For Quick Alerts
ALLOW NOTIFICATIONS  
For Daily Alerts
 

IND vs SA: ವಿಕೆಟ್ ಕೀಪಿಂಗ್ ಆಯ್ಕೆ ಮಾಡಿಕೊಳ್ಳಲು ಕಾರಣ ಯಾರೆಂದು ತಿಳಿಸಿದ ರಿಷಭ್ ಪಂತ್

IND vs SA: Rishabh Pant REVEALS Why He Selected Wicket-keeping

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಕೋವಿಡ್ ಕಾರಣದಿಂದ ಆಟಗಾರರ ಮೇಲೆ ಹೇರಿರುವ ನಿರ್ಬಂಧಗಳನ್ನು ತೆಗೆದುಹಾಕಲು ನಿರ್ಧರಿಸಿದ ನಂತರ ಮತ್ತು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮುಂಬರುವ ಸರಣಿಯನ್ನು ಬಯೋಬಬಲ್ ಇಲ್ಲದೇ ನಡೆಸಲು ನಿರ್ಧರಿಸಿದ ನಂತರ ಭಾರತೀಯ ಸ್ಟಾರ್ ಕ್ರಿಕೆಟಿಗ ರಿಷಭ್ ಪಂತ್ ನಿರಾಳ ಭಾವ ವ್ಯಕ್ತಪಡಿಸಿದ್ದಾರೆ.

ದೇಶದಾದ್ಯಂತ ಕೊರೊನಾ ಪ್ರಕರಣಗಳು ಕಡಿಮೆಯಾದ ನಂತರ ಬಯೋಬಬಲ್ ತೆಗೆದುಹಾಕಲು ಬಿಸಿಸಿಐ ಕ್ರಮ ಕೈಗೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯು ಜೂನ್ 9ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಕಾರಣ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಪ್ರಸ್ತುತ ಟೀಮ್ ಇಂಡಿಯಾದೊಂದಿಗೆ ದೆಹಲಿಯಲ್ಲಿದ್ದಾರೆ.

ಬಯೋ-ಬಬಲ್‌ನಿಂದ ಹೊರಬರುವುದು ನಿಜವಾಗಿಯೂ ತುಂಬಾ ತೃಪ್ತಿಕರ

ಬಯೋ-ಬಬಲ್‌ನಿಂದ ಹೊರಬರುವುದು ನಿಜವಾಗಿಯೂ ತುಂಬಾ ತೃಪ್ತಿಕರ

"ಬಯೋ-ಬಬಲ್‌ನಿಂದ ಹೊರಬರುವುದು ನಿಜವಾಗಿಯೂ ತುಂಬಾ ತೃಪ್ತಿಕರವಾಗಿದೆ ಮತ್ತು ಆಶಾದಾಯಕವಾಗಿದೆ. ಇನ್ನು ಮುಂದೆ ಯಾವುದೇ ಬಯೋ-ಬಬಲ್ ವಿಷಯಗಳಿಲ್ಲ, ಹಾಗಾಗಿ ನಾವು ತುಂಬಾ ಅನುಭವಿಸಿದ ನಿರ್ಬಂಧದ ಸಮಯವನ್ನು ನಾನು ಈಗ ಆನಂದಿಸುತ್ತಿದ್ದೇನೆ," ಎಂದರು.

"ನೀವು ವರ್ಷವಿಡೀ ಆಟವಾಡುತ್ತಿರುವಾಗ, ವಿಶೇಷವಾಗಿ ಒತ್ತಡದ ಸಂದರ್ಭದಲ್ಲಿ, ನಿಮ್ಮ ಮನಸ್ಸನ್ನು ವಿಶ್ರಾಂತಿಗೊಳಿಸುವುದು ಮುಖ್ಯ. ನಿಮ್ಮ ಮನಸ್ಸನ್ನು ರಿಫ್ರೆಶ್ ಮಾಡಲು ಸಾಧ್ಯವಾಗದಿದ್ದರೆ, ನೀವು ಯಾವುದೇ ಕೆಲಸದಲ್ಲಿ ನೂರು ಪ್ರತಿಶತ ಪ್ರಯತ್ನ ನೀಡುವುದು ಅಸಾಧ್ಯ. ನಾವು ನಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು," ಎಂದು ರಿಷಭ್ ಪಂತ್ SG ಕ್ರಿಕೆಟ್ ಪಾಡ್‌ಕ್ಯಾಸ್ಟ್‌ಗೆ ತಿಳಿಸಿದರು.

