
ಮಾರ್ಕ್ ವುಡ್ ತಂಡದ ಇತ್ತೀಚಿನ ಗಾಯಕ್ಕೆ ತುತ್ತಾದ ಆಟಗಾರ
ಅಫ್ಘಾನಿಸ್ತಾನ ತಂಡದ ವಿರುದ್ಧ 10 ರನ್ಗೆ 5 ವಿಕೆಟ್ ಐತಿಹಾಸಿಕ ಸ್ಪೆಲ್ ಸೇರಿದಂತೆ ಒಟ್ಟು 10 ವಿಕೆಟ್ಗಳೊಂದಿಗೆ ಪಂದ್ಯಾವಳಿಯಲ್ಲಿ ತಂಡದ ಪ್ರಮುಖ ವಿಕೆಟ್ ಟೇಕರ್ ಆಗಿರುವ ಸ್ಯಾಮ್ ಕುರ್ರಾನ್ ಜೊತೆಗೆ ಮಾರ್ಕ್ ವುಡ್ ಇಂಗ್ಲೆಂಡ್ ತಂಡದ ವೇಗದ ದಾಳಿಯ ಪ್ರಮುಖ ಭಾಗವಾಗಿದ್ದಾರೆ. ಒಂದು ವೇಳೆ ಮಾರ್ಕ್ ವುಡ್ ಅವರು ಭಾರತ ವಿರುದ್ಧದ ಪಂದ್ಯದ ಆಡುವ ಹನ್ನೊಂದರ ಬಳಗದಲ್ಲಿ ಕಾನಿಸಿಕೊಳ್ಳದಿದ್ದರೆ, ಟೈಮಲ್ ಮಿಲ್ಸ್ ಅವರು ಬಲಗೈ ವೇಗದ ಬೌಲರ್ಗೆ ಸಮಾನವಾದ ಬದಲಿಯಾಗಿ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗಲಿದ್ದಾರೆ.
ಎಡಗೈ ಆಟಗಾರರಾಗಿದ್ದರೂ, ಟೈಮಲ್ ಮಿಲ್ಸ್ ತೀವ್ರ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಾರ್ಕ್ ವುಡ್ ಮೇಲಿನ ಕಳವಳಗಳು ಇಂಗ್ಲೆಂಡ್ಗೆ ಮತ್ತೊಂದು ಸಂಭಾವ್ಯ ತಲೆನೋವಾಗಿದೆ. ಇನ್ನು ಎಡಗೈ ಸ್ಫೋಟಕ ಬ್ಯಾಟರ್ ಡೇವಿಡ್ ಮಲಾನ್ ಲಭ್ಯತೆಯ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ಅವರು ಶ್ರೀಲಂಕಾ ವಿರುದ್ಧದ ಹಿಂದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಎಡ ತೊಡೆಸಂದು ಗಾಯಕ್ಕೆ ತುತ್ತಾದರು. ಆ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದು ಸೆಮಿಸ್ನಲ್ಲಿ ಸ್ಥಾನ ಗಳಿಸಿತು.

ಡೇವಿಡ್ ಮಲಾನ್ ಇಂಗ್ಲೆಂಡ್ನ ಅಗ್ರ ಕ್ರಮಾಂಕದ ಆಧಾರಸ್ತಂಭ
ಗುರುವಾರ ಭಾರತ ವಿರುದ್ಧ ಸೆಮಿಫೈನಲ್ನಲ್ಲಿ ಪಾಲ್ಗೊಳ್ಳುವ ಬಗ್ಗೆ ಡೇವಿಡ್ ಮಲಾನ್ ಆಶಾವಾದಿಯಾಗಿದ್ದರೂ, ಇಂಗ್ಲೆಂಡ್ ತಂಡ ಮುಂದೆ ಆಗಬಹುದಾದ ಅಪಾಯವನ್ನು ಪರಿಗಣಿಸಿ ಯಾವುದೇ ತಂಡಕ್ಕೆ ಸೇರಿಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುತ್ತದೆ.
