
ವೇತನ ಹೆಚ್ಚಳಕ್ಕೆ ಬಿಸಿಸಿಐ ಒಪ್ಪಿಗೆ
ದೇಸಿ ಕ್ರಿಕೆಟರ್ಗಳ ಆರ್ಥಿಕ ಸಮಸ್ಯೆಯ ಬಗ್ಗೆ ಅರಿವಿರುವ ಬಿಸಿಸಿಐ, ದೇಶಿ ಕ್ರಿಕೆಟರ್ಗಳ ವೇತನ ಹೆಚ್ಚಳಕ್ಕೆ ನಿರ್ಧರಿಸಿದೆ ಎಂದು ವರದಿಯೊಂದು ಹೇಳಿದೆ. ಮುಂಬರಲಿರುವ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಆಟಗಾರರು ಉತ್ತಮ ಸಂಭಾವನೆ ಪಡೆಯಲಿದ್ದಾರೆ. ಎಲ್ಲಾ ದೇಶಿ ಕ್ರಿಕೆಟರ್ಗಳ ವೇತನ ಹೆಚ್ಚಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲ ಮತ್ತು ಖಜಾಂಚಿ ಅರುಣ್ ಧುಮಾಲ್ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಎಷ್ಟು ವೇತನ ಹೆಚ್ಚು?
ದೈನಿಕ್ ಜಾಗ್ರಣ್ ವರದಿಯ ಪ್ರಕಾರ, 20ಕ್ಕಿಂತ ಹೆಚ್ಚು ಪ್ರಥಮರ್ಜೆ ಪಂದ್ಯಗಳನ್ನಾಡಿರುವ ಅನುಭವಿ ಆಟಗಾರರು ಪ್ರತೀ ದಿನಕ್ಕೆ 60,000 ರೂ. ಪಡೆದುಕೊಳ್ಳಲಿದ್ದಾರೆ. ಕಡಿಮೆ ಅನುಭವಿ ಆಟಗಾರರು ಪ್ರತೀ ದಿನಕ್ಕೆ 45,000 ರೂ. ಪಡೆದುಕೊಳ್ಳಲಿದ್ದಾರೆ. ಈಗಿನ ವೇತನ ರಚನೆಯ ಪ್ರಕಾರ ಆಟಗಾರರು ಪ್ರತೀ ದಿನಕ್ಕೆ 35,000 ಪಡೆಯುತ್ತಿದ್ದಾರೆ. ಹೊಸ ವೇತನವನ್ನು ಪ್ರತೀ ಪಂದ್ಯಕ್ಕೆ ಹೋಲಿಸಿದರೆ 1.4 ಲಕ್ಷ ರೂ. ಆಗುತ್ತದೆ. ಇದರ ಅರ್ಧದಷ್ಟು ಬೆಂಚ್ ಆಟಗಾರರಿಗೆ ನೀಡಲಾಗುತ್ತದೆ. ಜೊತೆಗೆ 1000 ರೂ. ದೈನಂದಿನ ಭತ್ಯೆ ಕೂಡ ನೀಡಲಾಗುತ್ತದೆ.

ಕಳೆದ ಸೀಸನ್ನಿಂದ ವೇತನ ಇಲ್ಲ
ಜಾಗತಿಕ ಪಿಡುಗಿನ ಕಾರಣ ಕಳೆದ ಸೀಸನ್ ಬಳಿಕ ದೇಸಿ ಕ್ರಿಕೆಟರ್ಗಳಿಗೆ ವೇತನ ನೀಡಿಲ್ಲ. ಹೀಗಾಗಿ ಸಹಜವಾಗೇ ಆಟಗಾರರು ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ. ಆದರೆ ಈಗ ವೇತನ ಹೆಚ್ಚಳ ಘೋಷಿಸಿರುವುದು ದೇಶಿ ಕ್ರಿಕೆಟರ್ಗಳಿಗೆ ದೊಡ್ಡ ನಿರಾಳತೆ ನೀಡಿದೆ. ಆಟಗಾರರು ಪ್ರತೀ ವಿಜಯ್ ಹಜಾರೆ ಮತ್ತು ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಗಳಿಗೆ 35,000 ರೂ. ಮತ್ತು 17,500 ರೂ. ವೇತನ ಪಡೆದುಕೊಳ್ಳಲಿದ್ದಾರೆ.


Click it and Unblock the Notifications












