ಮಹಾರಾಷ್ಟ್ರ ಸರ್ಕಾರ ನೀಡಿದ್ದ 20,000 ಚದರ ಅಡಿಯ ನಿವೇಶನವನ್ನ ಹಿಂದಿರುಗಿಸಿದ ಸುನಿಲ್ ಗವಾಸ್ಕರ್

ಲೆಜೆಂಡರಿ ಬ್ಯಾಟ್ಸ್ಮನ್ ಸುನಿಲ್ ಗವಾಸ್ಕರ್ಗೆ 33 ವರ್ಷಗಳ ಹಿಂದೆ ಮಹಾರಾಷ್ಟ್ರ ಸರ್ಕಾರವು ನೀಡಿದ್ದ 21,348 ಚದರ ಅಡಿಯ ನಿವೇಶವನ್ನ ಲಿಟ್ಲ್ ಮಾಸ್ಟರ್ ಗವಾಸ್ಕರ್ ಹಿಂದಿರುಗಿಸಿದ್ದಾರೆ.
ಹೌಸಿಂಗ್ ಏಜೆನ್ಸಿ MHADAಯ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿಯನ್ನ ನೀಡಿದ್ದು, ಈ ಹಿಂದೆ ಉದ್ದೇಶಿಸಿದಂತೆ ಕೊಟ್ಟಿದ್ದ ಜಾಗದಲ್ಲಿ ಕ್ರಿಕೆಟ್ ಅಕಾಡೆಮಿ ನಿರ್ಮಿಸಲು ಸಾಧ್ಯವಾಗದ ಕಾರಣ ನಿವೇಶನ ಹಿಂದಿರುಗಿಸುವಂತೆ ಗವಾಸ್ಕರ್ ಅನ್ನು ಏಜೆನ್ಸಿ ಮನವಿ ಮಾಡಿತ್ತು. ಹೀಗಾಗಿ ಅಕಾಡೆಮಿ ನಿರ್ಮಿಸಲು ಸಾಧ್ಯವಾಗದ ಗವಾಸ್ಕರ್ ನಿವೇಶನ ಹಿಂದಿರುಗಿಸಿದ್ದಾಗಿ ತಿಳಿಸಿದ್ದಾರೆ.
ಒಳಾಂಗಣ ಕ್ರಿಕೆಟ್ ಅಕಾಡೆಮಿಯನ್ನು ನಿರ್ಮಿಸಲು 1980 ರ ದಶಕದ ಅಂತ್ಯದಲ್ಲಿ ಸುನಿಲ್ ಗವಾಸ್ಕರ್ ಕ್ರಿಕೆಟ್ ಫೌಂಡೇಶನ್ ಟ್ರಸ್ಟ್ (SGCFT) ಗೆ ಸರ್ಕಾರ ಈ ನಿವೇಶನ ನೀಡಲಾಯಿತು. ಗವಾಸ್ಕರ್ ಅವರು ಮೂರು ತಿಂಗಳಲ್ಲಿ ಅಕಾಡೆಮಿಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಮೂರು ವರ್ಷಗಳಲ್ಲಿ ಅದನ್ನು ಪೂರ್ಣಗೊಳಿಸಬೇಕಾಗಿತ್ತು, ಆದರೆ ಇಂದಿಗೂ ಅದು ಪೂರ್ಣಗೊಂಡಿಲ್ಲ.
ಹೀಗಾಗಿ 2019 ರಲ್ಲಿ, ಪ್ಲಾಟ್ ಸ್ವಾಧೀನಪಡಿಸಿಕೊಳ್ಳಲು MHADA ಪ್ರಸ್ತಾವನೆಯನ್ನು ಕಳುಹಿಸಿತು. ಅದರ ನಂತರ, ಗವಾಸ್ಕರ್ ಜಂಟಿ ಉದ್ಯಮಕ್ಕಾಗಿ ಲೆಜೆಂಡರಿ ಸಚಿನ್ ತೆಂಡೂಲ್ಕರ್ ಅವರ ಸಹಾಯವನ್ನು ಪಡೆದರು ಮತ್ತು ಇಬ್ಬರೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾದರು. ನಂತರ, ಇಬ್ಬರು ಬಾಂದ್ರಾ ಪ್ಲಾಟ್ನಲ್ಲಿ ಅಕಾಡೆಮಿಯನ್ನು ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು MHADA ಗೆ ಕೇಳಲಾಯಿತು.
ಏತನ್ಮಧ್ಯೆ, MHADA ಹೊಸ ನಿವೇಶನ ಹಿಂದಿರುಗಿಸುವ ವಿನಂತಿಯನ್ನು ನೀಡಿತು, ಅದಕ್ಕೆ ಗವಾಸ್ಕರ್ ಒಪ್ಪಿಕೊಂಡರು. ನಂತರ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಜ್ಯ ವಸತಿ ಸಚಿವ ಜಿತೇಂದ್ರ ಅವ್ಹಾದ್ ಅವರಿಗೆ ಪತ್ರ ಬರೆದು, ಕ್ರಿಕೆಟ್ ಅಕಾಡೆಮಿಯನ್ನು ಯೋಜಿಸಿದಂತೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ , ಆದ್ದರಿಂದ ಭೂಮಿಯನ್ನು ಹಿಂದಿರುಗಿಸುತ್ತಿರುವುದಾಗಿ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications