ತ್ರಿಕೋನ ಸರಣಿಯಲ್ಲಿ ಕೂಡ ಗೆಲುವು
ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳನ್ನು ಒಳಗೊಂಡ ತ್ರಿಕೋನ ಸರಣಿಯಲ್ಲಿ ಗೆದ್ದ ಭಾರತ ತಂಡಕ್ಕೆ ಕೂಡ ಲಾಲ್ ಚಂದ್ ರಜಪೂತ್ ತರಬೇತುದಾರರಾಗಿದ್ದರು ಎಂದು ಅವರು ಹೇಳಿದರು.
"ಅವರ ತರಬೇತಿಯಲ್ಲೇ ನಾವು ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಸಿಬಿ ಸರಣಿಯನ್ನು ಗೆದ್ದಿದ್ದೇವೆ, ಆದರೆ ನಮಗೆ ನೆನಪಿರುವುದು 2011ರ ವಿಶ್ವಕಪ್ ಗೆಲುವು ಮತ್ತು ಆಗ ತಂಡದ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ಮಾತ್ರ" ಎಂದು ಹೇಳಿದರು.
ಭಾರತ ತಂಡಕ್ಕೆ ಈ ಮೊದಲು ವಿದೇಶಿ ಕೋಚ್ಗಳು ಇದ್ದ ಅವಧಿಯ ಬಗ್ಗೆ ಗಂಭೀರ್ ಪ್ರಶ್ನೆ ಮಾಡಿದರು. "ಡಂಕನ್ ಫ್ಲೆಚರ್ ಮತ್ತು ಜಾನ್ ರೈಟ್ ಅವರು ಯಾವ ವಿಶೇಷ ಕೆಲಸ ಮಾಡಿದ್ದಾರೆ? ನಾವು ವಿದೇಶಿ ತರಬೇತುದಾರರನ್ನು ಬಿಟ್ಟು, ನಮ್ಮ ದೇಶದ ಆಟಗಾರರು ಮತ್ತು ಕೋಚ್ಗಳಲ್ಲಿ ನಂಬಿಕೆ ಇಡಬೇಕು" ಎಂದು ಗಂಭೀರ್ ಸಲಹೆ ನೀಡಿದರು.
IND vs NZ: ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಎಬಿಡಿಯನ್ನು ನೆನಪಿಸುತ್ತದೆ; ರವಿಶಾಸ್ತ್ರಿ
ಬೌಲರ್ಗಳ ಕೊಡುಗೆ ಬಗ್ಗೆ ಶ್ಲಾಘನೆ
2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ನಲ್ಲಿ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ಗಂಭೀರ್, ಭಾರತ ಗೆಲುವಿನಲ್ಲಿ ಬೌಲರ್ಗಳ ಕೊಡುಗೆಯನ್ನು ಶ್ಲಾಘಿಸಿದರು.
"ವಿಶ್ವಕಪ್ ಫೈನಲ್ನಲ್ಲಿ 97 ಮತ್ತು 91 ರನ್ ಗಳಿಸಿದ ಆಟಗಾರರನ್ನು ನಾವು ಯಾವಾಗಲೂ ಏಕೆ ನೆನಪಿಸಿಕೊಳ್ಳಬೇಕು. ಜಹೀರ್ ಖಾನ್ ಮತ್ತು ಹರ್ಭಜನ್ ಸಿಂಗ್ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಬೌಲರ್ ಗಳ ಪ್ರಯತ್ನವು ಬ್ಯಾಟ್ಸ್ಮನ್ಗಳಿಗೆ ಸಮಾನವಾಗಿದೆ, ನಾವು ಅವರನ್ನೂ ನೆನಪಿಸಿಕೊಳ್ಳಬೇಕು" ಎಂದು ಗಂಭೀರ್ ಹೇಳಿದರು.
ರಾಹುಲ್ ದ್ರಾವಿಡ್ ತರಬೇತಿಯಲ್ಲಿ ಉತ್ತಮ ಸಾಧನೆ
ಸದ್ಯ ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶ್ವಕಪ್, ಏಷ್ಯಾಕಪ್ನಲ್ಲಿ ತಂಡ ಉತ್ತಮ ಸಾಧನೆ ಮಾಡದ ಹೊರತಾಗಿ. ದ್ವಿಪಕ್ಷೀಯ ಸರಣಿಗಳಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ.
ಏಕದಿನ, ಟಿ20 ಸರಣಿಗಳಲ್ಲಿ ಭಾರತ ಸಾಕಷ್ಟು ಪ್ರಾಬಲ್ಯ ಸಾಧಿಸಿದೆ. ಟಿ20 ವಿಶ್ವಕಪ್ಗೆ ಮುನ್ನ ಭಾರತ ಬಲಿಷ್ಠ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಗೆದ್ದುಕೊಂಡಿದೆ. ಅವರು ವಿಶ್ರಾಂತಿಯಲ್ಲಿದ್ದಾಗ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಲಕ್ಷ್ಮಣ್ ಕೋಚಿಂಗ್ನಲ್ಲಿ ಭಾರತ ತಂಡ ಹಲವು ಸರಣಿಗಳನ್ನು ಗೆದ್ದಿದೆ.
2022ರ ಐಪಿಎಲ್ ಸೀಸನ್ನಲ್ಲಿ ಗೌತಮ್ ಗಂಭೀರ್, ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.