
ಬೆಂಗಳೂರು, ಏಪ್ರಿಲ್ 21: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಭಾನುವಾರ ನಡೆದ ಸರಣಿ ಬಾಂಬ್ಬ್ಲಾಸ್ಟ್ಗೆ ಸಂತಾಪ ಸೂಚಿಸಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟಿಗರು ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಶಾಂಗ್ರಿ-ಲಾ ಹೋಟೆಲ್ ಸೇರಿದಂತೆ ಮೂರು ಚರ್ಚ್ಗಳನ್ನು ಗುರಿಯಾಗಿಸಿ ಭಾನುವಾರ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 156 ಮಂದಿ ಮೃತಪಟ್ಟಿದ್ದು, 260ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಈಸ್ಟರ್ ಸಂಭ್ರಮಾಚರಣೆಯನ್ನು ಗುರಿಯಾಗಿಸಿ ಚರ್ಚ್ಗಳ ಮೇಲೆ ಈ ದಾಳಿ ನಡೆದೆ.
ಈ ಕುರಿತಾಗಿ ಭಾರತ ತಂಡದ ನಾಯ ಕೊಹ್ಲಿ ದಿಗ್ಭ್ರಮೆ ವ್ಯಕ್ತ ಪಡಿಸಿದ್ದಾರೆ. "ಶ್ರೀಲಂಕಾದಿಂದ ಕೇಳಿಬಂದ ಸುದ್ದಿ ದಿಗ್ಭ್ರಮೆ ಮೂಡಿಸಿದೆ. ಘಟನೆಯಿಂದಾಗಿ ಹಾನಿ ಎದುರಿಸಿರುವ ಎಲ್ಲರ ಹಿತಕ್ಕಾಗಿ ಪ್ರಾರ್ಥಿಸುತ್ತೇನೆ,'' ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಕ್ರಿಕೆಟಿಗರಾದ ಶಿಖರ್ ಧವನ್ ಮತ್ತು ಸಂದೀಪ್ ಶರ್ಮಾ ಕೂಡ ಟ್ವಿಟರ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.