
ನಾವು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೇವೆ
"ತಪ್ಪುಗಳು ಸಂಭವಿಸುತ್ತವೆ, ಆದರೆ ನಾವು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೇವೆ," ಎಂದು ಐದನೇ ಮತ್ತು ಅಂತಿಮ ಪಂದ್ಯವನ್ನು ಮಳೆಯಿಂದಾಗಿ ರದ್ದುಗೊಳಿಸಿದ ನಂತರ ಭಾರತದ ಟಿ20 ನಾಯಕ ರಿಷಭ್ ಪಂತ್ ತಿಳಿಸಿದರು.
"ನಾನು ಒಂದೇ ಬಾರಿಗೆ ಇಷ್ಟು ಟಾಸ್ಗಳನ್ನು ಸೋತಿರುವುದು ಇದೇ ಮೊದಲು ಎಂದು ನಾನು ಭಾವಿಸುತ್ತೇನೆ. ಆದರೆ ಅದು ನನ್ನ ನಿಯಂತ್ರಣದಲ್ಲಿಲ್ಲ, ಆದ್ದರಿಂದ ನಾನು ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ," ಎಂದು ಸರಣಿಯಲ್ಲಿ ಎಲ್ಲಾ ಐದು ಪಂದ್ಯಗಳ ಟಾಸ್ಗಳನ್ನು ಕಳೆದುಕೊಂಡ ಅವರ ಕಳಪೆ ಅದೃಷ್ಟದ ಬಗ್ಗೆ ಕೇಳಿದಾಗ ಅವರು ಹೀಗೆ ಹೇಳಿದರು.

ಕೇವಲ 16 ನಿಮಿಷಗಳ ಆಟ ನಡೆಯಿತು
ಇನ್ನು ತಮ್ಮ ವೈಯಕ್ತಿಕ ಫಾರ್ಮ್ ಬಗ್ಗೆ ರಿಷಭ್ ಪಂತ್ ಮಾತನಾಡಿ, "ವೈಯಕ್ತಿಕ ದೃಷ್ಟಿಕೋನದಿಂದ ನಾನು ನನ್ನ ತಂಡವನ್ನು ಗೆಲ್ಲಲು ಹೆಚ್ಚಿನ ಕೊಡುಗೆ ನೀಡಲು ಬಯಸುತ್ತೇನೆ. ಆಟಗಾರ ಮತ್ತು ನಾಯಕನಾಗಿ ನನ್ನ 100 ಪ್ರತಿಶತವನ್ನು ನೀಡುವ ಬಗ್ಗೆ ಮಾತ್ರ ನಾನು ಯೋಚಿಸುತ್ತೇನೆ," ಎಂದರು.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಟಿ20 ಪಂದ್ಯವನ್ನು ಕೇವಲ 3.3 ಓವರ್ಗಳ ಆಟದಲ್ಲಿ ರದ್ದುಗೊಳಿಸಿದ ನಂತರ ಭಾರತ ಮತ್ತು ದಕ್ಷಿಣ ಆಫ್ರಿಕಾ ಪ್ರಶಸ್ತಿಯನ್ನು ಹಂಚಿಕೊಂಡವು.
ಟಾಸ್ ನಂತರ ಶುರುವಾದ ಮಳೆಯು ಆಟವನ್ನು 50 ನಿಮಿಷಗಳಷ್ಟು ವಿಳಂಬಗೊಳಿಸಿತು. ಸ್ವಲ್ಪ ಬಿಡುವು ಕೊಟ್ಟ ನಂತರ ಆಟ ಶುರುವಾಗುತ್ತಿದ್ದಂತೆಯೇ ಮತ್ತೆ ಮಳೆ ಸುರಿಯಲಾರಂಭಿಸಿತು. ಸ್ಥಗಿತಗೊಳಿಸಿದ ಪಂದ್ಯವು ಸಂಜೆ 7:50ಕ್ಕೆ ಪ್ರಾರಂಭವಾಯಿತು, ಆದರೆ ಕೇವಲ 16 ನಿಮಿಷಗಳ ಆಟದಲ್ಲಿ ಭಾರತವು ಎರಡು ವಿಕೆಟ್ಗಳ ನಷ್ಟಕ್ಕೆ 28 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.

