ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಡಿಸೆಂಬರ್ 19 ರಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ನಿರ್ಧಾರದೊಂದಿಗೆ ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭವಿಷ್ಯದ ಬಗ್ಗೆ ಇದ್ದ ಸಸ್ಪೆನ್ಸ್ ಅಂತ್ಯಗೊಂಡಿದೆ. ಭದ್ರತಾ ಕಾರಣಗಳಿಗಾಗಿ ಭಾರತ ತಂಡ ಪಾಕಿಸ್ತಾನ ಪ್ರವಾಸವನ್ನು ನಿರಾಕರಿಸಿತ್ತು. ಇದೀಗ ಟೀಮ್ ಇಂಡಿಯಾದ ಎಲ್ಲಾ ಪಂದ್ಯಗಳು ತಟಸ್ಥ ಸ್ಥಳಗಳಲ್ಲಿ ನಡೆಯಲಿವೆ. ಇದಾದ ಬಳಿಕ ಪಾಕಿಸ್ತಾನದ ಮಾಜಿ ಆಟಗಾರರು ಹಾಗೂ ಕ್ರಿಕೆಟ್ ತಜ್ಞರ ಹೇಳಿಕೆಗಳು ಹೊರಬೀಳುತ್ತಿವೆ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಅವರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳಿಗೆ ಎರಡು ದೇಶಗಳ ಗಡಿಯಲ್ಲಿ ಸ್ಟೇಡಿಯಂ ನಿರ್ಮಾಣ ಮಾಡಬೇಕು ಎಂದು ಸೂಚಿಸಿದ್ದಾರೆ.

ಅಹ್ಮದ್ ಶೆಹಜಾದ್ ವೀಡಿಯೊದಲ್ಲ ಹೇಳಿರುವ ಪ್ರಕಾರ, ಕ್ರಿಕೆಟ್ ಸ್ಟೇಡಿಯಂ ಭಾರತ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿರಬೇಕು. ಒಂದು ಗೇಟ್ ಭಾರತದಲ್ಲಿ ಮತ್ತು ಇನ್ನೊಂದು ಪಾಕಿಸ್ತಾನದಲ್ಲಿ ತೆರೆಯಬೇಕು ಎಂದು ಶಹಜಾದ್ ಹೇಳಿದ್ದಾರೆ. 2008ರಿಂದ ಭಾರತ ತಂಡ ಪಾಕಿಸ್ತಾನಕ್ಕೆ ಹೋಗಿಲ್ಲ. ಈ ಸಂದರ್ಭಗಳಲ್ಲಿ ಪಾಕಿಸ್ತಾನ ತಂಡವು ವಿವಿಧ ಐಸಿಸಿ ಟೂರ್ನಿಗಳಿಗೆ ಭಾಗವಹಿಸಲು ಭಾರತಕ್ಕೆ ಬಂದಿದೆ.
ಯೂಟ್ಯೂಬರ್ ನಾದಿರ್ ಅಲಿ ಸಂದರ್ಶನದಲ್ಲಿ ಶಹಜಾದ್, 'ನಾನು ಪಾಡ್ಕಾಸ್ಟ್ ಮಾಡಿದ್ದೇನೆ. ಅದರಲ್ಲಿ ಭಾರತ ಮತ್ತು ಪಾಕಿಸ್ತಾನ ಗಡಿಯ ಬಳಿ ಸ್ಟೇಡಿಯಂ ನಿರ್ಮಿಸಲು ಸಲಹೆ ನೀಡಿದ್ದೇನೆ. ಒಂದು ಗೇಟ್ ಭಾರತದ ಕಡೆ ಇರುತ್ತದೆ. ಇನ್ನೊಂದು ಗೇಟ್ ಪಾಕಿಸ್ತಾನದ ಕಡೆ ಇರುತ್ತದೆ. ಆಟಗಾರರು ತಮ್ಮ ತಮ್ಮ ಗೇಟ್ಗಳಿಂದ ಬಂದು ಆಡುತ್ತಾರೆ. ಆದರೆ ಆಗಲೂ ಬಿಸಿಸಿಐ ಮತ್ತು ಅವರ ಸರ್ಕಾರಕ್ಕೆ ಸಮಸ್ಯೆಗಳಿರುತ್ತವೆ, ಅವರ ಆಟಗಾರರು ಮೈದಾನಕ್ಕೆ ಬಂದಾಗ, ಅವರು ಅದನ್ನು ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಹೈಬ್ರಿಡ್ ಮಾದರಿ ಎಂದು ಐಸಿಸಿ ಖಚಿತಪಡಿಸಿದ ನಂತರ, ಭಾರತಕ್ಕೆ ಆತಿಥ್ಯ ವಹಿಸುವ ಸುವರ್ಣಾವಕಾಶ ಪಾಕಿಸ್ತಾನ ಕಳೆದುಕೊಂಡಿದೆ. ಈ ನಿರ್ಧಾರದಿಂದ ಪಾಕಿಸ್ತಾನಕ್ಕೆ ಬರಲು ನೆರೆಯ ದೇಶಗಳಿಗೆ ಬಾಗಿಲು ಮುಚ್ಚಿದೆ ಎಂದು ಶಹಜಾದ್ ಅಭಿಪ್ರಾಯಪಟ್ಟಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಹೊರತಾಗಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಸೇರಿಕೊಳ್ಳಲಿದೆ.
ಓವಲ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2017ರ ಫೈನಲ್ನಲ್ಲಿ ಭಾರತ ತಂಡವನ್ನು 180 ರನ್ಗಳಿಂದ ಪಾಕಿಸ್ತಾನ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಹೀಗಾಗಿ ಪಾಕಿಸ್ತಾನ ಈ ಟೂರ್ನಿಯ ಹಾಲಿ ಚಾಂಪಿಯನ್ ಆಗಿದೆ. ಈ ವರ್ಷದ ಆರಂಭದಲ್ಲಿ ನ್ಯೂಯಾರ್ಕ್ನಲ್ಲಿ ನಡೆದ 2024ರ ಟಿ20 ವಿಶ್ವಕಪ್ನಲ್ಲಿ ಉಭಯ ತಂಡಗಳು ಕೊನೆಯದಾಗಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 6 ರನ್ಗಳಿಂದ ಗೆದ್ದಿತ್ತು.