ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕನ್ನಡಿಗನೂ ಸೇರಿ ಮೂವರು ಕ್ರಿಕೆಟಿಗರ ಹೆಸರು 'ಅರ್ಜುನ'ಕ್ಕೆ ಶಿಫಾರಸು

BCCI recommended Shikhar Dhawan, KL Rahul and Jasprit Bumrah for Arjuna Award

ನವದೆಹಲಿ: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮೂವರು ಕ್ರಿಕೆಟಿಗರ ಹೆಸರುಗಳನ್ನು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ 'ಅರ್ಜುನ'ಕ್ಕೆ ಶಿಫಾರಸು ಮಾಡಿದೆ. ಎಎನ್‌ಐ ಜೂನ್ 30ರ ಬುಧವಾರ ಈ ಸಂಗತಿ ತಿಳಿಸಿದೆ. ಮೂವರೂ ಸದ್ಯ ರಾಷ್ಟ್ರೀಯ ತಂಡಗಳ ಕರ್ತವ್ಯದಲ್ಲಿ ಬ್ಯುಸಿಯಾಗಿದ್ದಾರೆ.

ಟಿ20 ವಿಶ್ವಕಪ್‌ ತಾಣ, ಆರಂಭ-ಅಂತ್ಯದ ದಿನಾಂಕ ಅಧಿಕೃತ ಘೋಷಣೆ!ಟಿ20 ವಿಶ್ವಕಪ್‌ ತಾಣ, ಆರಂಭ-ಅಂತ್ಯದ ದಿನಾಂಕ ಅಧಿಕೃತ ಘೋಷಣೆ!

ಬಿಸಿಸಿಐ, ಅರ್ಜುನಕ್ಕೆ ಶಿಫಾರಸು ಮಾಡಿರುವ ಮೂವರು ಆಟಗಾರರೆಂದರೆ ಎಡಗೈ ಬ್ಯಾಟ್ಸ್‌ಮನ್‌ ಶಿಖರ್ ಧವನ್, ಆರಂಭಿಕ ಬ್ಯಾಟ್ಸ್‌ಮನ್‌, ಕನ್ನಡಿಗ ಕೆಎಲ್ ರಾಹುಲ್ ಮತ್ತು ತಂಡದ ಪ್ರಮುಖ ವೇಗಿ ಜಸ್‌ಪ್ರೀತ್‌ ಬೂಮ್ರಾ. ವೈಟ್‌ಬಾಲ್‌ನಲ್ಲಿನ ಪ್ರದರ್ಶನಕ್ಕಾಗಿ ಮೂವರನ್ನು ಪ್ರಶಸ್ತಿಗೆ ಸೂಚಿಸಲಾಗಿದೆ.

ಶಿಖರ್ ಧವನ್ ತಂಡದ ನಾಯಕರಾಗಿ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಕೆಎಲ್ ರಾಹುಲ್ ಮತ್ತು ಪ್ರಮುಖ ವೇಗಿ ಜಸ್‌ಪ್ರೀತ್‌ ಬೂಮ್ರಾ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಪ್ಲೇಯಿಂಗ್ XIನಲ್ಲಿ ಬೂಮ್ರಾ ಕಾಣಿಸಿಕೊಂಡಿದ್ದರು. ಆದರೆ ರಾಹುಲ್‌ ಆ ಪಂದ್ಯದಲ್ಲಿ ಬೆಂಚ್‌ನಲ್ಲಿದ್ದರು.

WTC ಫೈನಲ್‌ ಜೆರ್ಸಿ ಹರಾಜಿಗಿಟ್ಟ ಟಿಮ್ ಸೌಥೀ, ಕಾರಣ ಕೇಳಿದ್ರೆ ಮನ ಕರಗುತ್ತೆ!WTC ಫೈನಲ್‌ ಜೆರ್ಸಿ ಹರಾಜಿಗಿಟ್ಟ ಟಿಮ್ ಸೌಥೀ, ಕಾರಣ ಕೇಳಿದ್ರೆ ಮನ ಕರಗುತ್ತೆ!

ಶ್ರೀಲಂಕಾದಲ್ಲಿರುವ ಧವನ್‌ಗೆ ಅಲ್ಲಿ ಜುಲೈ 13ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಮೂರು ಪಂದ್ಯಗಳ ಟಿ20ಐ ಸರಣಿ ನಡೆಯಲಿದೆ. ಇಂಗ್ಲೆಂಡ್‌ನಲ್ಲಿರುವ ಬೂಮ್ರಾ ಮತ್ತು ರಾಹುಲ್‌ಗೆ ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ.

Story first published: Wednesday, June 30, 2021, 17:12 [IST]
Other articles published on Jun 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X