For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶದ ಸರಣಿಗೆ ಮುನ್ನ ಮಹತ್ವದ ಸಭೆ ಕರೆದ ಬಿಸಿಸಿಐ: ಏನೆಲ್ಲಾ ಬದಲಾವಣೆ ಸಾಧ್ಯತೆ?

BCCI Call For Special Meeting Before Team India Travel To Bangladesh: Rohit And Dravid Will Attend

ಭಾರತ ತಂಡ ಬಾಂಗ್ಲಾದೇಶದ ವಿರುದ್ಧದ ಸರಣಿಗೆ ಢಾಕಾಗೆ ತೆರಳುವ ಮುನ್ನ ಬಿಸಿಸಿಐ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಜೊತೆ ಸಭೆ ನಡೆಸಲು ನಿರ್ಧರಿಸಿದೆ. ಹಿರಿಯ ಆಟಗಾರ ವಿರಾಟ್ ಕೊಹ್ಲಿ ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಸೋತ ಬಗ್ಗೆ ವಿವರಣೆ ನೀಡಬೇಕಿದೆ. ನಂತರ ಭಾರತ ತಂಡದಲ್ಲಿ ಮುಂದೆ ಮಾಡಬಹುದಾದ ಬದಲಾವಣೆಗಳ ಬಗ್ಗೆ ಹೆಚ್ಚಿನ ಚರ್ಚೆಯಾಗಲಿದೆ. ನಾಯಕತ್ವ ಹಂಚಿಕೆ ಮತ್ತು ಬೇರೆ ಬೇರೆ ಕೋಚ್ ನೇಮಕಾತಿ ಮಾಡುವ ಬಗ್ಗೆ ಕೂಡ ಚರ್ಚೆಯಾಗಲಿದೆ.

"ಸಭೆ ಯಾವತ್ತು ನಡೆಯುತ್ತದೆ ಎನ್ನುವ ವಿಚಾರ ಗೊತ್ತಿಲ್ಲ. ಆದರೆ, ಬಾಂಗ್ಲಾದೇಶಕ್ಕೆ ತೆರಳುವ ಮುನ್ನ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್‌ರನ್ನು ಭೇಟಿಯಾಗಬೇಕು. ಮುಂದಿನ ವಿಶ್ವಕಪ್‌ಗಾಗಿ ತಯಾರಿ ಕುರಿತು ಚರ್ಚೆ ನಡೆಯಲಿದೆ. ನಾವು ಯಾವ ಬದಲಾವಣೆ ಬಯಸುತ್ತಿದ್ದೇವೆ ಎನ್ನುವುದು ರೋಹಿತ್ ಶರ್ಮಾ ಮತ್ತು ರಾಹುಲ್‌ ದ್ರಾವಿಡ್‌ಗೆ ತಿಳಿದಿದೆ. ಟಿ20 ತಂಡಕ್ಕೆ ಬೇರೆ ನಾಯಕ ಮತ್ತು ತರಬೇತುದಾರರನ್ನು ನೇಮಿಸುವ ಬಗ್ಗೆ ಚರ್ಚೆ ನಡೆಯಲಿದೆ. ನಂತರ ಬಿಸಿಸಿಐ ಈ ಬಗ್ಗೆ ಅಧಿಕೃತ ತೀರ್ಮಾನ ಮಾಡುತ್ತದೆ" ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ

ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ

ಸಭೆಯಲ್ಲಿ ಮುಖ್ಯವಾಗಿ ಭಾರತ ಟಿ20 ತಂಡದ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಯಲಿದೆ. ರೋಹಿತ್ ಶರ್ಮಾ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕರಾಗಿ ಮುಂದುವರೆಯಲಿದ್ದು, ಹಾರ್ದಿಕ್ ಪಾಂಡ್ಯ ಟಿ20 ತಂಡಕ್ಕೆ ನಾಯಕರಾಗಿ ಮುಂದುವರೆಯುವ ಸಾಧ್ಯತೆ ಇದೆ. ಟಿ20 ತಂಡಕ್ಕೆ ಬೇರೆ ತರಬೇತುದಾರರನ್ನು ನೇಮಕ ಮಾಡುವ ಬಗ್ಗೆ ಕೂಡ ಚರ್ಚೆ ಮಾಡಲಾಗುತ್ತದೆ.

ರೋಹಿತ್ ಶಮಾಘ 2023ರ ಏಕದಿನ ವಿಶ್ವಕಪ್‌ ಮುಗಿಯುವವರೆಗೆ ಏಕದಿನ ಮತ್ತು ಟೆಸ್ಟ್ ತಂಡದ ನಾಯಕರಾಗಿ ಮುಂದುವರೆಯುವುದು ಖಚಿತವಾಗಿದೆ. ಆದರೆ, 2024ರ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಹಾರ್ದಿಕ್ ಪಾಂಡ್ಯಗೆ ನಾಯಕ ಸ್ಥಾನ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ.