ರೋಮಾಂಚಕಾರಿ ಸರಣಿಗೆ ಈ ರೀತಿ ತೆರೆ ಎಳೆದಿರುವುದು ನಿರಾಶಾದಾಯಕ
ಗಾಯಗೊಂಡಿರುವ ಪೂರ್ಣಪ್ರಮಾಣದ ನಾಯಕ ತೆಂಬಾ ಬವುಮಾ ಬದಲಾಗಿ ದಕ್ಷಿಣ ಆಫ್ರಿಕಾದ ನಾಯಕ ಕೇಶವ್ ಮಹಾರಾಜ್, ಈ ರೀತಿಯಲ್ಲಿ ರೋಮಾಂಚಕಾರಿ ಸರಣಿಗೆ ತೆರೆ ಎಳೆದಿರುವುದು ನಿರಾಶಾದಾಯಕ ಎಂದು ಹೇಳಿದರು.
"ರೋಮಾಂಚನಕಾರಿ ಪ್ರವಾಸದ ಅಂತ್ಯಕ್ಕೆ ನಾವು ಸಂಪೂರ್ಣ ಪಂದ್ಯವನ್ನು ಪಡೆಯದೆ ನಿರಾಶೆಗೊಂಡಿದ್ದೇವೆ. ನಾವು ಕೆಲವು ಸಂಯೋಜನೆಗಳನ್ನು ಪ್ರಯತ್ನಿಸಿದ್ದೇವೆ. ಇನ್ನೂ ವಿಶ್ವಕಪ್ ಕೆಲಸ ಪ್ರಗತಿಯಲ್ಲಿದೆ. ನೀವು ಇನ್ನೂ ಬದಲಾವಣೆಗಳನ್ನು ನೋಡಬಹುದು. ಭಾರತ ವಿರುದ್ಧದ ಭವಿಷ್ಯದ ಸರಣಿಯು ಆಸಕ್ತಿದಾಯಕವಾಗಿರುತ್ತದೆ ಎಂದು ನನಗೆ ಖಾತ್ರಿಯಿದ್ದು, ಇದರ ಹಾಗೆ ಆಗುವುದಿಲ್ಲ," ಎಂದರು.
"ನಾವು ಹಿಂದಿನ ಪ್ರವಾಸಗಳಿಂದ ನಮ್ಮ ವಿಶ್ವಾಸವನ್ನು ಹೊಂದಿದ್ದೇವೆ ಮತ್ತು ಅದೇ ಸಮಯದಲ್ಲಿ ನಾವು ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಲು ಬಯಸುವುದಿಲ್ಲ," ಎಂದು ಹಂಗಾಮಿ ನಾಯಕ ಕೇಶವ್ ಮಹಾರಾಜ್ ಹೇಳಿದರು.

ಸರಣಿಶ್ರೇಷ್ಠ ಆಟಗಾರ ಹೆಗ್ಗಳಿಕೆಗೆ ಪಾತ್ರವಾದ ಭುವನೇಶ್ವರ್ ಕುಮಾರ್
ಸರಣಿಶ್ರೇಷ್ಠ ಆಟಗಾರ ಹೆಗ್ಗಳಿಕೆಗೆ ಪಾತ್ರವಾದ ಭಾರತದ ವೇಗಿ ಭುವನೇಶ್ವರ್ ಕುಮಾರ್ ಅವರು 85 ರನ್ಗಳಿಗೆ ಆರು ವಿಕೆಟ್ಗಳನ್ನು ಕಬಳಿಸಿ 4/13 ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಟಿ20 ಸರಣಿಯಲ್ಲಿ ಈ ಪ್ರಶಸ್ತಿಯನ್ನು ಗೆಲ್ಲುವುದು ಯಾವಾಗಲೂ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು.
"ನೀವು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಾಗ, ಅದು ಯಾವಾಗಲೂ ಹೆಮ್ಮೆಯ ಕ್ಷಣವಾಗಿರುತ್ತದೆ ಮತ್ತು ಟಿ20 ಬೌಲರ್ ಆಗಿ ಇದು ಇನ್ನೂ ಉತ್ತಮವಾಗಿದೆ. ನಾನು ಯಾವಾಗಲೂ ನನ್ನ ಬೌಲಿಂಗ್ ಅಥವಾ ನನ್ನ ಫಿಟ್ನೆಸ್ ಬಗ್ಗೆ ಬಲಶಾಲಿಯಾಗುವುದರತ್ತ ಗಮನಹರಿಸುತ್ತೇನೆ".

ಮೊದಲ ಮತ್ತು ಕೊನೆಯ ಎರಡು ಓವರ್ ನಿರ್ಣಾಯಕ
"ನಾನು ಅನೇಕ ವರ್ಷಗಳಿಂದ ಆಡುತ್ತಿದ್ದೇನೆ, ನನ್ನ ಪಾತ್ರ ಯಾವಾಗಲೂ ಒಂದೇ ಆಗಿರುತ್ತದೆ. ಪವರ್ಪ್ಲೇನಲ್ಲಿ ಎರಡು ಓವರ್ ಬೌಲ್, ಕೊನೆಯ ಎರಡು ಓವರ್ ಎರಡು ಬೌಲ್. ಈ ವಿಷಯಗಳು ಯಾವಾಗಲೂ ಒಂದೇ ಆಗಿರುತ್ತವೆ, ಆದರೆ ಹಿರಿಯನಾಗಿ ನಾನು ಯಾವಾಗಲೂ ಯುವಕರಿಗೆ ಸಹಾಯ ಮಾಡುವ ಬಗ್ಗೆ ಯೋಚಿಸುತ್ತೇನೆ," ಎಂದು ಭುವಿ ಅಭಿಪ್ರಾಯಪಟ್ಟರು.
"ನಾಯಕ ನನಗೆ ಪೂರ್ಣ ಅಧಿಕಾರ ಕೊಟ್ಟು ನಿಮಗೆ ಬೇಕಾದುದನ್ನು ಮಾಡು ಎಂದು ಹೇಳಿರುವುದು ನನ್ನ ಅದೃಷ್ಟ, ಆ ನಿಟ್ಟಿನಲ್ಲಿ ನಾನು ಆಶೀರ್ವದಿಸಿದ್ದೇನೆ," ಎಂದು ಭುವನೇಶ್ವರ್ ಕುಮಾರ್ ಹೇಳಿದರು.


Click it and Unblock the Notifications
