ಶಿಖರ್ ಧವನ್ ನಾಯಕತ್ವದಲ್ಲಿ ಧೋನಿ ನಾಯಕತ್ವದ ಛಾಯೆ ಇದೆ
ಲಂಕಾ ವಿರುದ್ಧ ಶಿಖರ್ ಧವನ್ ಭಾರತ ತಂಡವನ್ನು ನಿಭಾಯಿಸಿದ ರೀತಿ ನಿಜಕ್ಕೂ ಚಾಣಾಕ್ಷತನದಿಂದ ಕೂಡಿತ್ತು, ಬೌಲರ್ಗಳ ಬದಲಾವಣೆ ಹಾಗೂ ಕ್ಷೇತ್ರ ರಕ್ಷಣೆಯ ಉಪಾಯಗಳು ನಿಖರವಾಗಿದ್ದವು. ಶಿಖರ್ ಧವನ್ ಚಾಣಾಕ್ಷತನದ ನಾಯಕತ್ವವನ್ನು ನೋಡುತ್ತಿದ್ದ ವೇಳೆ ಎಂ ಎಸ್ ಧೋನಿ ನಾಯಕತ್ವ ನೆನಪಿಗೆ ಬಂತು ಎಂದು ಅಕ್ಮಲ್ ಶಿಖರ್ ಧವನ್ ನಾಯಕತ್ವವನ್ನು ಹೊಗಳಿದ್ದಾರೆ.
ಟಿ ಟ್ವೆಂಟಿ ಸರಣಿಯನ್ನೂ ಗೆಲ್ಲುವ ತವಕದಲ್ಲಿ ಧವನ್ ಪಡೆ
ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿರುವ ಶಿಖರ್ ಧವನ್ ಪಡೆ ಇದೀಗ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮೇಲೆ ಕಣ್ಣಿಟ್ಟಿದೆ. 3 ಟಿ ಟ್ವೆಂಟಿ ಪಂದ್ಯಗಳ ಪೈಕಿ ಈಗಾಗಲೇ ಮೊದಲನೇ ಪಂದ್ಯವನ್ನು ಗೆದ್ದು ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ ಮಂಗಳವಾರ ರಾತ್ರಿ ಲಂಕಾ ವಿರುದ್ಧದ ಎರಡನೇ ಟಿ ಟ್ವೆಂಟಿ ಪಂದ್ಯವನ್ನಾಡಲಿದೆ.
ಇನ್ನೂ ಬರಲಿದೆ ಪ್ರಶಂಸೆಯ ಸುರಿಮಳೆ
ಕೇವಲ ಕಮ್ರಾನ್ ಅಕ್ಮಲ್ ಮಾತ್ರವಲ್ಲ ಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಯನ್ನು ಭಾರತ ಗೆದ್ದುಕೊಂಡರೆ ಹಲವಾರು ದಿಗ್ಗಜ ಕ್ರಿಕೆಟಿಗರು ಶಿಖರ್ ಧವನ್ ನೇತೃತ್ವದ ಭಾರತ ತಂಡವನ್ನು ಹಾಡಿ ಹೊಗಳುವುದಂತೂ ಪಕ್ಕಾ. ತಂಡದ ಸ್ಟಾರ್ ಆಟಗಾರರೆಲ್ಲಾ ಇಂಗ್ಲೆಂಡ್ ಪ್ರವಾಸದಲ್ಲಿರುವಾಗ ಯುವ ಆಟಗಾರರನ್ನು ಇಟ್ಟುಕೊಂಡು 2 ಸರಣಿಯನ್ನು ಎದುರಾಳಿಗಳ ನೆಲದಲ್ಲಿ ಗೆಲ್ಲುವುದು ದೊಡ್ಡ ಸಾಧನೆಯೇ ಸರಿ. ಹೀಗಾಗಿ ಟಿ ಟ್ವೆಂಟಿ ಸರಣಿಯನ್ನೂ ಟೀಮ್ ಇಂಡಿಯಾ ಗೆದ್ದರೆ ಶಿಖರ್ ಧವನ್ ಮತ್ತಷ್ಟು ಪ್ರಶಂಸೆಯನ್ನು ಪಡೆದುಕೊಳ್ಳಲಿದ್ದಾರೆ. ಅದರಲ್ಲಿಯೂ ಭಾರತದ ಗೆಲುವಿನ ಹಿಂದಿನ ಪ್ರಮುಖ ಕಾರಣಕರ್ತ ರಾಹುಲ್ ದ್ರಾವಿಡ್ ಬಗ್ಗೆ ಪ್ರಶಂಸೆಯ ಸುರಿಮಳೆ ಆಗುವುದಂತೂ ಪಕ್ಕಾ.