ಭಾರತದಲ್ಲಿ ಕ್ರಿಕೆಟ್ ಅನ್ನು ಆರಾಧಿಸುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಜನಪ್ರಿಯ ಕ್ರೀಡೆಯೆಂದರೆ ಅದು ಕ್ರಿಕೆಟ್. ಬೇರೆ ದೇಶಗಳಿಗಿಂತಲೂ ಕ್ರಿಕೆಟ್ ಆಟಗಾರರನ್ನು ದೇವರಂತೆ ಕಾಣುವುದು ಇಲ್ಲೇ.
ಇನ್ನು ಭಾರತೀಯ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ ನಂತರ, ಎಂಎಸ್ ಧೋನಿ ಅವರ ಪ್ರಭಾವ ಅಪ್ರತಿಮವಾಗಿದೆ. ಹಲವು ಕ್ರಿಕೆಟಿಗರೂ ಅವರದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರೂ, ಖ್ಯಾತ ವಿಕೆಟ್ಕೀಪರ್-ಬ್ಯಾಟರ್ ಎಂಎಸ್ ಧೋನಿಗೆ ಶ್ರದ್ಧಾಭಕ್ತಿಯ ಅನುಯಾಯಿಗಳನ್ನು ಹೊಂದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಪರ ಎಂಎಸ್ ಧೋನಿ ಮೈದಾನಕ್ಕೆ ಬಂದಾಗಲೆಲ್ಲಾ, ಇಡೀ ಕ್ರೀಡಾಂಗಣವೇ ಹಳದಿ ಬಣ್ಣದಲ್ಲಿ ಮುಳುಗುತ್ತದೆ. ಇದು ಅವರ ಅಪಾರ ಅಭಿಮಾನಿಗಳಿಗೆ ಸಾಕ್ಷಿಯಾಗಿದೆ.
ಕಳೆದ ಹಲವು ವರ್ಷಗಳಲ್ಲಿ, ಎಂಎಸ್ ಧೋನಿಯ ಅಭಿಮಾನಿಗಳ ಹಲವಾರು ನಂಬಲಾಗದ ಕಥೆಗಳು ಹೊರಹೊಮ್ಮಿವೆ. ಇದು ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸುತ್ತದೆ. ಇತ್ತೀಚಿನ ಒಂದು ಘಟನೆಯು ಧೋನಿ ಬೆಂಬಲಿಗರ ಸಮರ್ಪಣಾ ಮನೋಭಾವವನ್ನು ಇನ್ನಷ್ಟು ವಿವರಿಸುತ್ತದೆ.
ಇತ್ತೀಚಿಗೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ ಸಂದರ್ಭದಲ್ಲಿ ತಮ್ಮ ನೆಚ್ಚಿನ ಆಟಗಾರನನ್ನು ವೀಕ್ಷಿಸಲು ಸಿಎಸ್ಕೆ ಅಭಿಮಾನಿಯೊಬ್ಬರು ತಮ್ಮ ಮೂವರು ಪುತ್ರಿಯರೊಂದಿಗೆ ಎಂಎ ಚಿದಂಬರಂ ಕ್ರೀಡಾಂಗಣಕ್ಕೆ ಆಗಮಿಸಿದ್ದರು.

ಆರಂಭದಲ್ಲಿ ಈ ಪಂದ್ಯಕ್ಕಾಗಿ ಟಿಕೆಟ್ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಬ್ಲ್ಯಾಕ್ ಮಾರ್ಕೆಟ್ನಲ್ಲಿ ಟಿಕೆಟ್ ಖರೀದಿಸಲು 64,000 ರೂಪಾಯಿಗಳನ್ನು ಪಾವತಿಸಬೇಕಾಯಿತು ಎಂದು ಅಭಿಮಾನಿ ತಿಳಿಸಿದರು.
"ನನಗೆ ಆನ್ಲೈನ್ನಲ್ಲಿ ಐಪಿಎಲ್ ಪಂದ್ಯದ ಟಿಕೆಟ್ಗಳು ಸಿಗಲಿಲ್ಲ. ಹೀಗಾಗಿ ನಾನು ಬ್ಲ್ಯಾಕ್ ಮಾರ್ಕೆಟ್ನಲ್ಲಿ ಖರೀದಿಸಿದೆ. ಅದು ಒಟ್ಟು 64,000 ರೂಪಾಯಿ ಆಗಿತ್ತು. ನಾನು ಇನ್ನೂ ಹೆಣ್ಣುಮಕ್ಕಳ ಶಾಲಾ ಶುಲ್ಕವನ್ನು ಪಾವತಿಸಿಲ್ಲ. ಆದರೆ ನಾವು ಎಂಎಸ್ ಧೋನಿಯನ್ನು ಒಮ್ಮೆ ನೋಡಬೇಕೆಂದು ಬಯಸಿದ್ದೆವು. ನನ್ನ ಮೂವರು ಹೆಣ್ಣುಮಕ್ಕಳು ಮತ್ತು ನಾನು ತುಂಬಾ ಸಂತೋಷವಾಗಿದ್ದೇವೆ," ಎಂದು ತಂದೆ ಸ್ಪೋರ್ಟ್ವಾಕ್ ಚೆನ್ನೈಗೆ ಹೇಳಿದ್ದಾರೆ.
