ಲಂಡನ್. ಜೂನ್ 11: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರ 11ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಟೀಂ ಇಂಡಿಯಾ ಸೆಣಸಾಟ ನೋಡಲು ಓವಲ್ ಮೈದಾನದಲ್ಲಿ ಬಂದ ಉದ್ಯಮಿ ವಿಜಯ್ ಮಲ್ಯ ಅವರಿಗೆ ಕೆಟ್ಟ ಅನುಭವವಾಗಿದೆ.
ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು
ಭಾರತ-ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಲು ಮಲ್ಯ ಅವರು ಬರ್ಮಿಂಗ್ ಹ್ಯಾಮ್ ನ ಮೈದಾನಕ್ಕೆ ಬಂದಿದ್ದರು. ನಂತರ ಈ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದ್ದು ಗಮನಿಸಿ ಈ ಬಗ್ಗೆ ಪ್ರತಿಕ್ರಿಯಿಸಿದ್ದರು.

'ನಾನು ಭಾರತದ ಎಲ್ಲಾ ಪಂದ್ಯಗಳನ್ನು ನೋಡಲು ಬರುತ್ತಿದ್ದೇನೆ' ಎಂದು ಟ್ವೀಟ್ ಮಾಡಿದ್ದರು. ಅದರಂತೆ, ಇಂದಿನ ಪಂದ್ಯ ನೋಡಲು ಬಂದಿದ್ದರು.
ಗ್ಯಾಲರಿ: ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು, ಉಪಾಂತ್ಯಕ್ಕೆ ಲಗ್ಗೆ ಇಟ್ಟ ಭಾರತ
ಆದರೆ, ಮೈದಾನಕ್ಕೆ ಎಂಟ್ರಿ ಕೊಡುತ್ತಿದ್ದ ಮಲ್ಯರನ್ನು ಕಂಡ ಭಾರತೀಯ ಮೂಲದ ಪ್ರೇಕ್ಷಕರು, 'ಕಳ್ಳ ಕಳ್ಳ' ಎಂದು ಕರೆದು ಕಿಚಾಯಿಸಿದರು.
ಲಂಡನ್ನಿನಲ್ಲಿ ಜಸ್ಟೀಸ್ ಅಂಡ್ ಕೇರ್ ಸಂಸ್ಥೆಗೆ ಹಣ ಸಂಗ್ರಹಿಸಲು ಚಾರಿಟಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇದರಿಂದ ಟೀಂ ಇಂಡಿಯಾದ ಆಟಗಾರರು ಮುಜುಗರ ಅನುಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು. (ಒನ್ಇಂಡಿಯಾ ಸುದ್ದಿ)