
ಅದ್ಭುತ ಕಮ್ಬ್ಯಾಕ್ ಎಂದು ಮೆಚ್ಚಿದ ವೆಂಗ್ಸರ್ಕಾರ್
ಹಾರ್ದಿಕ್ ಪಾಂಡ್ಯ ಅವರದ್ದು ಅದ್ಭುತ ಕಮ್ಬ್ಯಾಕ್ ಎಂದು ದಿಲೀಪ್ ವೆಂಗ್ಸರ್ಕಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಈ ರೀತಿಯ ಕಮ್ಬ್ಯಾಕ್ಗಾಗಿ ಅವರು ಸಾಕಷ್ಟು ಪರಿಶ್ರಮವನ್ನು ಪಟ್ಟಿರಬೇಕಾಗುತ್ತದೆ. ಫಿಟ್ನೆಸ್ ಮರಳಿಗಳಿಸಲು ಸಾಕಷ್ಟು ಬೆವರುಹರಿಸಿದ್ದಾರೆ. ನಾಯಕನಾಗಿ ಐಪಿಎಲ್ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ. ಆತನೋರ್ವ ಅದ್ಭುತ ಆಲ್ರೌಂಡರ್" ಎಂದಿದ್ದಾರೆ.

ಮುಂದೆ ನಿಂತು ಮುನ್ನಡೆಸುವ ನಾಯಕ
ಮುಂದುವರಿದು ಮಾತನಾಡಿದ ದಿಲೀಪ್ ವೆಂಗ್ಸರ್ಕಾರ್ ಹಾರ್ದಿಕ್ ಪಾಂಡ್ಯ ಸ್ವತಃ ಮುಂದೆ ನಿಂತು ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ನಾಯಕ ಎಂದಿದ್ದಾರೆ. "ಆತ ಎರಡು ವಿಕೆಟ್ಗಳು ಉರುಳಿದಾಗ ಕಣಕ್ಕಿಳಿದು ಬ್ಯಾಟಿಂಗ್ ಮಾಡಿದ್ದಾರೆ. ಹಾಗಾಗಿ ತಾನೇ ಮುಂದೆ ಬಂದು ಮುನ್ನಡೆಸುವ ನಾಯಕ ಆತ. ಅಲ್ಲದೆ ಬೌಲಿಂಗ್ ಕೂಡ ಅದ್ಭಯತವಾಗಿ ಮಾಡಬಲ್ಲರು. ತಂಡವನ್ನು ಕೂಡ ಉತ್ತಮವಾಗಿ ಮು್ನನಡೆಸಿದ್ದಾರೆ. ನಾಯಕನಾಗಿ ಮೊದಲ ಆವೃತ್ತಿಯಲ್ಲಿಯೇ ಉತ್ತಮ ಪ್ರದರ್ಶನ ನೀಡಿದ್ದಾರೆ" ಎಂದಿದ್ದಾರೆ ದಿಲೀಪ್ ವೆಂಗ್ ಸರ್ಕಾರ್.

ಸೀಮಿತ ಓವರ್ಗಳಿಗೆ ಭವಿಷ್ಯದ ನಾಯಕ
ಇನ್ನು ಈ ಸಂದರ್ಭದಲ್ಲಿ ವೆಂಗ್ಸರ್ಕಾರ್ ಭಾರತ ಸೀಮಿತ ಓವರ್ಗಳ ತಂಡಕ್ಕೆ ಹಾರ್ದಿಕ್ ಪಾಂಡ್ಯ ಭವಿಷ್ಯದ ನಾಯಕನಾಗುವ ಅವಕಾಶವಿದೆ ಎಂದಿದ್ದಾರೆ. "ಭವಿಷ್ಯದ ನಾಯಕತ್ವಕ್ಕೆ ಅವರು ಉತ್ತಮವಾದ ಆಯ್ಕೆ. ಆದರೆ ಇದು ಆಯ್ಕೆಗಾರರ ಮೇಲೆ ಅವಲಂಬಿಸಿರುತ್ತದೆ. ಅವರು ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಾರೆ. ಅವರು ಯಾವ ಯೋಜನೆ ಹೊಂದಿರುತ್ತಾರೆ ಎಂಬುದು ಮುಖ್ಯವಾಗುತ್ತದೆ. ಆದರೆ ಹಾರ್ದಿಕ್ ಒಆಂಡ್ಯ ಕಂಡಿತವಾಗಿಯೂ ಅವರ ಪ್ರಮುಖ ಆಯ್ಕೆಯಲ್ಲಿ ಒಬ್ಬರಾಗಿರುತ್ತಾರೆ" ಎಂದಿದ್ದಾರೆ ದಿಲೀಪ್ ವೆಂಗ್ಸರ್ಕಾರ್.

ಭಾರತ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪ ನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಆರ್. ಬಿಷ್ಣೋಯ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್.


Click it and Unblock the Notifications
