For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್ 2022: ಈತ ತಂಡದಲ್ಲಿ ಸಮತೋಲನ ತೋರುತ್ತಿರುವ ಏಕೈಕ ಆಟಗಾರ; ಆಕಾಶ್ ಚೋಪ್ರಾ

Asia Cup 2022: Hardik Pandya Is The Only Player Who Looks Balanced In Team Says Aakash Chopra

2022ರ ಏಷ್ಯಾ ಕಪ್ ಯುಎಇಯಲ್ಲಿ ಇದೇ ಆಗಸ್ಟ್ 27ರಂದು ಕಿಕ್‌ಸ್ಟಾರ್ಟ್‌ ಪಡೆಯಲಿದೆ. ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಗಸ್ಟ್ 28ರಂದು ಸೆಣಸಾಟ ನಡೆಸಲಿದೆ. ಬದ್ಧ ಎದುರಾಳಿಗಳ ಕಾದಾಟ ವೀಕ್ಷಿಸಲು ವಿಶ್ವದೆಲ್ಲೆಡೆಯಿಂದ ಯುಎಇಯತ್ತ ಪ್ರಯಾಣ ಬೆಳೆಸಲಿದ್ದಾರೆ.

ಇನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ಸಮತೋಲನವನ್ನು ಸಾಬೀತುಪಡಿಸುವ ಏಕೈಕ ಆಟಗಾರ ಎಂದು ಹೇಳಿದ್ದಾರೆ ಮತ್ತು ತಂಡದಲ್ಲಿ ಅವರಿಲ್ಲದಿದ್ದರೆ ಎಲ್ಲಾ ಉತ್ತಮ ಯೋಜನೆಗಳು ಕುಸಿಯುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಫ್ರಾಂಚೈಸಿಯ ಚೊಚ್ಚಲ ಋತುವಿನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಐಪಿಎಲ್ 2022 ಪ್ರಶಸ್ತಿಗೆ ಕೊಂಡೊಯ್ಯಲು ಹಾರ್ದಿಕ್ ಪಾಂಡ್ಯ ಬಹಳ ಶ್ರಮಪಟ್ಟಿದ್ದಾರೆ. ಇದು ಅವರ ಅತ್ಯುತ್ತಮ ವರ್ಷಗಳಲ್ಲಿ ಒಂದಾಗಿದೆ. ಇದರ ನಂತರ ದಕ್ಷಿಣ ಆಫ್ರಿಕ ಮತ್ತು ಐರ್ಲೆಂಡ್ ವಿರುದ್ಧ ಪ್ರಭಾವಶಾಲಿಯಾದ ಪಂದ್ಯಗಳು ನಡೆದವು, ಹಾರ್ದಿಕ್ ಪಾಂಡ್ಯ ಅವರು ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಭಾರತೀಯ ತಂಡದ ನಾಯಕರಾಗಿ ಆಯ್ಕೆಯಾದರು.

ಉತ್ತಮ ಫಾರ್ಮ್‌ನಲ್ಲಿರುವ ಹಾರ್ದಿಕ್ ಪಾಂಡ್ಯ

ಉತ್ತಮ ಫಾರ್ಮ್‌ನಲ್ಲಿರುವ ಹಾರ್ದಿಕ್ ಪಾಂಡ್ಯ

ಭಾರತೀಯ ಆಲ್‌ರೌಂಡರ್ ತನ್ನ ಉತ್ತಮ ಫಾರ್ಮ್ ಅನ್ನು ಇಂಗ್ಲೆಂಡ್ ಪ್ರವಾಸದಲ್ಲಿ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಪ್ರದರ್ಶಿಸಿದರು. ಭಾರತಕ್ಕೆ ಸ್ವಾಗತಾರ್ಹ ಸಮಾಧಾನವೆಂದರೆ 28 ವರ್ಷ ವಯಸ್ಸಿನ ಪಾಂಡ್ಯ, ಮತ್ತೆ ತಂಡಕ್ಕಾಗಿ ಬೌಲಿಂಗ್ ಮಾಡಲು ಪ್ರಾರಂಭಿಸಿದರು ಮತ್ತು ಬೌಲಿಂಗ್‌ನಲ್ಲಿಯೂ ಪರಿಣಾಮಕಾರಿಯಾಗಿ ಪ್ರದರ್ಶನ ನೀಡಿದ್ದಾರೆ.

