For Quick Alerts
ALLOW NOTIFICATIONS  
For Daily Alerts
 

IND vs ENG: ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ನಂತರ ಬಿಸಿಸಿಐ ಅಧ್ಯಕ್ಷ ಗಂಗೂಲಿ ಪ್ರತಿಕ್ರಿಯೆ ಏನಿತ್ತು?

IND vs ENG: BCCI President Sourav Gangulys Reaction After India Winning The Series Against England

ಭಾರತೀಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಅಜೇಯ 125 ರನ್ ಮತ್ತು ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರೊಂದಿಗಿನ 133 ರನ್‌ಗಳ ಜೊತೆಯಾಟದ ಸಹಾಯದಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯವನ್ನು ಜಯಿಸಿತು.

ರಿಷಭ್ ಪಂತ್- ಹಾರ್ದಿಕ್ ಪಾಂಡ್ಯ ಜುಗಲ್‍ಬಂದಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 260 ರನ್ ಯಶಸ್ವಿಯಾಗಿ ಚೇಸ್ ಮಾಡಲು ಸಹಾಯ ಮಾಡಿತು ಮತ್ತು ಸರಣಿಯನ್ನು 2-1ರಿಂದ ಗೆದ್ದುಕೊಂಡಿತು.

ಆಲ್‌ರೌಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ (4/24) ಮತ್ತು ಸ್ಪಿನ್ನರ್ ಯುಜ್ವೇಂದ್ರ ಚಾಹಲ್ (3/60) ಅವರ ಕೆಲವು ಅದ್ಭುತ ಸ್ಪೆಲ್‌ಗಳಿಂದ ಆತಿಥೇಯ ಇಂಗ್ಲೆಂಡ್ 259 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ (60), ಜೇಸನ್ ರಾಯ್ (41) ಮತ್ತು ಮೊಯಿನ್ ಅಲಿ (34) ಆತಿಥೇಯರ ಪರವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಭಾರತ ತಂಡವನ್ನು ಅಭಿನಂದಿಸಿದ ಸೌರವ್ ಗಂಗೂಲಿ

ಭಾರತ ತಂಡವನ್ನು ಅಭಿನಂದಿಸಿದ ಸೌರವ್ ಗಂಗೂಲಿ

ಇಂಗ್ಲೆಂಡ್ ವಿರುದ್ಧ ಸರಣಿಯ ಜಯದ ನಂತರ ಪ್ರಸ್ತುತ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರು ಭಾರತ ತಂಡವನ್ನು ಅಭಿನಂದಿಸಿದ್ದಾರೆ ಮತ್ತು ಅವರ (ಇಂಗ್ಲೆಂಡ್) ನೆಲದಲ್ಲಿ ಪಂದ್ಯ ಗೆಲ್ಲುವುದು ಸುಲಭವಲ್ಲ ಎಂದು ಹೇಳಿದ್ದಾರೆ.

ಟ್ವಿಟ್ಟರ್‌ನಲ್ಲಿ ಸೌರವ್ ಗಂಗೂಲಿ, ಭಾರತ ತಂಡದ ಪ್ರಮುಖ ಆಟಗಾರರನ್ನು ಶ್ಲಾಘಿಸಿದರು ಮತ್ತು ಪ್ರವಾಸದಿಂದ ಇಬ್ಬರು ಅತ್ಯುತ್ತಮ ಭಾರತೀಯ ಆಟಗಾರರಾದ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ವಿಶೇಷ ಗಮನ ನೀಡಿದರು.

ಇಂಗ್ಲೆಂಡ್‌ಗೆ ಸರಣಿ ಗೆಲ್ಲಲು ಬಿಡಲಿಲ್ಲ

ಇಂಗ್ಲೆಂಡ್‌ಗೆ ಸರಣಿ ಗೆಲ್ಲಲು ಬಿಡಲಿಲ್ಲ

ಮೂಲತಃ 2021ರ ಬೇಸಿಗೆಯಲ್ಲಿ ಪ್ರಾರಂಭವಾದ ಇಂಗ್ಲೆಂಡ್‌ನ ಭಾರತ ಪ್ರವಾಸವು ವೇಳಾಪಟ್ಟಿ ಮತ್ತು ಕೋವಿಡ್ -19 ತೊಡಕುಗಳಿಂದ ಒಂದು ವರ್ಷದವರೆಗೆ ಎಳೆಯಲ್ಪಟ್ಟಿತು.

