ಸೆಪ್ಟೆಂಬರ್ 28ರಂದು ತಿರುವನಂತಪುರಂನಲ್ಲಿ ಮೊದಲ ಪಂದ್ಯ
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೆಪ್ಟೆಂಬರ್ 28ರಂದು ತಿರುವನಂತಪುರಂನಲ್ಲಿ ಆಡುವ ಮೂಲಕ ಪ್ರಾರಂಭವಾಗಲಿದೆ. ಎರಡನೇ ಪಂದ್ಯ ಅಕ್ಟೋಬರ್ 2ರಂದು ನಡೆಯಲಿದ್ದು ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಗುವಾಹಟಿಯಲ್ಲಿ ಈ ಪಂದ್ಯ ಆಯೋಜಿಸಲಾಗುತ್ತಿದೆ. ಮೂರನೇ ಟಿ20 ಪಂದ್ಯ ಇಂದೋರ್ನಲ್ಲಿ ನಡೆಯಲಿದೆ. ಏಕದಿನ ಸರಣಿಯ ಮೊದಲ ಪಂದ್ಯ ರಾಂಚಿಯಲ್ಲಿ ನಡೆದರೆ ಎರಡು ಹಾಗೂ ಮೂರನೇ ಪಂದ್ಯಗಳು ದೆಹಲಿಯಲ್ಲಿಯೇ ಆಯೋಜನೆಯಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.
ದಕ್ಷಿಣ ಆಫ್ರಿಕಾ ತಂಡವು ತಿರುವನಂತಪುರಕ್ಕೆ ಆಗಮಿಸಿದೆ
ಭಾನುವಾರದಂದು ದಕ್ಷಿಣ ಆಫ್ರಿಕಾದ ಪುರುಷರ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯು ಗ್ರೀನ್ಫೀಲ್ಡ್ ಕ್ರೀಡಾಂಗಣದಲ್ಲಿ ಮೊದಲ ಟಿ20 ಪಂದ್ಯಕ್ಕಿಂತ ಮುಂಚಿತವಾಗಿ ತಂಡವು ತಿರುವನಂತಪುರಕ್ಕೆ ಆಗಮಿಸಿದೆ ಎಂದು ತಿಳಿಸುವ ಟ್ವೀಟ್ ಅನ್ನು ಪೋಸ್ಟ್ ಮಾಡಿದೆ.
ಟೆಂಬಾ ಬವುಮಾ ಮುಂಬರುವ ಪ್ರವಾಸದ ಬಗ್ಗೆ ಮಾತನಾಡುತ್ತಾ, "ಸುದೀರ್ಘ ಗಾಯದ ನಂತರ ಫಾರ್ಮ್ ಅನ್ನು ಮರಳಿ ಪಡೆಯಲು ಏಕದಿನ ಮತ್ತು ಟಿ20 ಸರಣಿಯನ್ನು ಬಳಸಿಕೊಳ್ಳುವುದಾಗಿ" ಹೇಳಿದರು.
ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಆ ಅವಕಾಶವನ್ನು ಬಳಸುತ್ತೇನೆ
"ನಾವು ಹುಡುಗರನ್ನು ಫಾರ್ಮ್ಗೆ ತರಲು ಬಯಸುತ್ತೇವೆ, ಅವರಲ್ಲಿ ಹೆಚ್ಚಿನವರು ಫಾರ್ಮ್ನಲ್ಲಿದ್ದಾರೆ. ಆದರೆ ನನ್ನಂತಹ ಆಟಗಾರರು, ನಾನು ಕಳೆದ ಮೂರು ತಿಂಗಳುಗಳಿಂದ ಹೊರಗುಳಿದಿದ್ದೇನೆ. ಆದ್ದರಿಂದ ಈಗ ನಾನು ಅದನ್ನು ಎದುರು ನೋಡುತ್ತಿದ್ದೇನೆ. ವೈಯಕ್ತಿಕವಾಗಿ, ನಾನು ಮೈದಾನದಲ್ಲಿ ಇರಲು ಬಯಸುತ್ತೇನೆ ಮತ್ತು ಆಟದ ಸಮಯವನ್ನು ಪಡೆಯಲು ನೋಡುತ್ತೇನೆ. ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಆ ಅವಕಾಶವನ್ನು ಬಳಸುತ್ತೇನೆ," ಎಂದರು.
"ಕಳೆದ ಕೆಲವು ತಿಂಗಳುಗಳು ಗಾಯದ ದೃಷ್ಟಿಯಿಂದ ಅತ್ಯಂತ ಕಠಿಣವಾಗಿತ್ತು ಮತ್ತು ಖಂಡಿತವಾಗಿಯೂ ನಿರಾಶಾದಾಯಕವಾಗಿತ್ತು. ನನ್ನ ಮೊಣಕೈಯಿಂದ ನಾನು ಯಾವಾಗ ಚೇತರಿಸಿಕೊಳ್ಳಲಿದ್ದೇನೆ ಎಂದು ನಿಜವಾಗಿಯೂ ತಿಳಿದಿಲ್ಲದ ಆ ಅವಧಿಯಲ್ಲಿ ಅದು ಮಾನಸಿಕವಾಗಿ ತುಂಬಾ ಕಷ್ಟಕರವಾಗಿತ್ತು," ಎಂದು ಟೆಂಬಾ ಬವುಮಾ ತಿಳಿಸಿದರು.