ಮುಂಬೈ, ಫೆಬ್ರವರಿ 01: ಚೆನ್ನೈನ ಹೊಟೇಲ್ ವೇಟರ್ ರೊಬ್ಬರು ನೀಡಿದ ಸಲಹೆ ಪಡೆದ ಮೇಲೆ ನನ್ನ ಆಟದಲ್ಲಿ ಸುಧಾರಣೆ ಕಾಣಲು ಸಾಧ್ಯವಾಯಿತು ಎಂದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ವೇಟರ್ ನೀಡಿದ ಸಲಹೆ ಏನು ಮುಂದೆ ಓದಿ...
ಒಮ್ಮೆ ಹೊಟೇಲ್ ವೊಂದರ ವೇಟರ್ ಆಟಕ್ಕೆ ಸಂಬಂಧಿಸಿದಂತೆ ನೀಡಿದ ಸಲಹೆಯೊಂದನ್ನು ವಿನಮ್ರತೆಯಿಂದ ಕೇಳಿಸಿಕೊಂಡು, ಆ ಸಲಹೆಯನ್ನು ಆಟದಲ್ಲಿ ಅಳವಡಿಸಿಕೊಂಡಿದ್ದರಂತೆ. ಈ ವಿಷಯವನ್ನು ಸಚಿನ್ ಅವರೇ ಹೇಳಿಕೊಂಡಿದ್ದಾರೆ. ನಾವು ಯಾರದ್ದೇ ಸಲಹೆಯನ್ನು ಸ್ವೀಕರಿಸಲು ಸಿದ್ಧವಾಗಿದ್ದರೆ ನಾವು ಇಂಪ್ರೂವ್ ಆಗ್ತೇವೆ. ನಾನು ಚೆನ್ನೈನಲ್ಲಿದ್ದಾಗ ಓರ್ವ ಹೊಟೇಲ್ ವೇಟರ್ ನನ್ನ ಬಳಿಗೆ ಬಂದು 'ನೀವು ಅನ್ಯಥಾ ಭಾವಿಸದಿದ್ದರೆ ಒಂದು ಮಾತು ಹೇಳ್ತೀನಿ'ಎಂದ್ರು. ನಾನು ಹೇಳಿ ಅಂದೆ.
