For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾ ನಾಯಕತ್ವ ಬದಲಾಯಿಸುವುದರಲ್ಲಿ ಬಿಸಿಸಿಐ ಪಾತ್ರವಿಲ್ಲ: ಸರಣ್‌ದೀಪ್ ಸಿಂಗ್

Sarandeep singh

ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಇಂದು ದಕ್ಷಿಣ ಆಫ್ರಿಕಾ ಪ್ರವಾಸದ ಕುರಿತಾಗಿ ಮಾಡಿದ ಪತ್ರಿಕಾಗೋಷ್ಠಿಯಲ್ಲಿ ಹಲವು ವಿವಾದಗಳು ಭುಗಿಲೆದ್ದಿವೆ. ಭಾರತೀಯ ಕ್ರಿಕೆಟ್‌ ಲೋಕದಲ್ಲಿ ಹಲವಾರು ವಿವಾದಗಳಿಗೆ ಕಾರಣವಾಗಿದೆ. ಆದ್ರೆ ವಿರಾಟ್ ಕೊಹ್ಲಿ ನಾಯಕತ್ವ ಬದಲಾವಣೆ ಕುರಿತಾಗಿ ಬಿಸಿಸಿಐ ಪಾತ್ರವಿಲ್ಲ ಎಂದು ಮಾಜಿ ಆಯ್ಕೆಗಾರರಲ್ಲಿ ಒಬ್ಬರಾದ ಸರಣ್‌ದೀಪ್ ಸಿಂಗ್ ಹೇಳಿದ್ದಾರೆ.

ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡುವ ಆಯ್ಕೆ ಸಮಿತಿಯ ನಿರ್ಧಾರವು ಆಯ್ಕೆ ಸಮಿತಿಯದ್ದಾಗಿದೆ ಮತ್ತು ಇದರಲ್ಲಿ ಬಿಸಿಸಿಐ ಯಾವುದೇ ಪಾತ್ರವನ್ನು ಹೊಂದಿಲ್ಲ ಎಂದು ಭಾರತದ ಮಾಜಿ ಹಿರಿಯ ಆಯ್ಕೆಗಾರ ಸರಣ್‌ದೀಪ್ ಸಿಂಗ್ ಬುಧವಾರ ಹೇಳಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ಸರಣ್‌ದೀಪ್ ಸಿಂಗ್, ಆಟಗಾರರನ್ನು ಆಯ್ಕೆ ಮಾಡುವುದು ಮತ್ತು ನಾಯಕನನ್ನು ನೇಮಿಸುವುದು ಆಯ್ಕೆ ಸಮಿತಿಯ ಜವಾಬ್ದಾರಿಯಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಬಿಸಿಸಿಐ ಪಾತ್ರವಿಲ್ಲ. ಇಂದು ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆ ಕೊಂಚ ಅಚ್ಚರಿ ಮೂಡಿಸಿದೆ ಎಂದಿದ್ದಾರೆ.

ವೈಟ್ ಬಾಲ್ ಮಾದರಿಯಲ್ಲಿ ಒಬ್ಬನೇ ನಾಯಕ ಇರಬೇಕೆಂದು ವೈಯಕ್ತಿಕವಾಗಿ ನನಗೂ ಅನಿಸುತ್ತದೆ ಎಂದು ಸರಣ್‌ದೀಪ್ ಸಿಂಗ್ ಹೇಳುತ್ತಾರೆ. ಇದಲ್ಲದೇ ಇನ್ನಷ್ಟು ವೃತ್ತಿಪರವಾಗಿ ವಿಷಯಗಳನ್ನು ನಿಭಾಯಿಸಬಹುದಾಗಿದ್ದು, ಈ ಬಗ್ಗೆ ವಿರಾಟ್ ಕೊಹ್ಲಿಗೆ ಮೊದಲೇ ತಿಳಿಸಬೇಕಿತ್ತು ಎಂದಿದ್ದಾರೆ. ಭಾರತೀಯ ಕ್ರಿಕೆಟ್‌ಗೆ ಹಾನಿಯಾಗಬಹುದು ಎಂಬ ಕಾರಣದಿಂದ ಎಲ್ಲವನ್ನೂ ಸುಗಮವಾಗಿ ಪರಿಹರಿಸಬೇಕೆಂದು ಅವರು ಬಯಸುತ್ತಾರೆ ಎಂದು ಅವರು ಹೇಳುತ್ತಾರೆ.

ಸಂವಹನದ ಅಂತರವನ್ನು ಕೊಹ್ಲಿ ಎತ್ತಿ ತೋರಿಸಿದರು!

ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರು ವರ್ಚುವಲ್ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಮತ್ತು ಭಾರತೀಯ ಕ್ರಿಕೆಟ್ ಆಡಳಿತಗಾರರ ನಡುವೆ ಹೆಚ್ಚು ಮಾತುಕತೆ ನಡೆದಿಲ್ಲ ಎಂದು ಹೇಳಿದ್ದಾರೆ. ಬದಲಿಗೆ, ಟೆಸ್ಟ್ ಸರಣಿಯ ಆಯ್ಕೆ ಸಭೆಗೆ ಕೇವಲ ಒಂದೂವರೆ ಗಂಟೆಗಳ ಮೊದಲು ಅವರನ್ನು ಸಂಪರ್ಕಿಸಲಾಯಿತು ಮತ್ತು ಅದಕ್ಕೂ ಮೊದಲು ಯಾವುದೇ ರೀತಿಯ ಸಂಭಾಷಣೆ ನಡೆಸಲಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಅವರು ಟಿ20 ನಾಯಕತ್ವವನ್ನು ತೊರೆದಾಗಿನಿಂದ ಡಿಸೆಂಬರ್ 8 ರವರೆಗೆ ತಮ್ಮ ಮತ್ತು ಆಯ್ಕೆ ಮಂಡಳಿಯ ನಡುವೆ ಯಾವುದೇ ರೀತಿಯ ಮಾತುಕತೆ ನಡೆದಿಲ್ಲ ಎಂದು ಹೇಳಿದರು. ಟೆಸ್ಟ್ ತಂಡದ ಆಯ್ಕೆಗೆ ಸಂಬಂಧಿಸಿದಂತೆ ತಮ್ಮ ಮತ್ತು ಆಯ್ಕೆಗಾರರ ​​ನಡುವೆ ಚರ್ಚೆ ನಡೆದಿತ್ತು, ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದರು ಮತ್ತು ನಂತರ ಐವರು ಆಯ್ಕೆಗಾರರು ಅವರು ಏಕದಿನ ನಾಯಕನಾಗುವುದಿಲ್ಲ ಎಂದು ನಿರ್ಧರಿಸಿದರು, ಇದಕ್ಕೆ ನಾನು ವಿಚಲಿತನಾಗಲಿಲ್ಲ ಮತ್ತು ಸರಿ ಆಯ್ತು ಎಂದು ನಾನು ಹೇಳಿದ್ದೇನೆ ಎಂದಿದ್ದಾರೆ.

ಏತನ್ಮಧ್ಯೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಭಿನ್ನಾಭಿಪ್ರಾಯದ ವಿಷಯಗಳು ಕೇವಲ ಸುಳ್ಳು ಎಂದು ಸರಣ್‌ದೀಪ್ ಸಿಂಗ್ ಹೇಳಿದ್ದಾರೆ.

"ರೋಹಿತ್ ಮತ್ತು ವಿರಾಟ್ ಇಬ್ಬರೂ ಪ್ರಬುದ್ಧ ಆಟಗಾರರು ಮತ್ತು ನಾಯಕರು. ಅವರು ಎಂದಿಗೂ ಪರಸ್ಪರ ವಿರುದ್ಧವಾಗಿ ಮಾತನಾಡಿಲ್ಲ ಅಥವಾ ಯಾವುದೇ ರೀತಿಯ ಪ್ರಶ್ನೆಯನ್ನು ಎತ್ತಿಲ್ಲ. ಇಬ್ಬರಿಗೂ ಅದು ತಿಳಿದಿದೆ. ಈ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು, ಎಂದು ಅವರಿಗೆ ತಿಳಿದಿದೆ. ಅವರು ಉತ್ತಮ ಸ್ನೇಹಿತರಲ್ಲದಿದ್ದರೂ ಸಹ, ಇಬ್ಬರೂ ಇನ್ನೂ ತಮ್ಮ ದೇಶಕ್ಕಾಗಿ ಆಡುತ್ತಾರೆ. ಈ ಇಬ್ಬರು ಆಟಗಾರರು ಭಾರತಕ್ಕಾಗಿ ಸಾಕಷ್ಟು ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು ಅವರ ಜೋಡಿ ಅದ್ಭುತವಾಗಿದೆ'' ಎಂದು ಸರಣ್‌ದೀಪ್ ಸಿಂಗ್ ತಮ್ಮ ಮಾತು ಮುಗಿಸಿದ್ದಾರೆ.

ಬಿಸಿಸಿಐ ಟಿ20 ನಾಯಕತ್ವವನ್ನು ತೊರೆದರೆ ಏಕದಿನ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಯಬೇಕಾಗುತ್ತೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಕೊಹ್ಲಿ ತಿಳಿಸಿದ್ದರು. ಈ ಮೂಲಕ ಸೌರವ್ ಗಂಗೂಲಿ ಹೇಳಿಕೆಗೆ ವಿರುದ್ಧವಾಗಿ ವಿರಾಟ್ ಹೇಳಿಕೆ ನೀಡಿ ಇರುಸು ಮುರುಸು ಉಂಟು ಮಾಡಿದೆ.

Story first published: Wednesday, December 15, 2021, 22:47 [IST]
Other articles published on Dec 15, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+