
ಚೇತೇಶ್ವರ ಪೂಜಾರ ಉಪನಾಯಕರನ್ನಾಗಿ ನೇಮಿಸುವ ನಿರ್ಧಾರ ಆಘಾತಕಾರಿ
ಎನ್ಡಿಟಿವಿಯ ರಿಕಾ ರಾಯ್ ಜೊತೆಗಿನ ಚಾಟ್ನಲ್ಲಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರು ಚೇತೇಶ್ವರ ಪೂಜಾರ ಅವರನ್ನು ಉಪನಾಯಕರನ್ನಾಗಿ ನೇಮಿಸುವ ನಿರ್ಧಾರವನ್ನು 'ಆಘಾತಕಾರಿ' ಎಂದು ಒಪ್ಪಿಕೊಂಡರು. ಕಳೆದ ಬಾರಿ ತಂಡದ ಉಪನಾಯಕನಾಗಿದ್ದಾಗ ರಿಷಭ್ ಪಂತ್ ಶತಕ ಬಾರಿಸಿದ್ದರು ಎಂದು ಕೈಫ್ ಒತ್ತಿ ಹೇಳಿದರು.
"ಚೇತೇಶ್ವರ ಪೂಜಾರ ಅವರನ್ನು ಭಾರತ ಟೆಸ್ಟ್ ತಂಡದ ಉಪನಾಯಕರನ್ನಾಗಿ ಮಾಡಿರುವುದು ಆಘಾತಕಾರಿಯಾಗಿದೆ. ರಿಷಭ್ ಪಂತ್ ಉಪನಾಯಕರಾಗಿದ್ದಾಗ ಕೊನೆಯ ಬಾರಿ ಆಡಿದ ಟೆಸ್ಟ್ನಲ್ಲಿ ಶತಕ ಬಾರಿಸಿದ್ದರು," ಎಂದು ಮೊಹಮ್ಮದ್ ಕೈಫ್ ತಿಳಿಸಿದರು.
ಈ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ಮೊಹಮ್ಮದ್ ಕೈಫ್ ಆಯ್ಕೆಗಾರರನ್ನು ಗುರಿಯಾಗಿಸಿಕೊಂಡು, "ಆಯ್ಕೆಗಾರರು ಆಟಗಾರರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ. ಆಗ ರಿಷಭ್ ಪಂತ್ ಅವರನ್ನು ಉಪನಾಯಕರನ್ನಾಗಿ ಮಾಡಬಾರದಿತ್ತು," ಎಂದು ಕಿಡಿಕಾರಿದರು.

ಗಾಯ ನಿರ್ವಹಣೆಗೆ ಹೆಚ್ಚಿನ ಗಮನವನ್ನು ನೀಡುವಂತೆ ಸಲಹೆ
ಇತರ ವಿಷಯಗಳ ಜೊತೆಗೆ, ಗಾಯಗಳ ಕಾರಣದಿಂದಾಗಿ ಬಹಳಷ್ಟು ಆಟಗಾರರು ಪ್ರಮುಖ ಪಂದ್ಯಗಳನ್ನು ಕಳೆದುಕೊಳ್ಳುತ್ತಿರುವುದರಿಂದ ಗಾಯ ನಿರ್ವಹಣೆಗೆ ಹೆಚ್ಚಿನ ಗಮನವನ್ನು ನೀಡುವಂತೆ ಮೊಹಮ್ಮದ್ ಕೈಫ್ ಬಿಸಿಸಿಐಗೆ ಎಚ್ಚರಿಸಿದರು.
ಗಮನಾರ್ಹ ಅಂಶವೆಂದರೆ, ಗಾಯದ ಕಾರಣಕ್ಕಾಗಿ ಜಸ್ಪ್ರೀತ್ ಬುಮ್ರಾ ಈ ವರ್ಷದ ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ಎರಡೂ ಪ್ರಮುಖ ಟೂರ್ನಿಗಳನ್ನು ಕಳೆದುಕೊಳ್ಳಬೇಕಾಯಿತು.

ವೇಗದ ಬೌಲರ್ಗಳು ವಿರಾಮ ತೆಗೆದುಕೊಳ್ಳುವ ಅಗತ್ಯ
ಆಟದ ಹೊರೆಯ ವಿಷಯದ ಕುರಿತು, ವೇಗದ ಬೌಲರ್ಗಳು ವಿರಾಮ ತೆಗೆದುಕೊಳ್ಳುವ ಅಗತ್ಯವನ್ನು ಮೊಹಮ್ಮದ್ ಕೈಫ್ ಅರ್ಥಮಾಡಿಕೊಂಡರು. ಬ್ಯಾಟರ್ಗಳು ಪ್ರಸ್ತುತ ತೆಗೆದುಕೊಳ್ಳುವ ವಿರಾಮಗಳನ್ನು ಬೌಲರ್ಗಳೂ ತೆಗೆದುಕೊಳ್ಳಬೇಕು ಎಂದು ಕೈಫ್ ಹೇಳಿದರು.
ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ಇತರ ಉದಾಹರಣೆಗಳನ್ನು ಉಲ್ಲೇಖಿಸಿ, ಈ ಮೊದಲು ಸ್ಟಾರ್ ಬ್ಯಾಟರ್ಗಳು ಆಟದಿಂದ ವಿರಾಮ ತೆಗೆದುಕೊಳ್ಳುತ್ತಿರಲಿಲ್ಲ ಎಂದು ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟರು.

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ 11ರ ಬಳಗ
ಕೆಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ (ಉಪನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಸೌರಭ್ ಕುಮಾರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್


Click it and Unblock the Notifications












