For Quick Alerts
ALLOW NOTIFICATIONS  
For Daily Alerts
 

'ಪ್ರತಿಷ್ಠೆಯ ಮೇಲೆ ಆಡಲು ಸಾಧ್ಯವಿಲ್ಲ': ತಂಡದ ಆಯ್ಕೆಯ ಬಗ್ಗೆ ವೆಂಕಟೇಶ್ ಪ್ರಸಾದ್ ಕಟು ಟೀಕೆ

Cant Play On Prestige: Former Bowler Venkatesh Prasads Criticism of Indian Team Selection

ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತ ಭಾರತ ಕ್ರಿಕೆಟ್ ತಂಡದ ಆಯ್ಕೆ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಏಕದಿನ ತಂಡಕ್ಕೆ ತಂಡವನ್ನು ಪ್ರಕಟಿಸಿದಾಗಿನಿಂದ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಹಿರಿಯ ಆಟಗಾರರು ವಿಶ್ರಾಂತಿ ಪಡೆಯುವುದರಿಂದ ಫಾರ್ಮ್‌ಗೆ ಮರಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಗಮನಾರ್ಹವೆಂದರೆ, ಇಬ್ಬರೂ ಹಿರಿಯ ಆಟಗಾರರಿಗೆ ಏಕದಿನ ಪ್ರವಾಸಕ್ಕೆ ವಿಶ್ರಾಂತಿ ನೀಡಲಾಗಿದ್ದು, ಶಿಖರ್ ಧವನ್ ಭಾರತ ತಂಡದ ನಾಯಕತ್ವವನ್ನು ವಹಿಸಲಿದ್ದಾರೆ.

ಆಟಗಾರರು ಖ್ಯಾತಿಯ ಮೇಲೆ ಆಡಲು ಸಾಧ್ಯವಿಲ್ಲ

ಆಟಗಾರರು ಖ್ಯಾತಿಯ ಮೇಲೆ ಆಡಲು ಸಾಧ್ಯವಿಲ್ಲ

ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು, ಆಟಗಾರರು ಖ್ಯಾತಿಯ ಮೇಲೆ ಆಡಲು ಸಾಧ್ಯವಿಲ್ಲ ಮತ್ತು ಅವರ ಫಾರ್ಮ್‌ನಿಂದ ಹೊರಗಿರುವ ನಂತರವೂ ಭಾರತೀಯ ಕ್ರಿಕೆಟ್‌ನ ಕೆಲವು ದೊಡ್ಡ ಆಟಗಾರರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಹೇಗೆ ಕೈಬಿಡಲಾಯಿತು ಎಂದು ಅವರು ಹೈಲೈಟ್ ಮಾಡಿದ್ದಾರೆ.

ಈ ದೊಡ್ಡ ಆಟಗಾರರು ಒಮ್ಮೆ ಫಾರ್ಮ್‌ನಲ್ಲಿ ಕುಸಿತ ಅನುಭವಿಸಿದರೆ, ಅವರು ಕಠಿಣ ಪರಿಶ್ರಮದಿಂದ ಹಿಂದಿರುಗಲು ದೇಶೀಯ ಕ್ರಿಕೆಟ್‌ಗೆ ಮರಳಬೇಕು ಎಂದು ಅವರು ಹೇಳಿದರು. ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಬಗ್ಗೆ ಹೆಚ್ಚುತ್ತಿರುವ ಕೂಗಿನ ವೇಳೆಯಲ್ಲಿ ವೆಂಕಟೇಶ್ ಪ್ರಸಾದ್ ಅವರಿಂದ ಈ ಹೇಳಿಕೆಗಳು ಬಂದಿವೆ.