ಬಿಸಿಸಿ ನೂತನ ಆಯ್ಕೆ ಸಮಿತಿ: 80 ಅರ್ಜಿಗಳನ್ನು ಸ್ವೀಕರಿಸಿದ ಬಿಸಿಸಿಐ

ಬಿಸಿಸಿಐನ ಪ್ರಮುಖರು ಸಭೆಯಲ್ಲಿ ಭಾಗಿ

ಬಿಸಿಸಿಐನ ಪ್ರಮುಖರು ಸಭೆಯಲ್ಲಿ ಭಾಗಿ

ಭಾರತ ಈಗ ಇಂಗ್ಲೆಂಡ್ ದಾರಿಯನ್ನು ಅನುಸರಿಸಲು ಬಯಸುತ್ತಿದೆ. ರೋಹಿತ್ ಶರ್ಮಾಗೆ ಟಿ20 ನಾಯಕತ್ವದ ಹೊರೆಯನ್ನು ಕಡಿಮೆ ಮಾಡುವ ಮೂಲಕ, ಏಕದಿನ ವಿಶ್ವಕಪ್‌ ಕಡೆಗೆ ಹೆಚ್ಚಿನ ಗಮನ ಹರಿಸಲು ಮನವಿ ಮಾಡಲಾಗುತ್ತದೆ.

ಈ ಸಭೆಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ ಶಾ, ಬಿಸಿಸಿಐ ಖಜಾಂಚಿ ಆಶಿಶ್ ಶೇಲಾರ್, ಆಯ್ಕೆಗಾರರ ನಿರ್ಗಮನ ಅಧ್ಯಕ್ಷ ಚೇತನ್ ಶರ್ಮಾ ಭಾಗವಹಿಸಲಿದ್ದಾರೆ.

ಟಿ20 ಮಾದರಿಗೆ ಬೇರೆ ತರಬೇತುದಾರ

ಟಿ20 ಮಾದರಿಗೆ ಬೇರೆ ತರಬೇತುದಾರ

ಬಿಸಿಸಿಐ ರಾಹುಲ್ ದ್ರಾವಿಡ್ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಬಯಸಿದೆ. ಭಾರತ ಟಿ20 ತಂಡಕ್ಕೆ ಬೇರೆ ತರಬೇತುದಾರರನ್ನು ನೇಮಿಸಲು ಮುಂದಾಗಿದೆ. ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸೇರಿದಂತೆ ಹಲವರು ಭಾರತೀಯ ಕೋಚ್‌ ನೇಮಿಸಲು ಒತ್ತಾಯಿಸಿದ್ದಾರೆ. ಆದರೆ, ಬಿಸಿಸಿಐ ವಿದೇಶಿ ಕೋಚ್‌ಗಳನ್ನು ಪರಿಗಣಿಸಲು ನಿರ್ಧರಿಸಿದೆ.

ದ್ರಾವಿಡ್ ಆಗಾಗ್ಗೆ ವಿಶ್ರಾಂತಿ ಪಡೆಯುತ್ತಿರುವ ಟೀಕೆ ವ್ಯಕ್ತವಾಗಿರುವ ಕಾರಣ ಟಿ20 ತಂಡಕ್ಕೆ ಬೇರೆ ಕೋಚ್ ನೇಮಕ ಮಾಡುವುದರಿಂದ ಅವರ ಮೇಲಿನ ಒತ್ತಡ ಕಡಿಮೆಯಾಗಲಿದೆ. ನಂತರ ಅವರು ಸಂಪೂರ್ಣವಾಗಿ ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ತರಬೇತಿ ಕಡೆಗೆ ಗಮನ ಹರಿಸಲಿದ್ದಾರೆ.

ಇದನ್ನು ಬದಲಾಯಿಸಲು ಬಿಸಿಸಿಐ ಬಯಸಿದೆ. ಭಾರತಕ್ಕೆ T20 ವಿಧಾನದ ಮರುಶೋಧನೆಯ ಅಗತ್ಯವಿದೆ ಮತ್ತು ಅಲ್ಲಿ ಅವರಿಗೆ ಹೊಸ ಆಲೋಚನೆಗಳು ಬೇಕಾಗುತ್ತವೆ. ಗೌತಮ್ ಗಂಭೀರ್ ಮತ್ತು ಇತರರು ಭಾರತೀಯ ಕೋಚ್‌ಗಾಗಿ ಕೇಳಿದ್ದರೂ, ಬಿಸಿಸಿಐ ವಿದೇಶಿ ಕೋಚ್‌ನ ಆಲೋಚನೆಗಳಿಗೆ ಮುಕ್ತವಾಗಿದೆ. ಇದು ದ್ರಾವಿಡ್ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ, ಅವರು ಆಗಾಗ್ಗೆ ವಿರಾಮಕ್ಕಾಗಿ ಟೀಕೆಗಳನ್ನು ಎದುರಿಸುತ್ತಿದ್ದಾರೆ.

"ನಾವು ಈಗಾಗಲೇ ರೋಹಿತ್ ಶರ್ಮಾ ಅವರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಟಿ 20 ಮಾದರಿಗೆ ಹೊಸ ನಾಯಕನ ನೇಮಿಸುವ ಬಗ್ಗೆ ಅವರು ಸಮ್ಮತಿ ಸೂಚಿಸಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಜೊತೆಯೂ ಅದೇ ರೀತಿ ಮಾಡುತ್ತೇವೆ. ಅವರ ಹೊರೆ ಕಡಿಮೆ ಮಾಡಲು ಬಯಸುತ್ತೇವೆ. ಶೀಘ್ರದಲ್ಲೇ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ" ಎಂದು ಬಿಸಿಸಿಐನ ಉನ್ನತ ಅಧಿಕಾರಿ ಖಚಿತಪಡಿಸಿದ್ದಾರೆ.

Story first published: Sunday, November 27, 2022, 22:48 [IST]
Other articles published on Nov 27, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+