2023ರ ಏಷ್ಯಾ ಕಪ್ ಪಂದ್ಯಾವಳಿಗಾಗಿ ಬಿಸಿಸಿಐ 17 ಸದಸ್ಯರ ತನ್ನ ಭಾರತ ತಂಡವನ್ನು ಪ್ರಕಟಿಸಿದೆ. ಪ್ರಾಥಮಿಕವಾಗಿ ಇದು ಉತ್ತಮ ತಂಡದಂತೆ ತೋರುತ್ತದೆ. ಭಾರತ ತಂಡದ ದೃಷ್ಟಿಕೋನದಿಂದ, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಫಿಟ್ ಎಂದು ಹೇಳಲಾಗಿದೆ ಮತ್ತು ಏಷ್ಯಾ ಕಪ್ ಪಂದ್ಯಾವಳಿ ಆಡಲಿದ್ದಾರೆ.
ಇದಲ್ಲದೆ, ಜಸ್ಪ್ರೀತ್ ಬುಮ್ರಾ ಕೂಡ ಫಿಟ್ ಆಗಿದ್ದು ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಗಾಯಗೊಂಡಿದ್ದ ಭಾರತದ ಮೂವರು ಪ್ರಮುಖ ಆಟಗಾರರು ತಂಡಕ್ಕೆ ವಾಪಸ್ಸಾಗುತ್ತಿದ್ದಾರೆ. ಏಷ್ಯಾ ಕಪ್ನಲ್ಲಿ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಹೇಗೆ ಆಡಲಿದ್ದಾರೆ ಎಂಬುದನ್ನು ನೋಡುವುದು ಭಾರತಕ್ಕಿರುವ ಏಕೈಕ ಚಿಂತೆಯಾಗಿದೆ.
ಗಾಯದಿಂದ ಚೇತರಿಸಿಕೊಂಡ ನಂತರ, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಆಟದಲ್ಲಿ ಭಾಗವಹಿಸಿ ಬ್ಯಾಟ್ ಮಾಡಿದರು. ಆದರೆ, ಉತ್ತಮ ಗುಣಮಟ್ಟದ ಬೌಲಿಂಗ್ ದಾಳಿಯ ಅಂತರಾಷ್ಟ್ರೀಯ ಪಂದ್ಯದಲ್ಲಿ ಅದೇ ರೀತಿಯ ಉತ್ತೇಜನವನ್ನು ನೀಡುವುದಿಲ್ಲ.

ಇದೀಗ ನಾಯಕನಾಗಿ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರು ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಫಿಟ್ನೆಸ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಪಿಲ್ ದೇವ್ ಪ್ರಕಾರ, 2023ರ ಐಸಿಸಿ ಏಕದಿನ ವಿಶ್ವಕಪ್ ಮುಂದಿರುವಾಗ ಈ ಇಬ್ಬರು ಕ್ರಿಕೆಟಿಗರು ಗಾಯಗೊಂಡರೆ, ನಂತರ ಭಾರತ ತಂಡದ ಯೋಜನೆಗಳು ಅಪಾಯಕ್ಕೆ ಸಿಲುಕುತ್ತವೆ. ಇವರಿಬ್ಬರು ವಿಶ್ವಕಪ್ನ ಎಲ್ಲಾ ಪಂದ್ಯಗಳನ್ನು ಆಡಲು ಸಾಧ್ಯವಾಗದಿದ್ದರೆ, ಅದು ಇತರರಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದರು.
"ತಾತ್ವಿಕವಾಗಿ ಪ್ರತಿಯೊಬ್ಬ ಆಟಗಾರನನ್ನು ಪರೀಕ್ಷಿಸಬೇಕು. ವಿಶ್ವಕಪ್ ಪಂದ್ಯಾವಳಿ ತುಂಬಾ ಹತ್ತಿರದಲ್ಲಿದೆ. ಆದರೆ ನೀವು ಇನ್ನೂ ಆಟಗಾರರಿಗೆ ಅವಕಾಶವನ್ನು ನೀಡಿಲ್ಲವೇ? ಅವರು ವಿಶ್ವಕಪ್ಗೆ ಹೋದರೆ ಮತ್ತು ನಂತರ ಗಾಯಗೊಂಡರೆ? ಇಡೀ ತಂಡವು ಬಳಲುತ್ತದೆ," ಎಂದು ಕಪಿಲ್ ದೇವ್ ಅಸಮಾಧಾನ ಹೊರಹಾಕಿದರು.

