ಬಂದದ್ದೆಲ್ಲಾ ಬರಲಿ..
'ಯಾವುದೇ ಟೀಕೆಯನ್ನು ನಾನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ನನ್ನ ಪ್ರಕಾರ ಪಂದ್ಯವನ್ನು ಮುಗಿಸೋದು ಮುಖ್ಯ. ನಾನಿದನ್ನು ಹಂತಹಂತವಾಗಿ ಕಲಿಯುತ್ತಿದ್ದೇನೆ. ಅನುಭವ ಮತ್ತು ತಪ್ಪುಗಳಿಂದ ಮಾತ್ರ ನೀವು ಕಲಿಯೋದಕ್ಕೆ ಸಾಧ್ಯ' ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡುತ್ತ ಪಂತ್ ಹೇಳಿದ್ದಾರೆ.
30 ವರ್ಷದವರಂತೆ ಯೋಚಿಸಲಾಗದು
ಮಾತು ಮುಂದುವರೆಸಿದ 'ಬೇಬಿಸಿಟ್ಟರ್' ಖ್ಯಾತಿಯ ಪಂತ್, 'ಒಂದೇ ದಿನದಲ್ಲಿ ಏನನ್ನೇ ಆಗಲಿ ನಾವು ಬದಲಿಸಲಾಗೋಲ್ಲ. ನನಗೀಗ ಬರೀ 21 ವರ್ಷ ವಯಸ್ಸು. 30 ವರ್ಷದವರಂತೆ ನನ್ನನ್ನು ನಾನು ಭಾವಿಸಿಕೊಳ್ಳಲಾರೆ' ಎಂದು ರಿಷಬ್ ಕೊಂಚ ಖಾರವಾಗೇ ಟೀಕಾಕಾರರಿಗೆ ತಿರುಗೇಟು ನೀಡಿದರು.
ಮೊದಲ ಆದ್ಯತೆಯ ಕೀಪರ್
ಟೆಸ್ಟ್ ಕ್ರಿಕೆಟ್ಗೆ ಬಂದರೆ ರಿಷಬ್ ಪಂತ್ ಭಾರತದ ಮೊದಲ ಆದ್ಯತೆಯ ವಿಕೆಟ್ ಕೀಪರ್. ಆದರೆ ಮುಂಬರಲಿರುವ ಐಸಿಸಿ ವಿಶ್ವಕಪ್ಗಾಗಿ ಭಾರತ ತಂಡದಲ್ಲಿ ಪಂತ್ಗೆ ಸ್ಥಾನ ನೀಡಿಲ್ಲ. ದಿನೇಶ್ ಕಾರ್ತಿಕ್ ಎರಡನೇ ಆಯ್ಕೆಯ ವಿಕೆಟ್ ಕೀಪರ್ ಸ್ಥಾನ ಆವರಿಸಿಕೊಂಡಿದ್ದಾರೆ. ಪಂತ್ ಈ ಬಗ್ಗೆಯೂ ನಿರಾಶೆ ವ್ಯಕ್ತಪಡಿಸಿಲ್ಲ. ಬದಲಿಗೆ ಸಕಾರಾತ್ಮಕವಾಗೇ ಸಂದರ್ಭವನ್ನು ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಕೊಂಚ ಕಾಲಾವಕಾಶ ನೀಡಿ
ನನ್ನ ಕಲಿಕಾ ಹಂತಗಳಲ್ಲಿ ಕಲಿಯಬೇಕಾದುದನ್ನು ನಾನು ಕಲಿಯುತ್ತ ಬರುತ್ತಿದ್ದೇನೆ. ಈಗಷ್ಟೇ ನಾನು ಬಲಗೊಳ್ಳುತ್ತಿದ್ದೇನೆ, ಪ್ರೌಢನಾಗುತ್ತಿದ್ದೇನೆ. ನೀವು ನಂಗಿನ್ನೂ ಒಂಚೂರು ಕಾಲಾವಕಾಶ ನೀಡಬೇಕಿದೆ' ಎಂದು ಪಂತ್ ಟೀಕಿಸುವ ಅಭಿಮಾನಿಗಳಲ್ಲಿ, ಕ್ರಿಕೆಟ್ ಪಂಡಿತರಲ್ಲಿ ಕೇಳಿಕೊಂಡಿದ್ದಾರೆ.