ಬೆಂಗಳೂರು, ಏಪ್ರಿಲ್ 5: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 17ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್ ಸೋಲಿನೊಂದಿಗೆ ಮತ್ತೆ ಮುಖಭಂಗ ಅನುಭವಿಸಿದೆ. ಆರ್ಸಿಬಿ ಪರ ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್ ಮಾಡಿದ ಹೋರಾಟವನ್ನು ಕೆಕೆಆರ್ನ ಆ್ಯಂಡ್ರೆ ರಸೆಲ್ ವ್ಯರ್ಥಗೊಳಿಸಿದರು.
ಮೈಖೇಲ್ ಕನ್ನಡ - ಐಪಿಎಲ್ 2019 'ವಿಶೇಷ ಮುಖಪುಟ'
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಆರಂಭವನ್ನೇ ಕಂಡಿತು. ಮೊದಲ ವಿಕೆಟ್ (ಪಾರ್ಥಿವ್ ಪಟೇಲ್) ಮುರಿಯುವಾಗ ಆರ್ಸಿಬಿ ಖಾತೆಯಲ್ಲಿ 64 ರನ್ಗಳಿದ್ದವು. ಅನಂತರ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಕೂಡ ಭರ್ಜರಿ ಬ್ಯಾಟಿಂಗ್ ನೀಡಿದರು.
ಸ್ಕೋರ್ಕಾರ್ಡ್ಗೆ ಕಳಗಿನ ಲಿಂಕ್ ಕ್ಲಿಕ್ ಮಾಡಿ
ಪಾರ್ಥಿವ್ 25, ವಿರಾಟ್ ಕೊಹ್ಲಿ 84 (49 ಎಸೆತ), ಎಬಿಡಿ 63 (32), ಮಾರ್ಕಸ್ ಸ್ಟೊಯಿನಿಸ್ ಅಜೇಯ 28 ರನ್ನೊಂದಿಗೆ ಬೆಂಗಳೂರು 20 ಓವರ್ಗೆ 3 ವಿಕೆಟ್ ಕಳೆದು 205 ರನ್ ಪೇರಿಸಿರು. ಆದರೆ ದುರ್ಬಲ ಫೀಲ್ಡಿಂಗ್ ಮತ್ತು ಬೌಲಿಂಗ್ನಿಂದಾಗಿ ಆರ್ಸಿಬಿ ಟೂರ್ನಿಯಲ್ಲಿ ಸತತ 5ನೇ ಸೋಲಿನ ಕಹಿ ಅನುಭವಿಸಿತು.
ಡೆಲ್ಲಿ vs ಹೈದರಾಬಾದ್ ಪಂದ್ಯಕ್ಕೂ ಮೊದಲಿನ ರಿಷಬ್-ರಶೀದ್ ಸಂಭಾಷಣೆ ಸೆರೆ!
206 ರನ್ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ಸುನಿಲ್ ನರೇನ್ (10), ರಾಬಿನ್ ಉತ್ತಪ್ಪ (33), ಕ್ರಿಸ್ ಲಿನ್ (43), ನಿತೀಶ್ ರಾಣಾ (37), ದಿನೇಶ್ ಕಾರ್ತಿಕ್ (19) ವಿಕೆಟ್ ಗಳನ್ನು ಕಳೆದುಕೊಂಡಿತು. ಪಂದ್ಯದ ಫಲಿತಾಂಶ ಬೆಂಗಳೂರು ಪರ ವಾಲುವುದರಲ್ಲಿತ್ತು.
IPL 2019: ವಿರಾಟ್ ಕೊಹ್ಲಿಯೀಗ ಐಪಿಎಲ್ನಲ್ಲಿ ಅತ್ಯಧಿಕ ರನ್ ಸರದಾರ
ಆದರೆ ಅಂತಿಮ ಓವರ್ಗಳಲ್ಲಿ ಆ್ಯಂಡ್ರೆ ರಸೆಲ್ ಪಂದ್ಯವನ್ನು ತಿರುಗಿಸಿದರು. 13 ಎಸೆತಕ್ಕೆ 48 ರನ್ ಚಚ್ಚಿದ ರಸೆಲ್ ಕೆಕೆಆರ್ ಗೆಲುವಿನ ಹೀರೋ ಆಗಿ ಮತ್ತೆ ಮಿಂಚಿದರು. ಕೆಕೆಆರ್ 19.1 ಓವರ್ಗೆ 5 ವಿಕೆಟ್ ನಷ್ಟದಲ್ಲಿ 206 ರನ್ ಗುರಿ ಮುಟ್ಟಿತು. ರಸೆಲ್ ಪಂದ್ಯಶ್ರೇಷ್ಠರೆನಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ (ಸಿ), ಪಾರ್ಥಿವ್ ಪಟೇಲ್ (ವಿಕೆ), ಎಬಿ ಡಿ ವಿಲಿಯರ್ಸ್, ಮಾರ್ಕಸ್ ಸ್ಟೊಯಿನಿಸ್, ಮೊಯೆನ್ ಅಲಿ, ಅಕ್ಷದೀಪ್ ನಾಥ್, ಪವನ್ ನೇಗಿ, ಟಿಮ್ ಸೌಥಿ, ನವದೀಪ್ ಸೈನಿ, ಯುಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಕ್ರಿಸ್ ಲಿನ್, ಸುನಿಲ್ ನರೇನ್, ರಾಬಿನ್ ಉತ್ತಪ್ಪ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ಸಿ & ವಿಕೆ), ಶುಭ್ಮಾನ್ ಗಿಲ್, ಆಂಡ್ರೆ ರಸೆಲ್, ಪಿಯೂಶ್ ಚಾವ್ಲಾ, ಕುಲ್ದೀಪ್ ಯಾದವ್, ಲಾಕೀ ಫರ್ಗುಸನ್, ಪ್ರಸಿದ್ಧ್ ಕೃಷ್ಣ.