For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್‌ನಲ್ಲಿ ಭಾರತದ ಸೋಲಿಗೆ ಕಾರಣವೇ ಈ 4 ಅಂಶ: ವಿಶ್ವಕಪ್‌ನಲ್ಲಿ ಈ ತಪ್ಪು ತಿದ್ದಿಕೊಳ್ಳುತ್ತಾ ಟೀಮ್ ಇಂಡಿಯಾ

Asia Cup: 4 major Reasons for team India failure in asia cup: need correct before world cup

ಏಷ್ಯಾ ಕಪ್ ಟೂರ್ನಿಗೆ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದ ಭಾರತ ಮತ್ತೊಂದು ಬಾರಿ ಟೂರ್ನಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದ್ದರೂ ಅದಕ್ಕೆ ಪೂರಕ ಪ್ರದರ್ಶನ ನೀಡಲು ವಿಫಲವಾಗಿದೆ. ಇದರ ಪರಿಣಾಮವಾಗಿ ಭಾರತ ಏಷ್ಯಾ ಕಪ್‌ನ ಸೂಪರ್ 4 ಹಂತದಿಂದ ಹೊರಬಿದ್ದಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಸತತ ಸೋಲು ಅನುಭವಿಸಿದ ಭಾರತ ಫೈನಲ್‌ಗೇರುವ ಅವಕಾಶವನ್ನು ಕಳೆದುಕೊಂಡಿದೆ. ಈ ಸೋಲಿನಿಂದಾಗಿ ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ಸಂಪೂರ್ಣವಾಗಿ ಸಿದ್ಧವಾಗಿಲ್ಲ ಎಂದು ಸ್ಪಷ್ಟವಾಗಿದೆ.

ಇನ್ನು ಈ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ತಂಡದಲ್ಲಿನ ಕೆಲ ಪ್ರಮುಖ ನ್ಯೂನ್ಯತೆಗಳು ಬೆಳಕಿಗೆ ಬಂದಿದೆ. ಚುಟುಕು ವಿಶ್ವಕಪ್‌ಗೆ ಇನ್ನು ಕೆಲವೇ ವಾರಗಳು ಮಾತ್ರವೇ ಬಾಕಿಯಿರುವ ಕಾರಣ ಭಾರತ ಇದಕ್ಕೆಲ್ಲಾ ಶೀಘ್ರವಾಗಿ ಉತ್ತರವನ್ನು ಹುಡುಕಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್.

ಹಾಗಾದರೆ ಏಷ್ಯಾ ಕಪ್‌ನಲ್ಲಿ ನೀಡಿದ ಪ್ರದರ್ಶನದಿಂದಾಗಿ ಕಂಡುಬಂದಿರುವ ಟೀಮ್ ಇಂಡಿಯಾದ ಆ ನಾಲ್ಕು ನ್ಯೂನ್ಯತೆಗಳು ಯಾವುದು? ಸೋಲಿಗೆ ಕಾರಣವಾದ ಆ ಅಂಶಗಳು ಯಾವುದು? ಮುಂದೆ ಓದಿ..

ಬೌಲಿಂಗ್‌ನಲ್ಲಿನ ವೈಫಲ್ಯ

ಬೌಲಿಂಗ್‌ನಲ್ಲಿನ ವೈಫಲ್ಯ

ಯುಎಇನಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಭಾರತ ಬೌಲಿಂಗ್‌ನಲ್ಲಿ ವೈಫಲ್ಯತೆಯನ್ನು ಅನುಭವಿಸಿರುವುದು ಸ್ಪಷ್ಟವಾಗಿದೆ. ಸವಾಲಿನ ಮೊತ್ತವನ್ನು ಪೇರಿಸಿದ ಹೊರೆತಾಗಿಯೂ ಭಾರತ ಸೂಪರ್ 4 ಹಂತದ ಎರಡು ಪಂದ್ಯಗಳಲ್ಲಿಯೂ ಅದನ್ನು ರಕ್ಷಿಸುವಲ್ಲಿ ವಿಫಲವಾಯಿತು. ನಿರ್ಣಾಯಕ ಹಂತದಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗದಿರುವುದರ ಜೊತೆಗೆ ಈ ಹಂತದಲ್ಲಿ ಸಾಕಷ್ಟು ರನ್‌ಗಳನ್ನು ಬಿಟ್ಟುಕೊಟ್ಟಿದ್ದು ಕೂಡ ತಂಡದ ಸೋಲಿಗೆ ಕಾರಣವಾಯಿತು.

