
ಡೆತ್ ನೋಟ್ ಇಲ್ಲ
ನೇಣು ಬಿಗಿದ ಸ್ಥಿತಿಯಲ್ಲಿದ್ದ ಚಂದ್ರಶೇಖರ್ ಮೃತ ದೇಹವನ್ನು ರಾಯಪೇಟದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಶವಪರೀಕ್ಷೆಗಾಗಿ ಕಳುಹಿಸಲಾಗಿದೆ. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ದೊರೆತಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ಚಂದ್ರಶೇಖರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿತ್ತು.

ಮನೆಯವರಿತ್ತ ಮಾಹಿತಿ
ಸಂಜೆ ಟೀ ಕುಡಿದ ಬಳಿಕ ಮಹಡಿಯಲ್ಲಿರುವ ತನ್ನ ರೂಮಿಗೆ ತೆರಳಿದ ಚಂದ್ರಶೇಖರ್, ಬಹಳ ಸಮಯವಾದರೂ ಹೊರಗೆ ಬರಲಿಲ್ಲ. ಬಾಗಿಲು ಬಡಿದಾಗ ಒಳಗಿನಿಂದ ಬಾಗಿಲು ಚಿಲಕ ಹಾಕಿದ್ದು ಕಂಡುಬಂತು. ಕಿಟಕಿಯಲ್ಲಿ ನೋಡಿದಾಗ ಚಂದ್ರಶೇಖರ್ ದೇಹ ನೇಣು ಬಿಗಿದ ಸ್ಥಿತಿಯಲ್ಲಿತ್ತು ಎಂದು ಚಂದ್ರಶೇಖರ್ ಮನೆಯವರು ತಿಳಿಸಿದ್ದಾರೆ.

ಏಕದಿನಕ್ಕೆ ಪಾದಾರ್ಪಣೆ
1988ರ ಡಿಸೆಂಬರ್ 10ರಂದು ವಿಶಾಖಪಟ್ನಂನಲ್ಲಿ ನಡೆದಿದ್ದ ಭಾರತ vs ನ್ಯೂಜಿಲೆಂಡ್ ನಡುವಣ ಏಕದಿನ ಪಂದ್ಯದಲ್ಲಿ ಚಂದ್ರಶೇಖರ್ ಪಾದಾರ್ಪಣೆ ಮಾಡಿದ್ದರು. 1990ರಲ್ಲಿ ಹ್ಯಾಮಿಲ್ಟನ್ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ-ಭಾರತ ಏಕದಿನ ಪಂದ್ಯದಲ್ಲಿ ಕೊನೆಯದಾಗಿ ಆಡಿದ್ದರು. ಭಾರತ ಪರ 7 ಏಕದಿನ ಇನ್ನಿಂಗ್ಸ್ಗಳಲ್ಲಿ ವಿಬಿಸಿ, 53 ಅಧಿಕ ರನ್ ಸೇರಿ ಒಟ್ಟಿಗೆ 88 ರನ್ ಗಳಿಸಿದ್ದಾರೆ.

ತಮಿಳುನಾಡು ಪ್ರೀಮಿಯರ್ ಲೀಗ್
ಐಪಿಎಲ್ ಮಾದರಿಯಲ್ಲಿ ನಡೆಯುವ ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ವಿಬಿ ಕಾಂಚಿವೀರನ್ ತಂಡವನ್ನು ನಡೆಸುತ್ತಿದ್ದ ಚಂದ್ರಶೇಖರ್ ಅವರ ಮೇಲೆ ಸಾಲದ ಹೊರೆಯೂ ಇತ್ತು ಎನ್ನಲಾಗಿದೆ. ವಿಬಿ ಚಂದ್ರಶೇಖರ್ ಚೆನ್ನೈಯಲ್ಲಿ ಕ್ರಿಕೆಟ್ ಕೋಚಿಂಗ್ ಸೆಂಟರ್ ಒಂದನ್ನೂ ಕೂಡ ನಡೆಸುತ್ತಿದ್ದರು.


Click it and Unblock the Notifications
