ಸಾಮರ್ಥ್ಯ ಮತ್ತು ಗುಣಮಟ್ಟವಿಲ್ಲದೆ ನಡೆಯುವುದಿಲ್ಲ
ಎಲ್ಲಾ ವೈಫಲ್ಯಗಳ ಹೊರತಾಗಿಯೂ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರು ತಮ್ಮ ಸ್ಕೋರಿಂಗ್ ವಿಧಾನಕ್ಕೆ ಮರಳಲು ವಿರಾಟ್ ಕೊಹ್ಲಿಯನ್ನು ಬೆಂಬಲಿಸಿದ್ದಾರೆ. "ಖಂಡಿತವಾಗಿಯೂ, ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪಡೆದ ಅಂಕಗಳನ್ನು ನೋಡಿ. ಅದು ಸಾಮರ್ಥ್ಯ ಮತ್ತು ಗುಣಮಟ್ಟವಿಲ್ಲದೆ ನಡೆಯುವುದಿಲ್ಲ. ಹೌದು, ಅವರು ಕಠಿಣ ಸಮಯವನ್ನು ಹೊಂದಿದ್ದಾರೆ ಮತ್ತು ಅದು ಅವರಿಗೆ ತಿಳಿದಿದೆ. ಅವರು ಸ್ವತಃ ಶ್ರೇಷ್ಠ ಆಟಗಾರರಾಗಿದ್ದಾರೆ," ಎಂದು ಬೆಂಬಲಕ್ಕೆ ನಿಂತಿದ್ದಾರೆ.

ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಭಾರೀ ಟೀಕೆಗೆ ಕಾರಣ
ಸದ್ಯದ ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಿಲ್ಲ ಎಂದು ಸ್ವಂತ ಮಾನದಂಡಗಳಿಂದ ವಿರಾಟ್ ಕೊಹ್ಲಿ ಸ್ವತಃ ತಿಳಿದಿದ್ದಾನೆ. ಅವನು ಮರಳಿ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳುವುದನ್ನು ನಾನು ನೋಡುತ್ತೇನೆ. ಆದರೆ ಅವರು ಕಳೆದ 12-13 ವರ್ಷಗಳಿಂದ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ತಮ್ಮ ದಾರಿಯನ್ನು ಕಂಡುಕೊಂಡಿದ್ದಾರೆ ಮತ್ತು ಯಶಸ್ವಿಯಾಗಿದ್ದಾರೆ. ವಿರಾಟ್ ಕೊಹ್ಲಿ ಮಾತ್ರ ಅದನ್ನು ಮಾಡಲು ಸಾಧ್ಯ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸುದ್ದಿ ಸಂಸ್ಥೆ ANI ಜೊತೆಗೆ ಮಾತನಾಡುತ್ತಾ ಹೇಳಿದರು.
ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಭಾರೀ ಟೀಕೆಗೆ ಕಾರಣವಾಗಿದೆ ಮತ್ತು ಕೆಲವು ಮಾಜಿ ಕ್ರಿಕೆಟಿಗರಾದ ದಿಗ್ಗಜ ಕಪಿಲ್ ದೇವ್ ಮತ್ತು ವೆಂಕಟೇಶ್ ಪ್ರಸಾದ್ ಅವರು ಟಿ20 ತಂಡದಲ್ಲಿ ಅವರ ಸ್ಥಾನವನ್ನು ಪ್ರಶ್ನಿಸಿದ್ದಾರೆ.

ಸಚಿನ್ಗೂ ಆಯಿತು, ರಾಹುಲ್ಗೂ ಆಯಿತು, ವಿರಾಟ್ ಕೊಹ್ಲಿಗೂ ಆಗಿದೆ
"ಈ ವಿಷಯಗಳು ಕ್ರೀಡೆಯಲ್ಲಿ ಸಂಭವಿಸುತ್ತವೆ. ಇದು ಎಲ್ಲರಿಗೂ ಸಂಭವಿಸಿದೆ. ಸಚಿನ್ಗೂ ಆಯಿತು, ರಾಹುಲ್ಗೂ ಆಯಿತು, ನನಗೂ ಆಯಿತು, ಅದೇ ರೀತಿ ವಿರಾಟ್ ಕೊಹ್ಲಿಗೂ ಆಗಿದೆ. ಭವಿಷ್ಯದ ಆಟಗಾರರಿಗೂ ಇದು ಸಂಭವಿಸುತ್ತದೆ. ಅದು ಕ್ರೀಡೆಯ ಭಾಗವಾಗಿದೆ ಮತ್ತು ಒಬ್ಬ ಕ್ರೀಡಾಪಟುವಾಗಿ ನೀವು ಕೇಳಬೇಕು, ಅದು ಏನೆಂದು ತಿಳಿದಿರಬೇಕು ಮತ್ತು ನಿಮ್ಮ ಆಟವನ್ನು ಆಡಬೇಕು ಎಂದು ನಾನು ಭಾವಿಸುತ್ತೇನೆ," ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿವರಿಸಿದರು.
ವಿರಾಟ್ ಕೊಹ್ಲಿ ಅವರು ತಮ್ಮ ಸ್ಕೋರಿಂಗ್ ವಿಧಾನಕ್ಕೆ ಮರಳಬೇಕು ಇಲ್ಲವಾದಲ್ಲಿ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16ರಿಂದ ಪ್ರಾರಂಭವಾಗುವ ಮುಂಬರುವ ಐಸಿಸಿ ಟಿ20 ವಿಶ್ವಕಪ್ 2022 ಟೂರ್ನಿಗೆ ಭಾರತೀಯ ತಂಡದಲ್ಲಿ ಸ್ಥಾನ ಪಡೆಯುವುದು ಅವರಿಗೆ ಕಷ್ಟವಾಗಬಹುದು.


Click it and Unblock the Notifications