"ನನ್ನ ತಂದೆ ಐಪಿಎಲ್ ಪಂದ್ಯದ ಟಿಕೆಟ್ಗಳನ್ನು ಪಡೆಯಲು ತುಂಬಾ ಕಷ್ಟಪಟ್ಟಿದ್ದಾರೆ. ಎಂಎಸ್ ಧೋನಿ ಆಡಲು ಮೈದಾನಕ್ಕ ಬಂದಾಗ ನಾವು ತುಂಬಾ ಸಂತೋಷಪಟ್ಟಿದ್ದೇವೆ," ಎಂದು ಅವರ ಚಿಕ್ಕ ಮಗಳು ತಿಳಿಸಿದಳು.
ಈ ತಂದೆಯ ಬದ್ಧತೆ ಟಿಕೆಟ್ ದರಕ್ಕೆ ಮಾತ್ರ ನಿಲ್ಲಲಿಲ್ಲ. ಪಂದ್ಯದ ಟಿಕೆಟ್ಗಳನ್ನು ಪಡೆಯಲು ಮತ್ತು ಮೈದಾನದಲ್ಲಿ ಭಾರತದ ಮಾಜಿ ನಾಯಕನ ಆಟವನ್ನು ವೀಕ್ಷಿಸಲು ತನ್ನ ಹೆಣ್ಣುಮಕ್ಕಳ ಶಾಲಾ ಶುಲ್ಕವನ್ನು ಪಾವತಿಸುವುದನ್ನು ಮುಂದೂಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಸಿಎಸ್ಕೆ ತಂಡದ ಜೆರ್ಸಿ ಧರಿಸಿ, ತಂದೆ ಮತ್ತು ಅವರ ಮೂವರು ಪುತ್ರಿಯರು ಐದು ಬಾರಿಯ ಚಾಂಪಿಯನ್ ತಂಡದ ಟ್ರೇಡ್ಮಾರ್ಕ್ ಫ್ಯಾನ್ಫೇರ್ನಲ್ಲಿ ಉತ್ಸಾಹದಿಂದ ಬಂದಿದ್ದರು ಮತ್ತು ತಮ್ಮ ಬೆಂಬಲವನ್ನು ತೋರಿಸಲು ಶಿಳ್ಳೆ, ಚಪ್ಪಾಳೆ ಹೊಡೆದರು.
ಅಂತಿಮವಾಗಿ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಸಿಎಸ್ಕೆ ತಂಡವು ಏಳು ವಿಕೆಟ್ಗಳ ಗೆಲುವು ಸಾಧಿಸಿತು.
ಇನ್ನು ಸಿಎಸ್ಕೆ ಮಾಜಿ ನಾಯಕ ಮತ್ತು ಸೂಪರ್ಸ್ಟಾರ್ ವಿಕೆಟ್ಕೀಪರ್-ಬ್ಯಾಟರ್ ಎಂಎಸ್ ಧೋನಿ ಅವರು ಈ ಪಂದ್ಯದ ಸಮಯದಲ್ಲಿ ಅಭಿಮಾನಿಗಳಿಗೆ ಹೇಗೆ ಪ್ರಾಂಕ್ ಮಾಡಿದರು ಎಂಬುದನ್ನು ಚೆನ್ನೈ ಸೂಪರ್ ಕಿಂಗ್ಸ್ ವೇಗಿ ತುಷಾರ್ ದೇಶಪಾಂಡೆ ಬಹಿರಂಗಪಡಿಸಿದ್ದಾರೆ.
ಶಿವಂ ದುಬೆ ಔಟಾದ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಎಂಎಸ್ ಧೋನಿ ಬ್ಯಾಟಿಂಗ್ಗೆ ತೆರಳಲು ನಿರ್ಧರಿಸಿದರು. ಈ ವೇಳೆ ರವೀಂದ್ರ ಜಡೇಜಾ ಮೈದಾನಕ್ಕೆ ತೆರಳಲು ಸಂಪೂರ್ಣವಾಗಿ ಪ್ಯಾಡ್ಅಪ್ ಆಗಿದ್ದರು. ಬ್ಯಾಟಿಂಗ್ಗೆ ಹೊರನಡೆಯುವಂತೆ ನಟಿಸಿದರು, ಆದರೆ ನಗುವಿನೊಂದಿಗೆ ಡಗೌಟ್ಗೆ ಹಿಂತಿರುಗಿದರು.
ಆ ಬಳಿಕ ಎಂಎಸ್ ಧೋನಿ ಹೊರನಡೆದರು, ಅವರ ಆಗಮನದೊಂದಿಗೆ ಮೈದಾನದಲ್ಲಿ ಪ್ರೇಕ್ಷಕರ ಹರ್ಷೋದ್ಗಾರ ತೀವ್ರವಾಗಿ ಹೆಚ್ಚಿಸಿತು. ಧೋನಿ ಮೂರು ಎಸೆತಗಳಲ್ಲಿ ಅಜೇಯ ಒಂದು ರನ್ ಗಳಿಸಿದರು ಮತ್ತು ರುತುರಾಜ್ ಗಾಯಕ್ವಾಡ್ ಗೆಲುವಿನ ರನ್ ಗಳಿಸಿ ಇನ್ನಿಂಗ್ಸ್ ಮುಗಿಸಿದರು.