ರಿಷಭ್ ಪಂತ್ ಏಕಾಂಗಿ ಹೋರಾಟ ನಡೆಸಬೇಕಿದೆ!
ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಜವಾಬ್ದಾರಿಯುತ ಆಟದ ನೆರವಿನಿಂದ ಕೊಂಚ ಉತ್ತಮ ಸ್ಥಿತಿಯನ್ನು ತಲುಪಿರುವ ಟೀಮ್ ಇಂಡಿಯಾ ಪರ ಇದೀಗ ಬ್ಯಾಟ್ಸ್ಮನ್ ಎಂದು ಉಳಿದುಕೊಂಡಿರುವುದು ಕೇವಲ ರಿಷಭ್ ಪಂತ್ ಮಾತ್ರ! ಹೀಗಾಗಿ ರಿಷಭ್ ಪಂತ್ ಸದ್ಯ ಏಕಾಂಗಿ ಹೋರಾಟ ನಡೆಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಟೀಮ್ ಇಂಡಿಯಾ ತಂಡದ ಬೌಲರ್ಗಳು ರಿಷಭ್ ಪಂತ್ಗೆ ಸಾಥ್ ನೀಡುತ್ತಾರಾ ಅಥವಾ ಬೇಗ ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ತಂಡಕ್ಕೆ ಗೆಲುವಿನ ಹಾದಿಯನ್ನು ಸುಗಮ ಮಾಡಿಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಅಶ್ವಿನ್ ಅನುಪಸ್ಥಿತಿ ಈಗ ತಲೆದೋರಿದೆ!
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಕಳೆದುಕೊಂಡು 181 ರನ್ ಕಲೆ ಹಾಕಿರುವ ಟೀಮ್ ಇಂಡಿಯಾಗೆ ಸದ್ಯ ರವಿಚಂದ್ರನ್ ಅನುಪಸ್ಥಿತಿ ಸಮಸ್ಯೆಯಾಗಿ ಕಾಡಲಾರಂಭಿಸಿದೆ ಎಂದರೆ ತಪ್ಪಾಗಲಾರದು. ಆಲ್ರೌಂಡರ್ ರವೀಂದ್ರ ಜಡೇಜಾ ಕೂಡಾ ಕೈಕೊಟ್ಟಿದ್ದು ಇದೀಗ ರಿಷಭ್ ಪಂತ್ ಜೊತೆ ನಿಂತು ಹೋರಾಟ ನಡೆಸುವ ಆಟಗಾರರು ಯಾರೂ ಇಲ್ಲ. ಹೀಗಾಗಿ ರವಿಚಂದ್ರನ್ ಅಶ್ವಿನ್ ಏನಾದರೂ ತಂಡದಲ್ಲಿ ಇದ್ದಿದ್ದರೆ ಇನ್ನೊಂದಷ್ಟು ಓವರ್ಗಳ ಕಾಲ ಇಂಗ್ಲೆಂಡ್ ಬೌಲರ್ಗಳಿಗೆ ಒತ್ತಡ ಹೇರಿ ರನ್ ಕಲೆ ಹಾಕಬಹುದಿತ್ತು ಮತ್ತು ಬೌಲಿಂಗ್ನಲ್ಲೂ ಇಂಗ್ಲೆಂಡ್ ತಂಡವನ್ನು ಕಟ್ಟಿ ಹಾಕಬಹುದಿತ್ತು.
ಬೌಲರ್ಗಳ ಮೇಲೆ ಅವಲಂಬಿತವಾಗಿದೆ ಎರಡನೇ ಟೆಸ್ಟ್!
ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ 6 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿದ್ದು ಇನ್ನುಳಿದ ಆಟಗಾರರ ಪೈಕಿ ರಿಷಭ್ ಪಂತ್ ಹೊರತುಪಡಿಸಿ ಬೇರೆ ಯಾವುದೇ ಆಟಗಾರ ಕೂಡ ಬ್ಯಾಟ್ಸ್ಮನ್ ಅಲ್ಲ. ಹೀಗಾಗಿ ಸದ್ಯ ಭಾರತ ಉತ್ತಮ ರನ್ ಕಲೆ ಹಾಕಬೇಕೆಂದರೆ ಬೌಲರ್ಗಳು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಲೇಬೇಕಿದೆ. ಅಷ್ಟೇ ಅಲ್ಲದೆ ಭಾರತ ನೀಡುವ ಗುರಿಯನ್ನು ಬೆನ್ನತ್ತುವ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕುವ ಜವಾಬ್ದಾರಿಯೂ ಸಹ ಇದೀಗ ಭಾರತೀಯ ಬೌಲರ್ಗಳ ಮೇಲಿದೆ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯ ಇದೀಗ ಸಂಪೂರ್ಣವಾಗಿ ಭಾರತೀಯ ಬೌಲರ್ಗಳ ಮೇಲಿದೆ.