ಭಾರತ ತಂಡ ತುಂಬಾ ಪ್ರತಿಭೆಗಳನ್ನು ಹೊಂದಿದ್ದು, ಗಾಯಗೊಂಡ ಆಟಗಾರರನ್ನು ತಕ್ಷಣವೇ ಬದಲಾಯಿಸಲು ಸಾಧ್ಯವಾಗುತ್ತದೆ ಎಂದು ಕಪಿಲ್ ದೇವ್ ಹೇಳಿದರು.
"ಕೆಟ್ಟ ಸನ್ನಿವೇಶದಲ್ಲಿ, ವಿಶ್ವಕಪ್ನಲ್ಲಿ ಆಟಗಾರರು ಒಂದೊಮ್ಮೆ ಗಾಯಗೊಂಡರೆ, ತಂಡದ ಭಾಗವಾಗಿ ತಪ್ಪಿಸಿಕೊಳ್ಳುವ ಆಟಗಾರರಿಗೆ ಅನ್ಯಾಯವಾಗುತ್ತದೆ," ಎಂದು ಅಭಿಪ್ರಾಯಪಟ್ಟರು.
"ಗಾಯಾಳುವಾಗಿ ವಾಪಸಾಗಿರುವ ಆಟಗಾರರಿಗೆ ಅವಕಾಶ ನೀಡಬೇಕಿದೆ. ಅವರು ಫಿಟ್ ಆಗಿದ್ದರೆ ವಿಶ್ವಕಪ್ ಆಡಬಹುದು. ಭಾರತದಲ್ಲಿ ಪ್ರತಿಭಾವಂತರಿಗೇನೂ ಕೊರತೆಯಿಲ್ಲ, ಆದರೆ ಅವರು ಫಿಟ್ ಆಗದಿದ್ದರೆ ಭಾರತ ತಂಡಕ್ಕೆ ಈಗಿನಿಂದಲೇ ವಿಶ್ವಕಪ್ ತಂಡದಲ್ಲಿ ಬದಲಾವಣೆ ಮಾಡುವ ಅವಕಾಶವಿದೆ," ಎಂದು ಕಪಿಲ್ ದೇವ್ ತಿಳಿಸಿದರು.
ಭಾರತ ತಂಡದ ಗಮನ ಮೊದಲು ಏಷ್ಯಾ ಕಪ್ ಪಂದ್ಯಾವಳಿ ಮೇಲೆ ಇರುತ್ತದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಎನ್ಸಿಎ ಶಿಬಿರಕ್ಕಾಗಿ ಬೆಂಗಳೂರಿಗೆ ತೆರಳುವ ವೇಳೆ ಪತ್ರಕರ್ತರೊಂದಿಗೆ ಮಾತನಾಡಿ, ಏಷ್ಯಾ ಕಪ್ ಟ್ರೋಫಿಯೊಂದಿಗೆ ಹಿಂತಿರುಗುವುದಾಗಿ ಹೇಳಿದ್ದಾರೆ.
ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡ ಹೇಗೆ ಆಡಲಿದೆ ಎಂಬುದು ಕುತೂಹಲಕಾರಿಯಾಗಿದೆ. ಸದ್ಯದ ಆಟಗಾರರ ಕೌಶಲ್ಯ ಮಟ್ಟದ ಬಗ್ಗೆ ಯಾವುದೇ ಸಂದೇಹವಿಲ್ಲ. ಆದರೆ ಕೆಲವು ಆಟಗಾರರಿಗೆ ಪಂದ್ಯಗಳ ಅಭ್ಯಾಸದ ಕೊರತೆಯು ಆಡುವ 11ರ ಬಳಗಕ್ಕೆ ಸಂಬಂಧಿಸಿದಂತೆ ತಂಡದಲ್ಲಿ ಸ್ವಲ್ಪ ಗೊಂದಲವನ್ನು ಉಂಟಾಗಬಹುದು.
ಶ್ರೀಲಂಕಾದ ಕ್ಯಾಂಡಿಯಲ್ಲಿ ಸೆಪ್ಟೆಂಬರ್ 2ರಂದು ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಭಾರತ ತಂಡ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.