38.84 ಸರಾಸರಿಯಲ್ಲಿ 1,748 ರನ್ ಗಳಿಸಿದ ಎಡಗೈ ಆಟಗಾರ ಡೇವಿಡ್ ಮಲಾನ್ ಇಂಗ್ಲೆಂಡ್ನ ಅಗ್ರ ಕ್ರಮಾಂಕದ ಆಧಾರ ಸ್ತಂಭವಾಗಿದ್ದಾರೆ. ಅವರ ಸ್ಥಿರತೆ ಮತ್ತು ರನ್ಗಳ ಮೊತ್ತವು ಅವರನ್ನು ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕದ ಅಗ್ರ 10ರೊಳಗೆ ಇರಿಸಿದೆ. ಡೇವಿಡ್ ಮಲಾನ್ ದೀರ್ಘಾವಧಿಯ ಪಟ್ಟಿಯಲ್ಲೂ ಅಗ್ರಸ್ಥಾನ ಪಡೆದಿದ್ದಾರೆ. ಪ್ರಸ್ತುತ ಆರನೇ ಸ್ಥಾನದಲ್ಲಿದ್ದಾರೆ. ಅವರು ಸದ್ಯ ಇಂಗ್ಲೆಂಡ್ನ ಅತ್ಯುನ್ನತ ಟಿ20 ಬ್ಯಾಟರ್ ಆಗಿದ್ದಾರೆ. ಡೇವಿಡ್ ಮಲಾನ್ ಹೊರಗುಳಿದರೆ ಅವರ ಸ್ಥಾನವನ್ನು ಫಿಲ್ ಸಾಲ್ಟ್ ತುಂಬುವ ಸಾಧ್ಯತೆಯಿದೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾಗೂ ಗಾಯ
ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತವಾಗಿದ್ದು, ನೆಟ್ಸ್ನಲ್ಲಿ ಅಭ್ಯಾಸದ ಅವಧಿಯಲ್ಲಿ ನಾಯಕ ರೋಹಿತ್ ಶರ್ಮಾ ಅವರು ಮುಂಗೈ ಗಾಯಕ್ಕೆ ತುತ್ತಾಗಿದ್ದಾರೆ. ಪ್ರಬಲವಾದ ಹೊಡೆತ ಅನುಭವಿಸಿದ ಕಾರಣ ಭಾರತೀಯ ತಂಡವು ಮಂಗಳವಾರ ಬೆಳಗ್ಗೆ ದೊಡ್ಡ ಆತಂಕ ಅನುಭವಿಸಿದೆ.
ರೋಹಿತ್ ಶರ್ಮಾ ಇಂಡಿಯನ್ ನೆಟ್ ಸೆಷನ್ನಲ್ಲಿ ಎಸ್ ರಘು ಅವರಿಂದ ಸಾಂಪ್ರದಾಯಿಕ ಥ್ರೋಡೌನ್ಗಳನ್ನು ಎದುರಿಸುತ್ತಿದ್ದಾಗ ಒಂದು ಶಾರ್ಟ್ ಬಾಲ್ ಅವರ ಬಲ ಮುಂದೋಳಿಗೆ ಬಡಿತು ಮತ್ತು ಅವರು ತಕ್ಷಣವೇ ಭಾರಿ ನೋವನ್ನು ಅನುಭವಿಸಿದರು, ಆಗ ಅಭ್ಯಾಸ ತೊರೆದು ವಿಶ್ರಾಂತಿ ಪಡೆದರು.
ರೋಹಿತ್ ಶರ್ಮಾ ಶಾರ್ಟ್ ಆರ್ಮ್ ಫುಲ್ ಮಾಡಲು ಪ್ರಯತ್ನಿಸಿದರು. ಆದರೆ 150 ಪ್ಲಸ್ ವೇಗದಲ್ಲಿ 18 ಯಾರ್ಡ್ಗಳಿಂದ ಎಸೆಯಲ್ಪಟ್ಟ ಥ್ರೋಡೌನ್ ಬಾಲ್ ಅವನ ಮುಂಗೈಗೆ ಬಡಿಯಿತು. ಟಿ20 ವಿಶ್ವಕಪ್ಗೂ ಮುನ್ನ ಭಾರತ ತಂಡ ಗಾಯಕ್ಕೆ ತುತ್ತಾಗಿತ್ತು ಮತ್ತು ಕೆಲವು ಆಟಗಾರರನ್ನು ಬದಲಿಸಲಾಗಿತ್ತು. ಇದೀಗ ಮಹತ್ವದ ಪಂದ್ಯಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾನೇ ಗಾಯಗೊಂಡಿರುವು ಭಾರತೀಯ ಪಾಳಯದಲ್ಲಿ ಆತಂಕ ಮೂಡಿಸಿದೆ.


Click it and Unblock the Notifications