ನ್ಯೂಸ್ 18 ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಆಕಾಶ್ ಚೋಪ್ರಾ, ತಂಡದಲ್ಲಿ ಸಮತೋಲನವನ್ನು ಸಾಬೀತುಪಡಿಸುವ ಏಕೈಕ ಆಟಗಾರ ಹಾರ್ದಿಕ್ ಪಾಂಡ್ಯ ಮತ್ತು ಅವನಿಲ್ಲದಿದ್ದರೆ ತಂಡದ ಯೋಜನೆಗಳು ಕುಸಿಯುತ್ತವೆ ಎಂದು ಹೇಳಿದರು. ಮಾಜಿ ಕ್ರಿಕೆಟಿಗ ಚೋಪ್ರಾ ಅವರು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಬದಲಿ ಆಟಗಾರರನ್ನು ಹುಡುಕಬಹುದಾದರೂ, ಹಾರ್ದಿಕ್ ಪಾಂಡ್ಯ ಮಾತ್ರ ವಿಶೇಷವಾಗಿರುತ್ತಾರೆ ಎಂದು ಹೇಳಿದ್ದಾರೆ.

4 ಓವರ್ ಬೌಲಿಂಗ್ ಮೇಲೆಯೂ ತುಂಬಾ ಉತ್ತಮವಾಗಿದ್ದಾರೆ

4 ಓವರ್ ಬೌಲಿಂಗ್ ಮೇಲೆಯೂ ತುಂಬಾ ಉತ್ತಮವಾಗಿದ್ದಾರೆ

"ಹಾರ್ದಿಕ್ ಪಾಂಡ್ಯ ಟಿ20ಯಲ್ಲಿ 4 ಓವರ್ ಬೌಲಿಂಗ್ ಮೇಲೆಯೂ ತುಂಬಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಒಂದು ವಿಷಯದ ಬಗ್ಗೆ ಗಮನವಿರಲಿ, ಭಾರತ ತಂಡದಲ್ಲಿ ಸಮಬಲ ಸಾಧಿಸುತ್ತಿರುವ ಏಕೈಕ ಆಟಗಾರ ಹಾರ್ದಿಕ್ ಪಾಂಡ್ಯ. ಅವನಿಲ್ಲದಿದ್ದರೆ, ಎಲ್ಲಾ ಚೆನ್ನಾಗಿ ಹಾಕಿದ ಯೋಜನೆಗಳು ಕುಸಿಯುತ್ತವೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಸಹ ನೀವು ಅವರಿಗೆ ಬದಲಿಯನ್ನು ಹುಡುಕಬಹುದು. ಆದರೆ ಹಾರ್ದಿಕ್ ಪಾಂಡ್ಯ ಇಲ್ಲದಿದ್ದರೆ ನೀವು ಆ 11ರ ಬಳಗ ಏನು ಮಾಡಲು ಸಾಧ್ಯವಿಲ್ಲ," ಎಂದು ಆಕಾಶ್ ಚೋಪ್ರಾ ತಿಳಿಸಿದರು.

ಪಾಂಡ್ಯರನ್ನು ಚೆಂಡಿನೊಂದಿಗೆ ವಿವೇಚನೆಯಿಂದ ಬಳಸಬೇಕು

ಪಾಂಡ್ಯರನ್ನು ಚೆಂಡಿನೊಂದಿಗೆ ವಿವೇಚನೆಯಿಂದ ಬಳಸಬೇಕು

ಏಷ್ಯಾ ಕಪ್ ಸಮಯದಲ್ಲಿ ಭಾರತ ತಂಡವು ಹಾರ್ದಿಕ್ ಪಾಂಡ್ಯರನ್ನು ಚೆಂಡಿನೊಂದಿಗೆ ವಿವೇಚನೆಯಿಂದ ಬಳಸಬೇಕು ಎಂದು ಆಕಾಶ್ ಚೋಪ್ರಾ ಸಲಹೆ ನೀಡಿದ್ದಾರೆ.

"ಆದ್ದರಿಂದ ಬಹುಶಃ ಪಾಕಿಸ್ತಾನದ ವಿರುದ್ಧ ಅವರು ನಾಲ್ಕು ಓವರ್‌ಗಳನ್ನು ಬೌಲ್ ಮಾಡಬಹುದು, ಆದರೆ ಅಫ್ಘಾನಿಸ್ತಾನ ಅಥವಾ ಶ್ರೀಲಂಕಾದಂತಹ ತಂಡಗಳ ವಿರುದ್ಧ ಅಲ್ಲ. ಆದ್ದರಿಂದ ಅವರನ್ನು ವಿವೇಚನೆಯಿಂದ ಬಳಸಿಕೊಳ್ಳಿ," ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.

ಏಷ್ಯಾಕಪ್‌ಗೆ ಭಾರತ ತಂಡ

ಏಷ್ಯಾಕಪ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ , ರವಿಂಚದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.

ಸ್ಟ್ಯಾಂಡ್‌ಬೈ ಆಟಗಾರರು; ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಮತ್ತು ದೀಪಕ್ ಚಹಾರ್.

Story first published: Friday, August 12, 2022, 21:05 [IST]
Other articles published on Aug 12, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+