
"ಸಚಿನ್ ಮಾಡಿಕೊಂಡಿದ್ದ ಬದಲಾವಣೆ ಮಾಡಿದ್ದಾರೆ ಧವನ್"
"ಕ್ರಿಕೆಟ್ನಲ್ಲಿ ಯುವ ಆಟಗಾರರು ಆಗಮನವಾಗುವ ಸಂದರ್ಭದಲ್ಲಿ ನೀವು ಮತ್ತೆ ಹೊಸ ಶಕ್ತಿಯೊಂದಿಗೆ ಮರಳಬೇಕಾಗುತ್ತದೆ. ನಿಮ್ಮ ಆಟದಲ್ಲಿ ನೀವು ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಹೊಸ ತಲೆಮಾರಿನ ಆಟಗಾರರು ತೀಕ್ಷ್ಣವಾಗಿ, ವೇಗವಾಗಿ ಹಾಗೂ ಚತುರತೆಯನ್ನೊಳಗೊಂಡಿರುತ್ತಾರೆ. ಅವರು ನಿಮ್ಮನ್ನು ಯಾವಾಗಲೂ ಮುಂದಕ್ಕೆ ತಳ್ಳುತ್ತಿರುತ್ತಾರೆ. ಅದಕ್ಕೆ ನೀವು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಸಚಿನ್ ತೆಂಡೂಲ್ಕರ್ ಉತ್ತಮ ಉದಾಹರಣೆ" ಎಂದಿದ್ದಾರೆ ಅಜಯ್ ಜಡೇಜಾ.

ಯುವರಾಜ್, ಧೋನಿ ಬಂದಾಗ ಸಚಿನ್ ಮಾಡಿದ್ದು ಇದನ್ನೇ
ಮುಮದುವರಿದು ಮಾತನಾಡಿದ ಅಜಯ್ ಜಡೇಜಾ ಭಾರತ ಕ್ರಿಕೆಟ್ ತಂಡಕ್ಕೆ ಎಂಎಸ್ ಧೋನಿ, ಯುವರಾಜ್ ಸಿಂಗ್ ಅವರಂತಾ ಆಟಗಾರರು ಬಂದಾಗ ಸಚಿನ್ ತೆಂಡೂಲ್ಕರ್ ಇದೇ ರೀತಿ ಮಾಡಿಕೊಂಡಿದ್ದರು. ತಮ್ಮಲ್ಲಿ ಹೊಸ ಚೈತನ್ಯವನ್ನು ತುಂಬಿಸಿಕೊಂಡರು. ಆಟದ ವೇಗದಲ್ಲಿ ಬದಲಾವಣೆಯನ್ನು ಮಾಡಿಕೊಂಡರು. ಈ ಮೂಲಕ ಯುವ ಆಟಗಾರರ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಿದರು. ಈಗ ಶಿಖರ್ ಧವನ್ ಕೂಡ ಅದೇ ರೀತಿಯ ಬದಲಾವಣೆ ಮಾಡಿಕೊಂಡಿದ್ದಾರೆ " ಎಂದಿದ್ದಾರೆ ಅಜಯ್ ಜಡೇಜಾ.

12 ವರ್ಷಗಳ ವೃತ್ತಿ ಜೀವನ
ಶಿಖರ್ ಧವನ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಈಗಾಗಲಢ 12 ವರ್ಷಗಳಾಗಿದೆ. 156 ಏಕದಿನ ಪಂದ್ಯಗಳಲ್ಲಿ ದೆಹಲಿ ಮೂಲಕ ಈ ಆಟಗಾರ ಆಡಿದ್ದು 6574 ರನ್ಗಳನ್ನು ಗಳಿಸಿದ್ದಾರೆ. 45.97ರ ಸರಾಸರಿಯಲ್ಲಿ ಅವರು ಬ್ಯಾಟಿಂಗ್ ನಡೆಸಿದ್ದು 17 ಶತಕ ಹಾಗೂ 28 ಅರ್ಧ ಶತಕ ಬಾರಿಸಿ ಮಿಂಚಿದ್ದಾರೆ.

ಶನಿವಾರ ನಡೆಯಲಿದೆ ಎರಡನೇ ಪಂದ್ಯ
ಇನ್ನು ಜಿಂಬಾಬ್ವೆ ಹಾಗೂ ಭಾರತ ತಂಡದ ವಿರುದ್ಧ ಏಕದಿನ ಸರಣಿಯ ಎರಡನೇ ಪಂದ್ಯ ಶನಿವಾರ ನಡೆಯಲಿದೆ. ಈ ಪಂದ್ಯ ಕೂಡ ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿಯೇ ನಡೆಯಲಿದೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನಾಯಕನಾಗಿ ಕೆಎಲ್ ರಾಹುಲ್ ಮೊದಲ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಇದೇಗ ಮೊದಲ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ. ಶಿಖರ್ ಧವನ್ ಭಾರತ ತಂಡದ ಉಪನಾಯಕನಾಗಿ ಸಾಥ್ ನೀಡುತ್ತಿದ್ದಾರೆ.


Click it and Unblock the Notifications












