ್ಮರಾಜ್ ಅವರು ವಿರಾಟ್ ಕೊಹ್ಲಿಯ ಅಭಿಮಾನಿಯಾಗಿದ್ದಾರೆ. ಮಲ್ಲೂರು ಸಮೀಪದ ಸಿಡ್ಕೊ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿಯ ಬಯಲು ಪ್ರದೇಶದಲ್ಲಿ ಇಬ್ಬರೂ ಕ್ರಿಕೆಟ್ ಕುರಿತು ಚರ್ಚೆ ನಡೆಸುತ್ತಿದ್ದ ವೇಳೆ ವಿಘ್ನೇಶ್ ಹತ್ಯೆ ನಡೆದಿದೆ ಎನ್ನಲಾಗಿದೆ.
ಐಪಿಎಲ್ನಲ್ಲಿ ಮೃತ ವಿಘ್ನೇಶ್ ಮುಂಬೈ ಇಂಡಿಯನ್ಸ್ ಮತ್ತು ರೋಹಿತ್ ಶರ್ಮಾ ಅವರನ್ನು ಬೆಂಬಲಿಸಿದ್ದರೆ, ಕೊಲೆ ಆರೋಪಿ ಧರ್ಮರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಅದರ ಮಾಜಿ ನಾಯಕ ವಿರಾಟ್ ಕೊಹ್ಲಿಯ ಅಭಿಮಾನಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿಯನ್ನು ಅಪಹಾಸ್ಯ ಮಾಡಿದ್ದ ವಿಘ್ನೇಶ್
"ತಮ್ಮ ಚರ್ಚೆಯ ಸಂದರ್ಭದಲ್ಲಿ ವಿಘ್ನೇಶ್ ಅವರು ಆರ್ಸಿಬಿ ಮತ್ತು ವಿರಾಟ್ ಕೊಹ್ಲಿಯನ್ನು ಅಪಹಾಸ್ಯ ಮಾಡಿದ್ದರು. ಅಂದು ಆರ್ಸಿಬಿ ತಂಡವನ್ನು ಧರ್ಮರಾಜ್ನ ಮಾತಿನ ಕಷ್ಟಕ್ಕೆ ಹೋಲಿಸಿ ಟೀಕೆ ಮಾಡಿದ್ದರು. ಇದರಿಂದ ಕುಪಿತಗೊಂಡ ಧರ್ಮರಾಜ್ ಬಾಟಲಿಯಿಂದ ವಿಘ್ನೇಶ್ ಮೇಲೆ ಹಲ್ಲೆ ನಡೆಸಿ, ನಂತರ ಕ್ರಿಕೆಟ್ ಬ್ಯಾಟ್ನಿಂದ ತಲೆಗೆ ಹೊಡೆದಿದ್ದಾನೆ. ಧರ್ಮರಾಜ್ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾನೆ," ಎಂದು ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮರುದಿನ ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದವರು ಪೊಲೀಸರಿಗೆ ತಿಳಿದಾಗ ವಿಘ್ನೇಶ್ ಶವ ಪತ್ತೆಯಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ನೆಟಿಜನ್ಗಳು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಬಂಧಿಸುವಂತೆ ಒತ್ತಾಯಿಸಿ #ArrestKohli ಎಂಬ ಹ್ಯಾಶ್ಟ್ಯಾಗ್ ಅನ್ನು ಟ್ರೆಂಡ್ ಮಾಡುತ್ತಿದ್ದಾರೆ.

ರೋಹಿತ್ ಮತ್ತು ಕೊಹ್ಲಿ ಹೆಸರಿಗೆ ಮಸಿ ಬಳಿಯಬಾರದು
ಕ್ರಿಕೆಟ್ ಇರಲಿ ಅಥವಾ ಬೇರೆ ಯಾವುದೇ ಕ್ರೀಡೆಯಾಗಿರಲಿ, ಅದರಲ್ಲಿ ಸೋಲು ಮತ್ತು ಗೆಲವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು. ಪ್ರತಿಯೊಬ್ಬ ಆಟಗಾರರು ತಮ್ಮ ತಮ್ಮ ತಂಡದ ಪರವಾಗಿ ಆಡುತ್ತಾರೆ. ಅಭಿಮಾನಿಗಳು ಕ್ರೀಡಾಪಟುಗಳ ಮೇಲಿನ ಅಭಿಮಾನವನ್ನು ತೋರಿಸಲು ಹೋಗಿ ಜಗಳ ಅಥವಾ ಕೊಲೆಯಂಥಹ ಕೃತ್ಯಗಳನ್ನು ಮಾಡಿ ಕಾನೂನು ಕೈಗೆತ್ತಿಕೊಳ್ಳಬಾರದು.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಭಾರತ ತಂಡಕ್ಕಾಗಿ ಒಟ್ಟಾಗಿ ಆಡುತ್ತಿದ್ದಾರೆ ಮತ್ತು ಅವರಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ಆದರೆ ಅಭಿಮಾನಿಗಳು ತಮ್ಮ ಹುಚ್ಚು ಅಭಿಮಾನದಿಂದ ಇಂತಹ ಕೃತ್ಯಗಳ ಮೂಲಕ ಅವರಲ್ಲಿ ಕ್ರಿಕೆಟ್ ಮತ್ತು ಕ್ರೀಡಾಪಟುಗಳ ಹೆಸರಿಗೆ ಮಸಿ ಬಳಿಯಬಾರದು.


Click it and Unblock the Notifications












