For Quick Alerts
ALLOW NOTIFICATIONS  
For Daily Alerts
 

IND vs BAN 1st Test: ಈತ ಭಾರತ ತಂಡದ ಉಪನಾಯಕನಾಗಿದ್ದು ಆಘಾತಕಾರಿ ಎಂದ ಮೊಹಮ್ಮದ್ ಕೈಫ್!

IND vs BAN 1st Test: Mohammad Kaif Surprised After Cheteshwar Pujara Is The Vice-captain Of the Indian Team

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನು 1-2 ಅಂತರದಲ್ಲಿ ಸೋತಿರುವ ಭಾರತ ಕ್ರಿಕೆಟ್ ತಂಡವು, ನಾಳೆಯಿಂದ (ಬುಧವಾರ, ಡಿಸೆಂಬರ್ 14) ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿದೆ.

ಭಾರತದ ಟೆಸ್ಟ್ ತಂಡದಲ್ಲಿ ಹಲವು ಹೊಸ ಮುಖಗಳು ಕಾಣಿಸಿಕೊಂಡಿವೆ. ಆದರೆ ಕೆಲವು ಆಟಗಾರರ ಜವಾಬ್ದಾರಿಗಳನ್ನು ಮರುನಿಯೋಜಿಸಲಾಗಿದೆ.

ಜವಾಬ್ದಾರಿಗಳಿಗೆ ಸಂಬಂಧಿಸಿದಂತೆ ಒಂದು ಪ್ರಮುಖ ಬದಲಾವಣೆಯೆಂದರೆ, ಮೊದಲ ಟೆಸ್ಟ್‌ ಪಂದ್ಯಕ್ಕೆ ಚೇತೇಶ್ವರ ಪೂಜಾರ ಅವರನ್ನು ಭಾರತ ತಂಡದ ಉಪನಾಯಕರನ್ನಾಗಿ ನೇಮಿಸಲಾಗಿದೆ. ಪೂರ್ಣಾವಧಿ ನಾಯಕ ರೋಹಿತ್ ಶರ್ಮಾ ಅವರು ಹೆಬ್ಬೆರಳು ಗಾಯದ ಕಾರಣ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಿಂದ ಹೊರಗುಳಿದಿರುವುದರಿಂದ ಕೆಎಲ್ ರಾಹುಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಮೊದಲ ಟೆಸ್ಟ್‌ ಪಂದ್ಯಕ್ಕೆ ಚೇತೇಶ್ವರ ಪೂಜಾರ ಅವರನ್ನು 'ಉಪನಾಯಕ' ಎಂದು ಹೆಸರಿಸಿದಾಗಿನಿಂದ ರಿಷಭ್ ಪಂತ್ ಈ ಹಿಂದೆ ನಾಯಕನ ಪಾತ್ರದಲ್ಲಿ ತಂಡವನ್ನು ಮುನ್ನಡೆಸಿದ್ದರು. ಆದರೆ ಅವರಿಗೆ ಉಪನಾಯಕನ ಜವಾಬ್ದಾರಿ ನೀಡದಿರುವುದು ಅಭಿಮಾನಿಗಳು ಚರ್ಚಿಸುವಂತೆ ಮಾಡಿದೆ.

ಚೇತೇಶ್ವರ ಪೂಜಾರ ಉಪನಾಯಕರನ್ನಾಗಿ ನೇಮಿಸುವ ನಿರ್ಧಾರ ಆಘಾತಕಾರಿ

ಚೇತೇಶ್ವರ ಪೂಜಾರ ಉಪನಾಯಕರನ್ನಾಗಿ ನೇಮಿಸುವ ನಿರ್ಧಾರ ಆಘಾತಕಾರಿ

ಎನ್‌ಡಿಟಿವಿಯ ರಿಕಾ ರಾಯ್ ಜೊತೆಗಿನ ಚಾಟ್‌ನಲ್ಲಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರು ಚೇತೇಶ್ವರ ಪೂಜಾರ ಅವರನ್ನು ಉಪನಾಯಕರನ್ನಾಗಿ ನೇಮಿಸುವ ನಿರ್ಧಾರವನ್ನು 'ಆಘಾತಕಾರಿ' ಎಂದು ಒಪ್ಪಿಕೊಂಡರು. ಕಳೆದ ಬಾರಿ ತಂಡದ ಉಪನಾಯಕನಾಗಿದ್ದಾಗ ರಿಷಭ್ ಪಂತ್ ಶತಕ ಬಾರಿಸಿದ್ದರು ಎಂದು ಕೈಫ್ ಒತ್ತಿ ಹೇಳಿದರು.