ನನ್ನ ತಂದೆಯೂ ವಿಕೆಟ್-ಕೀಪರ್ ಆಗಿದ್ದರು

ನನ್ನ ತಂದೆಯೂ ವಿಕೆಟ್-ಕೀಪರ್ ಆಗಿದ್ದರು

ಅವರ ಕ್ರಿಕೆಟ್ ಸಾಮರ್ಥ್ಯದ ಬಗ್ಗೆ ಕೇಳಿದಾಗ, ರಿಷಭ್ ಪಂತ್ ಅವರು ವಿಕೆಟ್ ಕೀಪರ್-ಬ್ಯಾಟರ್ ಎಂದು ಕರೆಯಬೇಕೆಂದು ಹೇಳಿದರು. ನಾನು ಯಾವಾಗಲೂ ಮೈದಾನಕ್ಕೆ ಬಂದಾಗಲೆಲ್ಲಾ ನನ್ನ ನೂರಕ್ಕೆ ನೂರು ಪ್ರತಿಶತವನ್ನು ನೀಡಲು ಪ್ರಯತ್ನಿಸುತ್ತೇನೆ. ಆದರೆ ನಾನು ಯಾವಾಗಲೂ ವಿಕೆಟ್-ಕೀಪರ್-ಬ್ಯಾಟ್ಸ್‌ಮನ್ ಆಗಿರುತ್ತೇನೆ. ಏಕೆಂದರೆ ನಾನು ಚಿಕ್ಕವನಿದ್ದಾಗ ನಾನು ಕೀಪಿಂಗ್ ಮಾಡಲು ಪ್ರಾರಂಭಿಸಿದೆ, ಏಕೆಂದರೆ ನನ್ನ ತಂದೆಯೂ ವಿಕೆಟ್-ಕೀಪರ್ ಆಗಿದ್ದರು. ಹೀಗಾಗಿ ನಾನೂ ವಿಕೆಟ್ ಕೀಪಿಂಗ್ ಮಾಡಲು ಪ್ರಾರಂಭಿಸಿದೆ,'' ಎಂದು ಯುವ ಕ್ರಿಕೆಟಿಗ ಬಹಿರಂಗಪಡಿಸಿದರು.

ರಿಷಭ್ ಪಂತ್ ಅವರ ತಂದೆ ರಾಜೇಂದ್ರ ಪಂತ್ ಅವರು 2017ರಲ್ಲಿ ರೂರ್ಕಿಯಲ್ಲಿರುವ ಅವರ ಮನೆಯಲ್ಲಿ 53ನೇ ವಯಸ್ಸಿನಲ್ಲಿ ನಿಧನರಾದರು. ಅವರು ಹೃದಯ ಸ್ತಂಭನದ ಕಾರಣ ನಿದ್ರೆಯಲ್ಲಿದ್ದಾಗಲೇ ನಿಧನರಾದರು.

ಭಾರತ vs ದಕ್ಷಿಣ ಆಫ್ರಿಕಾ ಟಿ20 ಸರಣಿ

ಭಾರತ vs ದಕ್ಷಿಣ ಆಫ್ರಿಕಾ ಟಿ20 ಸರಣಿ

ಎರಡು ತಿಂಗಳ ಐಪಿಎಲ್ 2022ರ ಆವೃತ್ತಿ ನಂತರ, ಭಾರತವು ಆಸ್ಟ್ರೇಲಿಯದಲ್ಲಿ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ತಯಾರಿ ಹಾದಿಗೆ ಮರಳಲಿದೆ. ಇದಕ್ಕೂ ಮುನ್ನ ಭಾರತ ತಂಡ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರದಿಂದ ಪ್ರಾರಂಭವಾಗುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.

ದಾಖಲೆಯ 12-0 ಟಿ20 ಗೆಲುವಿನ ಸರಣಿಯನ್ನು 13-0ಗೆ ಪರಿವರ್ತಿಸಲು ಆತಿಥೇಯರಿಗೆ ಈ ಸರಣಿ ವೇದಿಕೆಯಾಗಿದೆ. ಆದರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ, ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಚಹರ್ ಅವರಂತಹ ಆಟಗಾರರ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ನಾಯಕತ್ವದ ತಂಡಕ್ಕೆ ಈ ಸರಣಿ ಅತ್ಯಂತ ಪ್ರಮುಖವಾಗಿದೆ.

South Africaಗೆ ನಡುಕ ಹುಟ್ಟಿಸಲು Dinesh Karthik ಹೇಗೆ ಪ್ರಾಕ್ಟೀಸ್ ಮಾಡ್ತಿದ್ದಾರೆ ನೋಡಿ | OneIndia Kannada
ಒಮ್ಮೆ ಮಾತ್ರ ಭಾರತದ ಎದುರು ಟಿ20 ಪಂದ್ಯವನ್ನು ಸೋತಿದ್ದಾರೆ

ಒಮ್ಮೆ ಮಾತ್ರ ಭಾರತದ ಎದುರು ಟಿ20 ಪಂದ್ಯವನ್ನು ಸೋತಿದ್ದಾರೆ

ಟೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ ತಮ್ಮ ಸಂಪೂರ್ಣ ಸಾಮರ್ಥ್ಯದ ಮೇಲೆ ಆಡುತ್ತಿದ್ದಾರೆ ಮತ್ತು ಹಿಂದಿನ ಎರಡು ದ್ವಿಪಕ್ಷೀಯ ಪಂದ್ಯಗಳಲ್ಲಿ ಒಮ್ಮೆ ಮಾತ್ರ ಭಾರತದ ಎದುರು ಟಿ20 ಪಂದ್ಯವನ್ನು ಸೋತಿದ್ದಾರೆ. ಆದರೆ ಪ್ರವಾಸಿಗರನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ ಎಂದು ಭಾರತಕ್ಕೆ ಸಂಪೂರ್ಣವಾಗಿ ತಿಳಿದಿದೆ.

Story first published: Tuesday, June 7, 2022, 10:07 [IST]
Other articles published on Jun 7, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+