ಅಗ್ರಸ್ಥಾನದ ಮೇಲೆ ಸೂರ್ಯ ಕಣ್ಣು
ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಚಿತ್ತ ತಮ್ಮತ್ತ ಸೆಳeಯುವಲ್ಲಿ ಯಶಸ್ವಿಯಾಗಿದ್ದಾರೆ. ಸೂರ್ಯ ತಮ್ಮ ಫಾರ್ಮ್ಅನ್ನು ಆನಂದಿಸುತ್ತಿದ್ದು ಮುಂಬರುವ ಟಿ20 ವಿಶ್ವಕಪ್ಗೆ ಎದುರುನೋಡುತ್ತಿದ್ದಾರೆ. ಬ್ಯಾಟಿಂಗ್ನಲ್ಲಿ ನೀಡುತ್ತಿರುವ ಸ್ಪೋಟಕ ಹಾಗೂ ಸ್ಥಿರ ಪ್ರದರ್ಶನದ ಕಾರಣದಿಂದಾಗಿ ಐಸಿಸಿ ಟಿ20 ಬ್ಯಾಟರ್ಗಳ ಶ್ರೇಯಾಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದು ಮೊದಲ ಸ್ಥಾನಕ್ಕಿಂತ ಕೇವಲ 2 ಅಂಕಗಳಷ್ಟು ಹಿಂದಿದ್ದಾರೆ.
ಆರಂಭಿಕನಾಗಿ ಯಶಸ್ಸು ಅಚ್ಚರಿಯಾಗಿಲ್ಲ
ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸ್ಕಾಟ್ ಸ್ಟೈರಿಸ್ ಟೀಮ್ ಇಂಡಿಯಾದಲ್ಲಿ ಸೈರ್ಯಕುಮಾರ್ ಆರಂಭಿಕನಾಗಿ ಕಣಕ್ಕಿಳಿದು ಯಶಸ್ಸು ಸಾಧಿಸಿದ ಬಗ್ಗೆ ತನಗೆ ಯಾವುದೇ ರೀತಿಯ ಅಚ್ಚರಿಯಾಗಿಲ್ಲ ಎಂದಿದ್ದಾರೆ. ಉತ್ತಮ ಆಟಗಾರರು ಯಾವುದೇ ಸ್ಥಾನದಲ್ಲಿ ಆಡುವತೆ ಸೂಚಿಸಿದರೂ ಮಿಂಚಬಲ್ಲರು ಎಂಬ ಅಭಿಪ್ರಾಯವನ್ನು ಸ್ಕಾಟ್ ಸ್ಟೈರಿಸ್ ವ್ಯಕ್ತಪಡಿಸಿದ್ದಾರೆ. "ಅತ್ಯುತ್ತಮ ಆಟಗಾರರು ಯಾವಾಗಲೂ ಅತ್ಯುತ್ತಮವಾಗಿಯೇ ಆಡುತ್ತಾರೆ. ಅವರಿಗೆ ಯಾವ ಕ್ರಮಾಂಕವನ್ನು ನಿಡಿದರೂ ಅದು ಪರಿಣಾಮ ಬೀರುವುದಿಲ್ಲ. ಅವರು ಆರಂಭಿಕನಾಗಿ ಯಶಸ್ಸು ಸಾಧಿಸಿದ್ದು ನನಗೆ ಹೆಚ್ಚು ಆಶ್ಚರ್ಯವುಂಟು ಮಾಡಲಿಲ್ಲ" ಎಂದಿದ್ದಾರೆ ಕಿವೀಸ್ ಮಾಜಿ ಕ್ರಿಕೆಟಿಗ
ಭಾರತದ ಸಮಸ್ಯೆಯ ಬಗ್ಗೆ ಹೊಟ್ಟೆಕಿಚ್ಚು ಮೂಡುತ್ತದೆ
ಮುಂದುವರಿಸು ಮಾತನಾಡಿದ ಸ್ಕ್ವಾಟ್ ಸ್ಟೈರಿಸ್ ಭಾರತ ಕ್ರಿಕೆಟ್ ತಂಡ ಈಗ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ನನಗೆ ನಿಜಕ್ಕೂ ಹೊಟ್ಟೆಕಿಚ್ಚುಂಟಾಗುತ್ತಿದೆ ಎಂದು ಸ್ಟೈರಿಸ್ ಹೇಳಿದ್ದಾರೆ. "ಸೂರ್ಯಕುಮಾರ್ ಯಾದವ್ ಆರಂಭಿಕನಾಗಿ ಕಣಕ್ಕಿಳಿಯಬೇಕಾ? ಮೂರನೇ ಕ್ರಮಾಂಕದಲ್ಲಿ ಆಡಬೇಕಾ? ಈಗ ಇದು ನಿಮಗೆ ಎಷ್ಟು ಕಷ್ಟವಾಗುತ್ತಿದೆ. ಆದರೆ ಖಂಡಿತವಾಗಿಯೂ ಕೆಲ ಅನುಭವದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಸೂರ್ಯ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು" ಎಂದಿದ್ದಾರೆ ಸ್ಕಾಟ್ ಸ್ಟೈರಿಸ್.
ಸೂರ್ಯಕುಮಾರ್ನಿಂದ ಭಾರತ ಭಿನ್ನ ತಂಡವಾಗಲಿದೆ
ನಂತರ ಸ್ಲಾಟ್ ಸ್ಟೈರಿಸ್ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಸಾಮರ್ಥ್ಯ ಬಗ್ಗೆಯೂ ವಿಶೇಷ ಮಾತುಗಳನ್ನಾಡಿದ್ದಾರೆ. ಸೂರ್ಯಕುಮಾರ್ ಯಾದವ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ಈ ಸಾಮರ್ಥ್ಯದಿಂದಾಗಿ ಭಾರತ ತಂಡವನ್ನು ಇತರ ಎಲ್ಲಾ ತಂಡಗಳಿಗಿಂತ ಅವರು ಭಿನ್ನ ತಂಡವೆನಿಸುವಂತೆ ಮಾಡುತ್ತಾರೆ. ಆತನೋರ್ವ ಸಾಂಪ್ರದಾಯಿಕ ಶೈಲಿಯ ಕ್ರಿಕೆಟ್ ಆಟಗಾರನಲ್ಲ. ಆತ ನಿಜಕ್ಕೂ ಭಿನ್ನ ಆಟಗಾರ ಎಂದು ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಕಿವೀಸ್ ಮಾಜಿ ಕ್ರಿಕೆಟಿಗ ವಿಶೇಷ ಮಾತುಗಳನ್ನಾಡಿದ್ದಾರೆ.