For Quick Alerts
ALLOW NOTIFICATIONS  
For Daily Alerts
 

IND vs SA: ಭಾರತದ ಸೋಲಿಗೆ ನಿಖರ ಕಾರಣ ತಿಳಿಸಿದ ಸಚಿನ್ ತೆಂಡೂಲ್ಕರ್

ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಮೂರು ದಿನಗಳ ಅವಧಿಯೊಳಗೆ ಮುಕ್ತಾಯಗೊಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ಪ್ರವಾಸಿ ಭಾರತ ತಂಡದ ವಿರುದ್ಧ ಇನ್ನಿಂಗ್ಸ್ ಹಾಗೂ 32 ರನ್‌ಗಳಿಂದ ಅದ್ಭುತ ಗೆಲುವು ಸಾಧಿಸಿತು.

2023ರ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಮರೆಯಲಾಗದ ಸೋಲು ಅನುಭವಿಸಿ, ವಿದಾಯ ಹೇಳಿತು. ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಹೋರಾಟದಲ್ಲಿ ಭಾರತ ತಂಡವು ಉತ್ತಮ ಪ್ರದರ್ಶನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿತ್ತು.

IND vs SA 1st Test: Sachin Tendulkar Explains the Exact Reason Behind Indias Defeat Against South Africa

ಆದರೆ, ಹರಿಣಗಳ ನಾಡಿನಲ್ಲಿ ಕಳಪೆ ಫಲಿತಾಂಶ ಎಂಬಂತೆ ಪ್ರದರ್ಶನ ನೀಡಿದರು ಎಂದು ಹೇಳಬಹುದು. ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಆಲೌಟ ಆದ ನಂತರ, ಡೀನ್ ಎಲ್ಗರ್ ಅವರ 185 ರನ್‌ಗಳ ನೆರವಿನಿಂದ ದಕ್ಷಿಣ ಆಫ್ರಿಕಾ 408 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ (76) ಏಕಾಂಗಿ ಹೋರಾಟ ನಡೆಸಿದರು. ಅಂತಿಮವಾಗಿ ಭಾರತ ತಂಡ ಕೇವಲ 131 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಭಾರತ ಮೊದಲ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಮತ್ತು 32 ರನ್‌ಗಳಿಂದ ಸೋತಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಶುಭ್ಮನ್ ಗಿಲ್ (26) ಮಾತ್ರ ಎರಡಂಕಿಯ ಮೊತ್ತಗಳನ್ನು ತಲುಪಿದರು. ಭಾರತದ ನಾಲ್ವರು ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇದೇ ವೇಳೆ ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪಂದ್ಯದ ಕುರಿತು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸಿದ್ದಾರೆ.

"ದಕ್ಷಿಣ ಆಫ್ರಿಕಾ ತಂಡವು ಚೆನ್ನಾಗಿ ಆಡಿದೆ. ಮೊದಲ ಇನ್ನಿಂಗ್ಸ್‌ನ ನಂತರ ದಕ್ಷಿಣ ಆಫ್ರಿಕಾ ತಂಡವು ಅತೃಪ್ತಿ ಹೊಂದುತ್ತದೆ ಎಂದು ನಾನು ಆರಂಭದಲ್ಲಿ ಭಾವಿಸಿದ್ದೆ. ಅವರ ವೇಗದ ದಾಳಿಯು ನಿರೀಕ್ಷೆಗಳನ್ನು ಮೀರಿದೆ, ಪಂದ್ಯ ಮುಂದುವರಿದಂತೆ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲಕರವಾಗಿದ್ದರೂ, 2ನೇ ಇನ್ನಿಂಗ್ಸ್‌ನಲ್ಲಿ ಗಮನಾರ್ಹ ಕೌಶಲ್ಯವನ್ನು ಪ್ರದರ್ಶಿಸಿತು," ಎಂದು ಸಚಿನ್ ತೆಂಡೂಲ್ಕರ್ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

"ನಾನು ವೀಕ್ಷಿಸಿದ ಯಾವುದೇ ಸಂಗತಿಯಿಂದ, ಭಾರತ ತಂಡದ ಆಟಗಾರರ ಶಾಟ್ ಆಯ್ಕೆಯು ಅಪೇಕ್ಷಿತವಾಗಿರುವುದು ಕಂಡಿತು. ಟೆಸ್ಟ್‌ ಪಂದ್ಯದಾದ್ಯಂತ ಡೀನ್ ಎಲ್ಗರ್, ಮಾರ್ಕೊ ಜಾನ್ಸೆನ್, ಬೆಡಿಂಗ್‌ಹ್ಯಾಮ್, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಿಜವಾಗಿಯೂ ಬ್ಯಾಟ್‌ನೊಂದಿಗೆ ನಿರಾಳವಾಗಿದ್ದರು. ತಂತ್ರ ಮತ್ತು ಪರಿಸ್ಥಿತಿಗಳನ್ನು ಸಮತೋಲನದಿಂದ ನ್ಯಾವಿಗೇಟ್ ಮಾಡಿದರು," ಎಂದು ಬರೆದುಕೊಂಡಿದ್ದಾರೆ.

ಈ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ 1-0 ಮುನ್ನಡೆ ಸಾಧಿಸಿತು ಮತ್ತು 31 ವರ್ಷಗಳಲ್ಲಿ ಮೊದಲ ಬಾರಿಗೆ ರೈನ್‌ಬೋ ನಾಡಿನಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುವ ಭಾರತದ ಕನಸುಗಳು ಭಗ್ನಗೊಂಡಿವೆ.

ಕೇಪ್ ಟೌನ್‌ನಲ್ಲಿ ನಡೆಯುವ ಹೊಸ ವರ್ಷದ ಟೆಸ್ಟ್‌ ಪಂದ್ಯದಲ್ಲಿ ಸರಣಿಯನ್ನು ಸಮಬಲಗೊಳಿಸಲು ಯಶಸ್ವಿಯಾದರೆ, ಸರಣಿಯಲ್ಲಿ 1-1 ಅಂತರದಲ್ಲಿ ಡ್ರಾ ಆಗಬಹುದು.

ಭಾರತ ತಂಡವು ಮೊದಲ ಟೆಸ್ಟ್ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ಪ್ರದರ್ಶಿಸಿತು. ಇದು ಮುಂದಿನ ಕಾರ್ಯಯೋಜನೆಯ ಕೊರತೆಯನ್ನು ಸೂಚಿಸುತ್ತದೆ.

ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೋತ ನಾಯಕ ರೋಹಿತ್ ಶರ್ಮಾ ಅವರನ್ನು ಎರಡು ವಾರಗಳ ಹಿಂದೆ ಮುಂಬೈ ಇಂಡಿಯನ್ಸ್ ತಂಡದಿಂದ ನಾಯಕತ್ವದಿಂದ ತೆಗೆದುಹಾಕಲಾಯಿತು. ಇದೀಗ ಟಿ20 ವಿಶ್ವಕಪ್‌ನಲ್ಲಿ ಅವರನ್ನು ನೆಚ್ಚಿನ ನಾಯಕನನ್ನಾಗಿ ಎದುರು ನೋಡುತ್ತಿಲ್ಲ ಎಂಬುದು ಕಳೆದ ಆರರಿಂದ ಏಳು ವಾರಗಳ ಕಾಡುತ್ತಿದೆ.

Story first published: Friday, December 29, 2023, 10:54 [IST]
Other articles published on Dec 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+