ಫಾರ್ಮ್‌ನಲ್ಲಿಲ್ಲದವರು ದೇಶೀಯ ಕ್ರಿಕೆಟ್‌ಗೆ ಹಿಂತಿರುಗಿಬೇಕಿತ್ತು

ಫಾರ್ಮ್‌ನಲ್ಲಿಲ್ಲದವರು ದೇಶೀಯ ಕ್ರಿಕೆಟ್‌ಗೆ ಹಿಂತಿರುಗಿಬೇಕಿತ್ತು

"ಒಂದು ಸಮಯವಿತ್ತು, ನೀವು ಫಾರ್ಮ್‌ನಿಂದ ಹೊರಗುಳಿದಾಗ, ಖ್ಯಾತಿಯನ್ನು ಲೆಕ್ಕಿಸದೆ ನಿಮ್ಮನ್ನು ಕೈಬಿಡಲಾಗುತ್ತಿತ್ತು. ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಹೀರ್ ಖಾನ್, ಹರ್ಭಜನ್ ಸಿಂಗ್ ಎಲ್ಲರನ್ನೂ ಫಾರ್ಮ್‌ನಲ್ಲಿಲ್ಲದಿದ್ದಾಗ ಕೈಬಿಡಲಾಗಿದೆ. ಅವರು ದೇಶೀಯ ಕ್ರಿಕೆಟ್‌ಗೆ ಹಿಂತಿರುಗಿದ್ದಾರೆ, ರನ್ ಗಳಿಸಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಒಂದು ಪುನರಾಗಮನ ಮಾಡಲು ಮಾನದಂಡಗಳು ಇರುತ್ತಿದ್ದವು," ಎಂದು ವೆಂಕಟೇಶ್ ಪ್ರಸಾದ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಒಳಿತಿಗಾಗಿ ದೊಡ್ಡ ಕ್ರಮಗಳ ಅಗತ್ಯವಿದೆ

ಒಳಿತಿಗಾಗಿ ದೊಡ್ಡ ಕ್ರಮಗಳ ಅಗತ್ಯವಿದೆ

"ಈಗ ತಂಡದಲ್ಲಿ ತೀವ್ರವಾಗಿ ಬದಲಾಗಿದೆ, ಇಲ್ಲಿ ಫಾರ್ಮ್‌ನಿಂದ ಹೊರಗಿದ್ದಕ್ಕಾಗಿ ವಿಶ್ರಾಂತಿ ಇದೆ. ಇದು ಫಾರ್ಮ್ ಕಂಡುಕೊಳ್ಳುವ ಯಾವುದೇ ಮಾರ್ಗವಲ್ಲ. ದೇಶದಲ್ಲಿ ಸಾಕಷ್ಟು ಪ್ರತಿಭೆಗಳಿದ್ದಾರೆ ಮತ್ತು ಖ್ಯಾತಿಯ ಮೇಲೆ ಆಡಲು ಸಾಧ್ಯವಿಲ್ಲ. ಭಾರತದ ಶ್ರೇಷ್ಠ ಪಂದ್ಯ ವಿಜೇತರಲ್ಲಿ ಒಬ್ಬರಾದ ಅನಿಲ್ ಕುಂಬ್ಳೆ ಹೀಗೆ ಹೇಳಿದ್ದರು, "ಅನೇಕ ಸಂದರ್ಭಗಳಲ್ಲಿ, ಒಳಿತಿಗಾಗಿ ದೊಡ್ಡ ಕ್ರಮಗಳ ಅಗತ್ಯವಿದೆ," ಕನ್ನಡಿಗ ಬೌಲರ್ ವೆಂಕಟೇಶ್ ಪ್ರಸಾದ್ ಬರೆದಿದ್ದಾರೆ.

ಎರಡನೇ ಮತ್ತು ಮೂರನೇ ಟಿ20 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 1 ಮತ್ತು 11 ಸ್ಕೋರ್‌ಗಳನ್ನು ದಾಖಲಿಸಿದರು. ಬ್ಯಾಟರ್ ಆಕ್ರಮಣಕಾರಿ ಕ್ರಿಕೆಟ್ ಆಡಲು ಪ್ರಯತ್ನಿಸುತ್ತಿರುವುದನ್ನು ನೋಡಲಾಯಿತಾದರೂ, ಆದರೆ ದೀರ್ಘ ಕಾಲದ ಬ್ಯಾಟಿಂಗ ಮಾಡಲು ವಿಫಲರಾದರು ಮತ್ತು ಇದರಿಂದ ಫಲಿತಾಂಶದ ಮೇಲೆ ಹೊಡೆತ ಬಿದ್ದಿತು.

ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿಯೂ 11 ಮತ್ತು 20 ರನ್‌

ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿಯೂ 11 ಮತ್ತು 20 ರನ್‌

ಟಿ20 ಸರಣಿಯ ಮೊದಲು ವಿರಾಟ್ ಕೊಹ್ಲಿ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿಯೂ 11 ಮತ್ತು 20 ರನ್‌ಗಳನ್ನು ದಾಖಲಿಸಿದ್ದರು. ವಿರಾಟ್ ಕೊಹ್ಲಿ ಕೊನೆಯದಾಗಿ ನವೆಂಬರ್ 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಈಡನ್ ಗಾರ್ಡನ್ಸ್‌ನಲ್ಲಿ ಅಂತಾರಾಷ್ಟ್ರೀಯ ಶತಕ ಗಳಿಸಿದ್ದರು ಮತ್ತು ಅದರ ನಂತರ ಮೂರಂಕಿ ರನ್ ಗಳಿಸಲು ವಿಫಲರಾದರು.

ಲಂಡನ್‌ನ ಓವಲ್‌ನಲ್ಲಿ ಮಂಗಳವಾರದಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದ್ದಾರೆ.

Story first published: Monday, July 11, 2022, 19:47 [IST]
Other articles published on Jul 11, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+