For Quick Alerts
ALLOW NOTIFICATIONS  
For Daily Alerts
 

ಪಾಕ್ ಜಯ ಸಂಭ್ರಮಿಸಿದ ಪ್ರತ್ಯೇಕತಾವಾದಿಗೆ ಗಂಭೀರ್ ಟಾಂಗ್

ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಭಾರತ ಸೋತಿದ್ದಕ್ಕೆ ಕಾಶ್ಮೀರದಲ್ಲಿ ಸಂಭ್ರಮಾಚರಣೆ ನಡೆಸಿದ ಪ್ರತ್ಯೇಕತಾವಾದಿಗಳು. ಈ ನಡೆಗೆ ಗೌತಮ್ ಗಂಭೀರ್ ತೀವ್ರ ಬೇಸರ. ಟ್ವಿಟರ್ ಮೂಲಕ ಅಸಮಾಧಾನ ಹೊರಹಾಕಿದ ಕ್ರಿಕೆಟಿಗ.

ನವದೆಹಲಿ, ಜೂನ್ 19: ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ಪಾಕಿಸ್ತಾನದ ಜಯವನ್ನು ಆಚರಿಸಿದ ಕಾಶ್ಮೀರದ ಪ್ರತ್ಯೇಕತಾ ವಾದಿಗಳಿಗೆ ಕ್ರಿಕೆಟಿಗ ಗೌತಮ್ ಗಂಭೀರ್ ಛೀಮಾರಿ ಹಾಕಿದ್ದಾರೆ.

ಭಾನುವಾರ (ಜೂನ್ 18) ಲಂಡನ್ ನಲ್ಲಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ನಡೆದಿತ್ತು. ಆ ಪಂದ್ಯದಲ್ಲಿ ಪಾಕಿಸ್ತಾನ ತಂಡವು, ಭಾರತ ತಂಡವನ್ನು 180 ರನ್ ಗಳಿಂದ ಪರಾಭವಗೊಳಿಸಿ, ಕಪ್ ಗೆದ್ದುಕೊಂಡಿತ್ತು.

Cricketer Gautam Gambhir

ಭಾರತ ತಂಡದ ಸೋಲು ಖಾತ್ರಿಯಾಗುತ್ತಲೇ ಕಾಶ್ಮೀರದಲ್ಲಿರುವ ಪ್ರತ್ಯೇಕತಾವಾದಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಇನ್ನು, ಪಂದ್ಯ ಮುಗಿದ ಮೇಲಂತೂ ಇವರ ಸಂತೋಷ ಇಮ್ಮಡಿಯಾಗಿತ್ತು.

ಈ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದರ ಜತೆಗೆ, ಕಾಶ್ಮೀರದ ಪ್ರತ್ಯೇಕತಾವಾದಿಯಾದ ಹುರಿಯತ್ ಕಾನ್ಫರೆನ್ಸ್ ಸಂಘಟನೆ ನಾಯಕ ಮಿರ್ ವೈಜ್ ಉಮರ್ ಫಾರೂಕ್ ಟ್ವೀಟ್ ಮಾಡಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಗೆದ್ದಿದ್ದು ಈಗಲೇ ರಂಜನ್ ಬಂದಂಥ ವಾತಾವರಣ ಸೃಷ್ಟಿಸಿದೆ. ಉತ್ತಮ ತಂಡ ಈ ದಿನವನ್ನಾಳಿದೆ. ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಗಂಭೀರ್, ''ಮಿರ್ ವೈಜ್ ಉಮರ್ ಫಾರೂಕ್ ಅವರೇ, ನೀವ್ಯಾಕೆ ಗಡಿ ದಾಟಿ ಪಾಕಿಸ್ತಾನದೊಳಗೆ ಹೋಗಿ ಈ ಜಯವನ್ನು ಸಂಭ್ರಮಿಸಬಾರದು? ಅಲ್ಲಿ ನಿಮಗೆ ಇಲ್ಲಿ ಸಿಗುವುದಕ್ಕಿಂತ ಉತ್ತಮವಾದ ಪಟಾಕಿಗಳು (ಚೀನಾ ಬ್ರಾಂಡ್) ಸಿಗಬಹುದು. ನೀವು ಅಲ್ಲೇ ಈದ್ ಆಚರಿಸಿ. ನೀವೀಗಲೇ ನಿಮ್ಮ ಬಟ್ಟೆಬರೆ ಪ್ಯಾಕ್ ಮಾಡುವುದಾದರೆ ನಾನು ಸಹಾಯ ಮಾಡುವೆ'' ಎಂದು ಕಿಚಾಯಿಸಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+