
ಈತ ಸರಣಿ ಗೆಲ್ಲಲು ಬಿಡುವುದಿಲ್ಲ
ರಿಷಭ್ ಪಂತ್ ನಾಯಕನಾಗಿದ್ದರೆ ಭಾರತ ಸರಣಿ ಗೆಲ್ಲಲು ಬಿಡುವುದಿಲ್ಲ, ನಾಯಕನಾಗಿ ತಾನೊಬ್ಬ ಅಸಮರ್ಥ ಎಂಬುದನ್ನು ಆತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೇ ಸಾಬೀತುಪಡಿಸಿಕೊಂಡಿದ್ದಾನೆ, ಆದಷ್ಟು ಬೇಗ ಆತನನ್ನು ಬದಲಿಸಬೇಕಾದ ಅಗತ್ಯವಿದೆ ಎಂದು ನೆಟ್ಟಿಗನೋರ್ವ ಬರೆದುಕೊಂಡಿದ್ದಾರೆ.

ಆತ ವಿಕೆಟ್ ಕೀಪರ್ ಆದ ಮಾತ್ರಕ್ಕೆ ಧೋನಿ ಆಗುವುದಿಲ್ಲ
ಮತ್ತೋರ್ವ ನೆಟ್ಟಿಗ ರಿಷಬ್ ಪಂತ್ ಕಳಪೆ ನಾಯಕತ್ವದ ವಿರುದ್ಧ ಕಿಡಿಕಾರಿದ್ದು, ಆತನನ್ನು ಟೀಮ್ ಇಂಡಿಯಾದ ಮುಂದಿನ ನಾಯಕ ಎಂದು ಯಾಕೆ ಬಿಂಬಿಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ, ವಿಕೆಟ್ ಕೀಪರ್ ಆದ ಮಾತ್ರಕ್ಕೆ ಆತ ಧೋನಿಯಂತೆ ಉತ್ತಮ ನಾಯಕನಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಉತ್ತಮ ಗುಣಮಟ್ಟದ ಬೌಲರ್ಗಳನ್ನೂ ಉಪಯೋಗಿಸಲು ಬರುವುದಿಲ್ಲ
ಮತ್ತೋರ್ವ ನೆಟ್ಟಿಗ ರಿಷಬ್ ಪಂತ್ ಕಾಲೆಳೆದಿದ್ದು, ಧನ್ಯವಾದಗಳು ಭಾರತದ ಭವಿಷ್ಯದ ಎಂಎಸ್ ಧೋನಿ ಅವರಿಗೆ, ತಂಡದಲ್ಲಿ ಅತ್ಯುತ್ತಮ ಗುಣಮಟ್ಟದ ಬೌಲರ್ಗಳಿದ್ದರೂ ಅವರನ್ನು ಸರಿಯಾಗಿ ಬಳಸಿಕೊಳ್ಳಲು ಬಂದಿಲ್ಲ ಎಂದು ವ್ಯಂಗ್ಯವಾಡಿ ಟ್ವೀಟ್ ಮಾಡಿದ್ದಾರೆ.


Click it and Unblock the Notifications