ಆಯ್ಕೆಗಾರರ ಮಹಾ ಪ್ರಮಾದ

ಆಯ್ಕೆಗಾರರ ಮಹಾ ಪ್ರಮಾದ

ಇನ್ನು ಭಾರತದ ಬೌಲಿಂಗ್ ವಿಭಾಗದಲ್ಲಿ ಹಿನ್ನಡೆ ಅನುಭವಿಸಲು ಆಯ್ಕೆ ಮಂಡಳಿಯ ದೊಡ್ಡ ಪ್ರಮಾದವೂಈ ಕಾರಣವಾಗಿದೆ. ಏಷ್ಯಾ ಕಪ್‌ನಂತಾ ಮಹತ್ವದ ಟೂರ್ನಿಗೆ ಕೇವಲ ಮೂವರು ಸ್ಪೆಶಲಿಸ್ಟ್ ವೇಗಿಗಳನ್ನು ಮಾತ್ರವೇ ಆಯ್ಕೆ ಮಾಡಿದ್ದು ತಂಡದ ಸಂಯೋಜನೆಯಲ್ಲಿ ದೊಡ್ಡ ಹಿನ್ನಡೆಗೆ ಕಾರಣವಾಯಿತು. ಅದರಲ್ಲೂ ಅಂತಿಮ ಹಂತದಲ್ಲಿ ಆವೇಶ್ ಖಾನ್ ಅನಾರೋಗ್ಯದಿಂದ ಬಳಲಿದ ಕಾರಣ ಸೂಪರ್ 4 ಹಂತದ ಎರಡು ಪ್ರಮುಖ ಪಂದ್ಯಗಳಲ್ಲಿ ಭಾರತ ಎರಡು ಸ್ಪೆಶಲಿಸ್ಟ್ ವೇಗಿಗಳು ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಕಣಕ್ಕಿಳಿಯುವ ಅನಿವಾರ್ಯತೆಗೆ ಸಿಲುಕಿತ್ತು. ಇದು ತಂಡಕ್ಕೆ ದೊಡ್ಡ ಹಿನ್ನಡೆಯುಂಟು ಮಾಡಿದೆ.

ಮಧ್ಯಮ ಓವರ್‌ಗಳಲ್ಲಿ ಚುರುಕಿಲ್ಲದ ಬ್ಯಾಟಿಂಗ್

ಮಧ್ಯಮ ಓವರ್‌ಗಳಲ್ಲಿ ಚುರುಕಿಲ್ಲದ ಬ್ಯಾಟಿಂಗ್

ಇನ್ನು ಬ್ಯಾಟಿಂಗ್ ವಿಭಾಗವೂ ಅಂದುಕೊಂಡಂತಾ ಪ್ರದರ್ಶನ ನೀಡಲು ವಿಫಲವಾಗಿರುವುದು ಏಷ್ಯಾ ಕಪ್‌ನ ಸೋಲಿಗೆ ಕಾರಣಗಳಲ್ಲಿ ಒಂದು. ಅದರಲ್ಲೂ ಪವರ್‌ಪ್ಲೇನಲ್ಲಿ ಭಾರತ ತಂಡದಿಂದ ಉತ್ತಮ ರನ್‌ಗಳು ಹರಿದುಬಂದರೂ ಅದಾದ ಬಳಿಕ ಮಧ್ಯದ ಓವರ್‌ಗಳಲ್ಲಿ ರನ್‌ವೇಗವನ್ನು ಹೆಚ್ಚಿಸಲು ಭಾರತ ತಂಡ ವಿಫಲವಾಯಿತು. ಈ ಹಂತದಲ್ಲಿ ಭಾರತ ತಂಡ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿದ್ದು ತಂಡಕ್ಕೆ ಹಿನ್ನಡೆಯುಂಟಾಯಿತು. ಹೀಗಾಗಿ ಆರಂಭದಲ್ಲಿ ಪಡೆದುಕೊಂಡ ವೇಗವನ್ನು ಈ ಹಂತದಲ್ಲಿ ಮುಂದುವರಿಸಿಕೊಂಡು ಹೋಗಲು ಭಾರತ ತಂಡ ವಿಫಲವಾಗಿದೆ.

