
ಇವರಿಬ್ಬರು ವಿದಾಯ ಹೇಳಿದ್ರೆ ತಂಡದಲ್ಲಿ ಯಾರಿದ್ದಾರೆ?
ಎಂಎಸ್ ಧೋನಿ ವಿದಾಯ ಹೇಳಿದ ನಂತರ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇದ್ದ ಕಾರಣ ತಂಡಕ್ಕೆ ಹಲವಾರು ಗೆಲುವುಗಳನ್ನು ತಂದು ಕೊಟ್ಟರು, ಆದರೆ ಈ ಇಬ್ಬರೂ ವಿದಾಯ ಹೇಳಿದ ನಂತರ ಟೀಮ್ ಇಂಡಿಯಾವನ್ನು ರಕ್ಷಿಸಲು ಯಾರಿದ್ದಾರೆ? ಭಾರತ ತಂಡದ ಭವಿಷ್ಯದ ಬಗ್ಗೆ ಆತಂಕ ಆಗುತ್ತಿದೆ ಎಂದು ನೆಟ್ಟಿಗರೊಬ್ಬರು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ದ್ವಿತೀಯ ಟಿ ಟ್ವೆಂಟಿ ಪಂದ್ಯದ ಫಲಿತಾಂಶ ಹೊರಬಿದ್ದ ನಂತರ ಬರೆದುಕೊಂಡಿದ್ದಾರೆ.

ಪ್ರತಿ ಸೋಲಿನ ನಂತರವೂ ಒಂದೇ ಉತ್ತರ
ಮತ್ತೋರ್ವ ನೆಟ್ಟಿಗ ಟೀಮ್ ಇಂಡಿಯಾ ಪಂದ್ಯ ಸೋತ ಬೆನ್ನಲ್ಲೇ ನಾಯಕ ರಿಷಭ್ ಪಂತ್ ಅವರ ಕಾಲೆಳೆದಿದ್ದು, ರಿಷಭ್ ಪಂತ್ ಪ್ರತಿ ಪಂದ್ಯ ಸೋತ ನಂತರವೂ 'ನಾವು ಇನ್ನೂ ಉತ್ತಮ ಪ್ರದರ್ಶನ ನೀಡಬಹುದಾಗಿತ್ತು, ಮುಂದಿನ ಪಂದ್ಯಗಳಲ್ಲಿ ಪ್ರದರ್ಶನವನ್ನು ಅಭಿವೃದ್ಧಿಪಡಿಸಿಕೊಳ್ಳುತ್ತೇವೆ' ಎಂಬ ಹೇಳಿಕೆಯನ್ನೇ ನೀಡುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಭಾರತದ ಕ್ರಿಕೆಟ್ ಭವಿಷ್ಯ ಸಂಕಷ್ಟದಲ್ಲಿದೆ
ಮತ್ತೋರ್ವ ನೆಟ್ಟಿಗ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕುರಿತಾಗಿಯೇ ಟ್ವೀಟ್ ಮಾಡಿದ್ದು, ಈ ಇಬ್ಬರೂ ವಿದಾಯ ಹೇಳಿದ ನಂತರ ಟೀಮ್ ಇಂಡಿಯಾದ ಭವಿಷ್ಯ ಬಲು ಕಷ್ಟವಾಗಿರಲಿದೆ ಎಂದು ಬರೆದುಕೊಂಡಿದ್ದಾರೆ.
ಹೀಗೆ ಟ್ವಿಟರ್ ವೇದಿಕೆಯಲ್ಲಿ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಯಶಸ್ಸು ಸಾಧಿಸುವುದು ದೂರದ ಮಾತು ಎಂಬಂತೆ ಸಾಲು ಸಾಲು ಟ್ವೀಟ್ ಮಾಡಿ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications
