
ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟಿಗರಾದ ವೇಗಿ ಇಶಾಂತ್ ಶರ್ಮಾ ಮತ್ತು ಬ್ಯಾಟರ್ ಅಜಿಂಕ್ಯ ರಹಾನೆಯನ್ನು ಟೀಂ ಇಂಡಿಯಾ ಟೆಸ್ಟ್ ತಂಡದಿಂದ ಕೈ ಬಿಟ್ಟ ಬಿಸಿಸಿಐ ನಿರ್ಧಾರವನ್ನ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಶ್ಲಾಘಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ, ಬಿಸಿಸಿಐ ಹಿರಿಯ ಆಟಗಾರರಾದ ರಹಾನೆ ಮತ್ತು ಇಶಾಂತ್ ಶರ್ಮಾರಿಗೆ ಕೊಕ್ ನೀಡಿತು. ಈಗಾಗಲೇ ಈ ಸರಣಿಯಲ್ಲಿ ಟೀಂ ಇಂಡಿಯಾ 2-1ರಿಂದ ಮುನ್ನಡೆ ಸಾಧಿಸಿದ್ದು, ಇಂಗ್ಲೆಂಡ್ ಸರಣಿ ಸಮಬಲ ಸಾಧಿಸಲು ಗೆಲ್ಲಲೇಬೇಕಾಗಿದೆ.
ಐದು ಪಂದ್ಯಗಳ ಟೆಸ್ಟ್ ಸರಣಿಯು ಅಂತಿಮ ಪಂದ್ಯಕ್ಕೂ ಮುನ್ನ ಕೋವಿಡ್-19 ಕಾರಣಗಳಿಂದಾಗಿ ಸ್ಥಗಿತಗೊಂಡಿದ್ದರ ಜೊತೆಗೆ ಮುಂದೂಡಲಾಗಿತ್ತು. ಈ ಏಕೈಕ ಟೆಸ್ಟ್ ಜುಲೈ 1 ಮತ್ತು 5 ರ ನಡುವೆ ಆಡಲಾಗುತ್ತದೆ. ಇಂಗ್ಲೆಂಡ್ ಪ್ರವಾಸಕ್ಕಾಗಿ ಬಿಸಿಇಸೈ ಇತ್ತೀಚೆಗೆ ಭಾರತೀಯ ತಂಡವನ್ನು ಪ್ರಕಟಿಸಿತು, ಇದರಲ್ಲಿ ಪ್ರಸಿದ್ಧ್ ಕೃಷ್ಣ ಮತ್ತು ಕೆ.ಎಸ್ ಭರತ್ ರಂತಹ ಕೆಲವು ಪ್ರತಿಭಾವಂತ ಯುವಕರನ್ನು ಹೊಂದಿದೆ. ಅದೇ ಸಮಯದಲ್ಲಿ, ಮಂಡಳಿಯು ಇಶಾಂತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ಅವರ ಅನುಭವಿ ಜೋಡಿಯನ್ನು ಕಡೆಗಣಿಸಿದೆ.
"ಆಯ್ಕೆಗಾರರು ಅಜಿಂಕ್ಯ ರಹಾನೆ ಮತ್ತು ಇಶಾಂತ್ ಶರ್ಮಾ ಅವರನ್ನು ಟೆಸ್ಟ್ ತಂಡದಿಂದ ತೆಗೆದುಹಾಕಿರುವುದು ಅದ್ಭುತವಾಗಿದೆ ಎಂದು ನಾನು ಭಾವಿಸುತ್ತೇನೆ. ಅವರು ವಯಸ್ಸಾಗುತ್ತಿದ್ದಾರೆ ಮತ್ತು ತಮ್ಮ ಸಾಮರ್ಥ್ಯಗಳನ್ನು ಉತ್ತಮವಾಗಿ ನಿರ್ವಹಿಸುತ್ತಿಲ್ಲ. ಹೀಗಾಗಿ ನೀವು ಮುಂದುವರಿಯಬೇಕು ಮತ್ತು ಯುವಕರನ್ನು ತರಬೇಕು. ಇದರಿಂದ ಅವರು ಈಗಿನಿಂದಲೇ ಅನುಭವಿಗಳೊಂದಿಗೆ ಅನುಭವವನ್ನು ಪಡೆಯುತ್ತಾರೆ" ಎಂದು ಹಾಗ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದರು.
ಇದಾದ ಬಳಿಕ ಶ್ರೇಯಸ್ ಅಯ್ಯರ್ ಕುರಿತಾಗಿಯು ಬ್ರಾಡ್ ಹಾಗ್ ಮೆಚ್ಚುಗೆಯ ಮಾತನಾಡಿದ್ದಾರೆ.
"(ಶ್ರೇಯಸ್) ಅಯ್ಯರ್ ಅವರು (ವಿರಾಟ್) ಕೊಹ್ಲಿಯೊಂದಿಗೆ ಬ್ಯಾಟಿಂಗ್ ಮಾಡಲು ಹಲವಾರು ವರ್ಷಗಳನ್ನು ಕಳೆಯಲಿದ್ದಾರೆ, ದೀರ್ಘ ಫಾರ್ಮ್ಗಾಗಿ ಆಟವನ್ನು ಕಲಿಯುತ್ತಾರೆ. ಅವರು ಗೇಮ್ನಲ್ಲಿ ಯಶಸ್ವಿಯಾಗಲು ಮತ್ತು ತನ್ನ ಆಟವನ್ನು ಅಭಿವೃದ್ಧಿಪಡಿಸಲು ಇದ್ರಿಂದ ಸಾಧ್ಯವಾಗುತ್ತದೆ. ಇದಲ್ಲದೆ ನಿಮಗೆ (ಪ್ರಸಿದ್) ಕೃಷ್ಣ ಸಿಕ್ಕಿದ್ದಾರೆ, ಅವರು ಬುಮ್ರಾ ಮತ್ತು ಶಮಿ ಜೊತೆಗೆ ಆಡಲಿದ್ದಾರೆ. ಆದ್ದರಿಂದ ಯುವ ಆಟಗಾರರನ್ನು ಪ್ರೋತ್ಸಾಹಿಸಲು ಇದು ನಿರ್ಧಾರವಾಗಿದೆ ಎಂಬ ಅಭಿಪ್ರಾಯ ಪಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯದ ಬಳಿಕ ಟೀಂಡ ಇಂಡಿಯಾ ವೈಟ್ ಬಾಲ್ ಕ್ರಿಕೆಟ್ ಆಡಲಿದ್ದು, ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಜುಲೈ 7ರಿಂದ ಟಿ20 ಪಂದ್ಯಗಳು ಪ್ರಾರಂಭಗೊಳ್ಳಲಿದ್ದು, ಇದಾದ ಬಳಿಕ ಏಕದಿನ ಸರಣಿ ಸಹ ನಡೆಯಲಿದೆ.