Asia Cup 2022- ಸಹ ಆಟಗಾರ ಜೊತೆ ರೋಹಿತ್ ಶರ್ಮಾ ಮಾಡಿದ್ದು ಸರೀನಾ!! | *Cricket | OneIndia Kannada
ಫಿನಿಷಿಂಗ್‌ನಲ್ಲಿಯೂ ಎಡವಿದ ಭಾರತ

ಫಿನಿಷಿಂಗ್‌ನಲ್ಲಿಯೂ ಎಡವಿದ ಭಾರತ

ಏಷ್ಯಾ ಕಪ್‌ಗಿಂತಲೂ ಹಿಂದಿನವರೆಗೂ ಭಾರತ ಹೆಚ್ಚು ಯಶಸ್ಸು ಸಾಧಿಸಿದ್ದು ಫಿನಿಷಿಂಗ್ ಹಂತದಲ್ಲಿ. ಈ ಹಂತದಲ್ಲಿ ವೇಗವಾಗಿ ರನ್‌ಗಳನ್ನು ಗಳಿಸುತ್ತಾ ಎದುರಾಳಿ ಮೇಲೆ ಮತ್ತಷ್ಟು ಒತ್ತಡ ಹಾಕುವಲ್ಲಿ ಭಾರತ ಯಶಸ್ವಿಯಾಗಿತ್ತು. ಆದರೆ ಏಷ್ಯಾಕಪ್‌ನಲ್ಲಿ ಭಾರತ ತಂಡ ಮತ್ತೆ ತಂಡದ ಸಂಯೋಜನೆಯಲ್ಲಿ ಮಾಡಿದ ಎಡವಟ್ಟು ಹೊಡೆತ ನೀಡಿತು. ಡೆತ್ ಓವರ್‌ಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಆಡುವ ದಿನೇಶ್ ಕಾರ್ತಿಕ್ ಅವರನ್ನು ಆಡುವ ಬಳಗದಿಂದ ಹೊರಗಿಟ್ಟು ಅಂತಿಮ ಐದು ಓವರ್‌ಗಳಲ್ಲಿ ವೇಗವಾಗಿ ರನ್‌ ಕದಿಯುವ ಆಟಗಾರನಿಲ್ಲದೆ ತಂಡ ಎಡವಿತು. ದಿನೇಶ್ ಕಾರ್ತಿ್ ಬದಲಿಗೆ ಕಣಕ್ಕಿಳಿದ ರಿಷಬ್ ಪಂತ್ ಎಂದಿನಂತೆ ಚುಟುಕು ಮಾದರಿಯಲ್ಲಿ ವೈಫಲ್ಯ ಅನುಭವಿಸಿದರು. ಇನ್ನು ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ದೀಪಕ್ ಹೂಡಾ ಅವರನ್ನು ಫಿನಿಷರ್ ಆಗಿ ಕಣಕ್ಕಿಳಿಸುವಂತಾ ಕೆಟ್ಟ ಪ್ರಯೋಗಗಳು ಏಷ್ಯಾಕಪ್‌ನಂತಾ ನಿರ್ಣಾಯಕ ವೇದಿಕೆಯಲ್ಲಿಯೂ ನಡಿಯಿತು. ಈ ರೀತಿಯ ಪ್ರಯೋಗಗಳು ತಂಡದ ಮೇಲೆ ಕೆಟ್ಟ ಪರಿಣಾಮ ಬೀರುವ ಜೊತೆಗೆ ಉತ್ತಮ ಲಯದಲ್ಲಿರುವ ಆಟಗಾರರ ಮೇಲೂ ಒತ್ತಡ ಬೀರುತ್ತವೆ ಎಂಬ ಬಲವಾದ ಅಭಿಪ್ರಾಉಗಳ ಮಧ್ಯೆಯೂ ಇಂಥಾ ಪ್ರಯೋಗಗಳು ಭಾರತ ತಂಡದ ಮ್ಯಾನೇಜ್‌ಮೆಂಟ್‌ನಲ್ಲಿ ನಡೆದಿರುವುದು ವಿಪರ್ಯಾಸ. ಈ ಎಲ್ಲಾ ಅಂಶಗಳನ್ನು ಟೀಮ್ ಇಂಡಿಯಾ ಯಾವ ರೀತಿಯಾಗಿ ಸರಿಪಡಿಸಿಕೊಳ್ಳಳಿದೆ ಎಂಬುದನ್ನು ಕಾದು ನೋಡಬೇಕಿದೆ.

Story first published: Thursday, September 8, 2022, 16:02 [IST]
Other articles published on Sep 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+