ಬೆಂಗಳೂರು: ಮಡಿದ ಅಮ್ಮ, ಅಕ್ಕನ ನೆನೆದು ಭಾರತ ವನಿತಾ ಕ್ರಿಕೆಟ್ ತಂಡದ ಆಟಗಾರ್ತಿ, ಕನ್ನಡತಿ ವೇದಾ ಕೃಷ್ಣಮೂರ್ತಿ ಭಾವನಾತ್ಮಕ ಪತ್ರ ಬರೆದಿದ್ದಾರೆ. ವೇದಾ ಕೃಷ್ಣಮೂರ್ತಿ ಅವರ ಅಮ್ಮ ಚೆಲುವಾಂಬ ಮತ್ತು ಸಹೋದರಿ ವತ್ಸಲಾ ಕೃಷ್ಣಮೂರ್ತಿ ಇತ್ತೀಚೆಗಷ್ಟೇ ಕೋವಿಡ್-19ನಿಂದಾಗಿ ಸಾವನ್ನಪ್ಪಿದ್ದರು.
ಕೊರೊನಾ ಲಸಿಕೆ ಹಾಕಿಸಿಕೊಂಡ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
ಮೂಲತಃ ಚಿಕ್ಕಮಗಳೂರಿನ ಕಡೂರಿನವರಾದ ವೇದಾ ಕೃಷ್ಣಮೂರ್ತಿಯ ತಾಯಿ ಮೊದಲು ಕೋವಿಡ್-19ಗೆ ಬಲಿಯಾಗಿದ್ದರೆ, ಆ ಬಳಿಕ ವೇದಾ ಅಕ್ಕ ವತ್ಸಲಾ ಕೂಡ ಮಾರಕ ಸೋಂಕಿಗೆ ಕೊನೆಯುಸಿರೆಳೆದಿದ್ದರು. ಹೀಗಾಗಿ ವೇದಾ ಇಬ್ಬರನ್ನೂ ಸ್ಮರಿಸಿ ಮನಕಲುಕುವ ಪತ್ರ ಬರೆದಿದ್ದಾರೆ.
To my dearest Amma and Akka ❤️ pic.twitter.com/NLj7kAYQXN
— Veda Krishnamurthy (@vedakmurthy08) May 10, 2021
ಟ್ವೀಟ್ ಮಾಡಿರುವ ವೇದಾ, 'ನನ್ನ ಸುಂದರ ಅಮ್ಮ, ಅಕ್ಕಳಿಗೆ, ಕಳೆದ ಕೆಲವು ದಿನಗಳು ಮನೆಯಲ್ಲಿ ನಮಗೆಲ್ಲರಿಗೂ ಹೃದಯದ್ರಾವಕವಾಗಿತ್ತು. ನೀವಿಬ್ಬರೂ ಈ ಮನೆಯ ಅಡಿಪಾಯ. ನೀವಿಬ್ಬರು ನನ್ನ ಜೊತೆಗಿಲ್ಲದ ಈ ದಿನ ಬರಬಹುದು ಎಂದು ನಾನು ಕಲ್ಪನೆಯೂ ಮಾಡಿಕೊಂಡಿರಲಿಲ್ಲ. ಈ ಸಂಗತಿ ನನ್ನ ಹೃದಯ ಹಿಂಡುತ್ತಿದೆ' ಎಂದು ಬರೆದುಕೊಂಡಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ : ಈ ದಾಖಲೆಗಳ ಮೇಲೆ ವಿರಾಟ್ ಕೊಹ್ಲಿ ಕಣ್ಣು
ಮುಂದಿನ ಸಾಲುಗಳಲ್ಲಿ, 'ಅಮ್ಮ ನೀನು ದೈರ್ಯಶಾಲಿ ಮಗುವನ್ನು ಹೊಂದಿದ್ದೆ. ನಾನು ಯಾವುದೇ ಸಂದರ್ಭಗಳಲ್ಲೂ ಪ್ರಾಯೋಗಿಕವಾಗಿರುವಂತೆ ನನ್ನ ಗುಣ ಬಂದಿದ್ದೆ ನಿನ್ನಿಂದ. ನಾನು ನೋಡಿದವರಲ್ಲಿ ಸುಂದರ, ನಿಸ್ವಾರ್ಥ ವ್ಯಕ್ತಿ ನೀನು. ಅಕ್ಕ, ನಿನಗೆ ನಾನು ಅತೀ ಇಷ್ಟದ ವ್ಯಕ್ತಿಯಾಗಿದ್ದೆ ಎಂದು ನನಗೆ ಗೊತ್ತು. ನೀನೊಬ್ಬಳು ಹೋರಾಟಗಾರ್ತಿ. ನಿನ್ನ ಸ್ಫೂರ್ತಿಯಿಂದ ನಾನು ಕೊನೇ ನಿಮಿಷದವರೆಗೂ ಬಿಟ್ಟುಕೊಡದೆ ಹೋರಾಡುವುದನ್ನು ಕಲಿತೆ' ಎಂದು ಉದ್ದ ಪತ್ರ ಬರೆದಿದ್ದಾರೆ.