ಈ 2021-2022ರ ಇಂಗ್ಲೆಂಡ್ ಪ್ರವಾಸವು ಭಾರತಕ್ಕೆ ಅತ್ಯಂತ ಯಶಸ್ವಿಯಾಗಿದೆ. ಅವರು ಟೆಸ್ಟ್ ಸರಣಿಯನ್ನು 2-2ರಿಂದ ಡ್ರಾ ಮಾಡಿಕೊಂಡರು ಮತ್ತು ಟಿ20 ಮತ್ತು ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದರು. ಭಾರತ ತಂಡ ಯಾವುದೇ ಮಾದರಿಯಲ್ಲಿ ಇಂಗ್ಲೆಂಡ್‌ಗೆ ಸರಣಿ ಗೆಲ್ಲಲು ಬಿಡಲಿಲ್ಲ ಮತ್ತು ಅದು ಕೂಡ ಇಂಗ್ಲೆಂಡ್‌ನ ಮೈದಾನಗಳಲ್ಲಿ ಎನ್ನುವುದು ಇನ್ನೂ ವಿಶೇಷವಾಗಿದೆ.

ಗಮನ ಸೆಳೆದ ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್

ಗಮನ ಸೆಳೆದ ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್

2021ರಲ್ಲಿ ಇಂಗ್ಲೆಂಡ್‌ನಲ್ಲಿ ಆಡಿದ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ ನಂತರ ಇಂಗ್ಲೆಂಡ್ ದೇಶವನ್ನು ತೊರೆಯುವಾಗ ಭಾರತ 2-1ರಲ್ಲಿ ಮುನ್ನಡೆ ಸಾಧಿಸಿತ್ತು. ಮರುನಿಗದಿಪಡಿಸಲಾದ ಐದನೇ ಟೆಸ್ಟ್ ಪಂದ್ಯದಲ್ಲಿ ಸೋಲಿನೊಂದಿಗೆ ಆರಂಭಗೊಂಡರೂ, ಭಾರತವು ತನ್ನ ಎಂದಿನ ರೀತಿಯಲ್ಲಿ ಮರಳಿತು. ಜೋಸ್ ಬಟ್ಲರ್ ನಾಯಕತ್ವದ ವೈಟ್-ಬಾಲ್ ತಂಡದ ವಿರುದ್ಧ ಪ್ರಬಲ ಪ್ರದರ್ಶನವನ್ನು ನೀಡಿತು.

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಉತ್ತಮ ಪ್ರದರ್ಶನ ನೀಡಿ ಸ್ಟಾರ್‌ಗಳಾಗಿ ಗಮನ ಸೆಳೆದರು. ಅದೇ ರೀತಿ ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಸರಣಿಯುದ್ದಕ್ಕೂ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು.

ವೆಸ್ಟ್ ಇಂಡೀಸ್‌ ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ

ವೆಸ್ಟ್ ಇಂಡೀಸ್‌ ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ

ಅರ್ಶ್‌ದೀಪ್ ಸಿಂಗ್, ದೀಪಕ್ ಹೂಡಾ ಅವರಂತಹ ಬಹು-ಮಾದರಿ ಪ್ರವಾಸದ ನಂತರ ಭಾರತ ತಂಡಕ್ಕೆ ಸಾಕಷ್ಟು ಧನಾತ್ಮಕ ಅಂಶಗಳನ್ನು ನೀಡಿದರು. ತಂಡದಲ್ಲಿ ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲು ಹೆಚ್ಚು ಸಿದ್ಧರಾಗಿದ್ದಾರೆ ಎಂದು ತೋರಿಸುತ್ತದೆ.

ಭಾರತ ಕ್ರಿಕೆಟ್ ತಂಡ ಮುಂದಿನ ಸರಣಿಗಾಗಿ ವೆಸ್ಟ್ ಇಂಡೀಸ್‌ಗೆ ತೆರಳಲಿದ್ದು, ಅಲ್ಲಿ ಶಿಖರ್ ಧವನ್ ನಾಯಕತ್ವದಲ್ಲಿ ಏಕದಿನ ಸರಣಿಯನ್ನು ಆಡಲಿದೆ. ನಂತರ ರೋಹಿತ್ ಶರ್ಮಾ ಟಿ20 ಸರಣಿಗೆ ಮರಳಲಿದ್ದಾರೆ ಮತ್ತು ಅವರು ನಾಯಕತ್ವದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಇಡೀ ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿರುವುದರಿಂದ ತಂಡದಿಂದ ಇಲ್ಲದಿರುವ ಪ್ರಮುಖ ಆಟಗಾರನಾಗಿ ಉಳಿಯಲಿದ್ದಾರೆ.

Story first published: Monday, July 18, 2022, 16:36 [IST]
Other articles published on Jul 18, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+