"ಚೇತೇಶ್ವರ ಪೂಜಾರ ಅವರನ್ನು ಭಾರತ ಟೆಸ್ಟ್ ತಂಡದ ಉಪನಾಯಕರನ್ನಾಗಿ ಮಾಡಿರುವುದು ಆಘಾತಕಾರಿಯಾಗಿದೆ. ರಿಷಭ್ ಪಂತ್ ಉಪನಾಯಕರಾಗಿದ್ದಾಗ ಕೊನೆಯ ಬಾರಿ ಆಡಿದ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದರು," ಎಂದು ಮೊಹಮ್ಮದ್ ಕೈಫ್ ತಿಳಿಸಿದರು.

ಈ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ಮೊಹಮ್ಮದ್ ಕೈಫ್ ಆಯ್ಕೆಗಾರರನ್ನು ಗುರಿಯಾಗಿಸಿಕೊಂಡು, "ಆಯ್ಕೆಗಾರರು ಆಟಗಾರರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ. ಆಗ ರಿಷಭ್ ಪಂತ್ ಅವರನ್ನು ಉಪನಾಯಕರನ್ನಾಗಿ ಮಾಡಬಾರದಿತ್ತು," ಎಂದು ಕಿಡಿಕಾರಿದರು.

ಗಾಯ ನಿರ್ವಹಣೆಗೆ ಹೆಚ್ಚಿನ ಗಮನವನ್ನು ನೀಡುವಂತೆ ಸಲಹೆ

ಗಾಯ ನಿರ್ವಹಣೆಗೆ ಹೆಚ್ಚಿನ ಗಮನವನ್ನು ನೀಡುವಂತೆ ಸಲಹೆ

ಇತರ ವಿಷಯಗಳ ಜೊತೆಗೆ, ಗಾಯಗಳ ಕಾರಣದಿಂದಾಗಿ ಬಹಳಷ್ಟು ಆಟಗಾರರು ಪ್ರಮುಖ ಪಂದ್ಯಗಳನ್ನು ಕಳೆದುಕೊಳ್ಳುತ್ತಿರುವುದರಿಂದ ಗಾಯ ನಿರ್ವಹಣೆಗೆ ಹೆಚ್ಚಿನ ಗಮನವನ್ನು ನೀಡುವಂತೆ ಮೊಹಮ್ಮದ್ ಕೈಫ್ ಬಿಸಿಸಿಐಗೆ ಎಚ್ಚರಿಸಿದರು.

ಗಮನಾರ್ಹ ಅಂಶವೆಂದರೆ, ಗಾಯದ ಕಾರಣಕ್ಕಾಗಿ ಜಸ್ಪ್ರೀತ್ ಬುಮ್ರಾ ಈ ವರ್ಷದ ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ಎರಡೂ ಪ್ರಮುಖ ಟೂರ್ನಿಗಳನ್ನು ಕಳೆದುಕೊಳ್ಳಬೇಕಾಯಿತು.

ವೇಗದ ಬೌಲರ್‌ಗಳು ವಿರಾಮ ತೆಗೆದುಕೊಳ್ಳುವ ಅಗತ್ಯ

ವೇಗದ ಬೌಲರ್‌ಗಳು ವಿರಾಮ ತೆಗೆದುಕೊಳ್ಳುವ ಅಗತ್ಯ

ಆಟದ ಹೊರೆಯ ವಿಷಯದ ಕುರಿತು, ವೇಗದ ಬೌಲರ್‌ಗಳು ವಿರಾಮ ತೆಗೆದುಕೊಳ್ಳುವ ಅಗತ್ಯವನ್ನು ಮೊಹಮ್ಮದ್ ಕೈಫ್ ಅರ್ಥಮಾಡಿಕೊಂಡರು. ಬ್ಯಾಟರ್‌ಗಳು ಪ್ರಸ್ತುತ ತೆಗೆದುಕೊಳ್ಳುವ ವಿರಾಮಗಳನ್ನು ಬೌಲರ್‌ಗಳೂ ತೆಗೆದುಕೊಳ್ಳಬೇಕು ಎಂದು ಕೈಫ್ ಹೇಳಿದರು.

ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ಇತರ ಉದಾಹರಣೆಗಳನ್ನು ಉಲ್ಲೇಖಿಸಿ, ಈ ಮೊದಲು ಸ್ಟಾರ್ ಬ್ಯಾಟರ್‌ಗಳು ಆಟದಿಂದ ವಿರಾಮ ತೆಗೆದುಕೊಳ್ಳುತ್ತಿರಲಿಲ್ಲ ಎಂದು ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟರು.

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ 11ರ ಬಳಗ

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ 11ರ ಬಳಗ

ಕೆಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ (ಉಪನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಸೌರಭ್ ಕುಮಾರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್

Story first published: Tuesday, December 13, 2022, 20:38 [IST]
Other articles published on Dec 13, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+